by admin | ಫೆಬ್ರ 21, 2020 | ಓದಿ ಕಲಿ
ಇಬ್ಬರು ಸೋದರರು ವಾಸಿಸುತ್ತಿದ್ದರು . ಒಬ್ಬ ಧನಿಕ. ಇನ್ನೊಬ್ಬ ಬಡವ . ಒಂದು ಸಾರಿ
ಅವರು ಸಂಧಿಸಿದರು , ವಾಗ್ವಾದದಲ್ಲಿ ತೊಡಗಿದರು . ಬಡವ ಸೋದರ ಹೇಳಿದ : “ ಈ
ಪ್ರಪಂಚದಲ್ಲಿ ಎಷ್ಟು ಕಷ್ಟ ಕಾರ್ಪಣ್ಯಗಳಿವೆ . ಆದರೂ ಸತ್ಯದಲ್ಲಿ ಜೀವನ ನಡೆಸುವುದೇ ಲೇಸು ! ”
- ಧನಿಕ ಹೇಳಿದ : “ ಈ ಕಾಲದಲ್ಲಿ ನೀನು ಎಲ್ಲಿ ಸತ್ಯವನ್ನು ಕಾಯ? ಇಲ್ಲಪ್ಪ, ಈ ಪ್ರಪಂಚ
ದಲ್ಲಿ ಸತ್ಯ ಅನ್ನೋದೇ ಇಲ್ಲ. ಈಗ ಎಲ್ಲೆಲ್ಲೂ ಕಾಣುವುದು ಒಂದೇ – ಅಸತ್ಯ , ಅಸತ್ಯದಲ್ಲಿ ಬಾಳು
ವುದೇ ಲೇಸು ! ”
ಬಡವ ತನ್ನ ವಾದವನ್ನೇ ಸಮರ್ಥಿಸಿದ : “ ಇಲ್ಲ, ಅಣ್ಣ , ಸತ್ಯದಲ್ಲಿ ಬಾಳುವುದೇ ಲೇಸು ! ”
ಆಗ ಧನಿಕ ಹೇಳಿದ : “ ಆಗಲಿ , ಪಣ ಕಟೋಣ. ಜನರ ಬಳಿಗೆ ಹೋಗಿಕೇಳೋಣ. ಯಾರು
ಸಿಕ್ಕಿದರೆ ಅವರನ್ನು ಕೇಳೊಣ. ಹೀಗೆಮೂರು ಮಂದಿಯನ್ನು ಕೇಳೋಣ. ಅವರು ನಿನ್ನ ಪರವಾಗಿ
ಹೇಳಿದರೆ ನನ್ನ ಆಸ್ತಿ ಎಲ್ಲ ನಿನ್ನದು. ಅವರು ನನ್ನ ಪರವಾಗಿ ಹೇಳಿದರೆ ಆಗ ನಿನ್ನ ಆಸ್ತಿಯನ್ನೆಲ್ಲ
ನಾನು ತೆಗೆದುಕೊಳ್ಳುತ್ತೇನೆ. ಆಗಬಹುದಾ ? ”
ಬಡವ ಹೇಳಿದ : “ ಆಗಲಿ ! ”
ಇಬ್ಬರೂ ಮಾರ್ಗದಲ್ಲಿ ಹೊರಟರು . ಹೋಗ್ತಾರೆ, ಹೋಗ್ತಾರೆ. ಅವರಿಗೆ ಒಬ್ಬ ವ್ಯಕ್ತಿ
ಸಿಕ್ಕಿದ. ಅವನು ಕೆಲಸದಿಂದ ಹಿಂದಿರುಗುತ್ತಿದ್ದ. ಅವರು ಅವನನ್ನು ನಿಲ್ಲಿಸಿದರು : “ ನಮಸ್ಕಾರ,
ಸಜ್ಜನನೇ ! ”
“ನಮಸ್ಕಾರ ! ”
“ ನಾವು ನಿನ್ನನ್ನು ಒಂದು ಪ್ರಶ್ನೆ ಕೇಳಬೇಕೂಂತ ... ”
“ಕೇಳಿ ! ಕೇಳಿ ! ”
“ ಈ ಪ್ರಪಂಚದಲ್ಲಿ ಹೇಗೆ ಬಾಳುವುದು ಉತ್ತಮ : ಸತ್ಯದಲೋ ಅಥವಾ ಅಸತ್ಯದಲೋ ? ”
“ ಅಯ್ಯೋ , ಪುಣ್ಯಾತ್ಮರಾ !” ಎಂದು ಹೇಳಿದ ಆ ವ್ಯಕ್ತಿ . ನೀವು ಈ ಕಾಲದಲ್ಲಿ ಸತ್ಯವನ್ನು
ಎಲ್ಲಿ ಕಾಣೀರ? ನೋಡಿ, ನಾನು ಎಷ್ಟು ದುಡಿದರೂ ಎಲ್ಲ ನಿಷ್ಪಲ. ಸಿಗೋ ಅಲ್ಪ ಜೀತದಲ್ಲೂ
ಒಡೆಯ ಬೇರೆ ಒಂದಷ್ಟು ಕಡೀತಾನೆ. ಹೀಗಿರುವಾಗ ಸತ್ಯದಲ್ಲಿ ಎಲ್ಲಿ ಬಾಳೊದು! ಸತ್ಯದಲ್ಲಿ
ಬಾಳೋದಕ್ಕಿಂತ ಅಸತ್ಯದಲ್ಲಿ ಬಾಳೋದೇ ಉತ್ತಮ ! ”
“ನೋಡಿದೆಯಾ, ತಮ್ಮ ” ಅಂದ ಧನಿಕಸೋದರ, “ ನನ್ನ ಮಾತು ನಿಜ ಅನ್ನೋದಕ್ಕೆ ನಿನಗೆ
ಮೊದಲ ಪುರಾವೆ.”
ಬಡವನ ಮುಖ ಸಪ್ಪಗಾಯಿತು. ಅವರು ಮುಂದೆ ಹೋದರು . ಅವರಿಗೆ ಒಬ್ಬ ವರ್ತಕ
ಸಿಕ್ಕಿದ.
“ ನಮಸ್ಕಾರ, ವರ್ತಕ ಶ್ರೇಷ್ಟ !”
“ ನಮಸ್ಕಾರ !”
“ ನಾವು ನಿಮ್ಮನ್ನು ಒಂದು ಪ್ರಶ್ನೆ ಕೇಳಬೇಕೂಂತ ...”
“ಕೇಳಿ, ಕೇಳಿ ! ”
“ ಈ ಪ್ರಪಂಚದಲ್ಲಿ ಹೇಗೆ ಬಾಳುವುದು ಉತ್ತಮ : ಸತ್ಯದ ಅಥವಾ ಅಸತ್ಯದಲ್ಲೂ ? ”
“ ಅಯ್ಯೋ , ಪುಣ್ಯಾತ್ಮರಾ ! ಈ ಕಾಲದಲ್ಲಿ ಸತ್ಯದಿಂದ ಬಾಳೊದು ಎಲ್ಲಿ ಸಾಧ್ಯ ? ಮಾರಾಟ
ಮಾಡಬೇಕಾದರೆ ನೂರು ಬಾರಿ ಸುಳ್ಳು ಹೇಳಬೇಕಾಗುತ್ತೆ , ನೂರು ಬಾರಿ ವಂಚನೆ ಮಾಡ
ಬೇಕಾಗುತ್ತೆ . ಇಲ್ಲದಿದ್ದರೆ ಮಾರಾಟವನ್ನೇ ಮಾಡೋಕಾಗೊಲ್ಲ.”
ಹಾಗೆಂದು ಅವನು ಮುಂದೆ ಹೊರಟ.
“ನೋಡಿದೆಯಾ, ತಮ್ಮ , ಎರಡನೆಯ ಪುರಾವೆ ನನ್ನ ಮಾತಿಗೆ ” ಎಂದ ಧನಿಕ.
ಬಡವನ ಮನಸ್ಸು ಇನ್ನಷ್ಟು ಕುಂದಿತು . ಅವರು ಮುಂದೆ ಹೋದರು .
ಹೋಗುತ್ತಾರೆ, ಹೋಗುತ್ತಾರೆ, ಕೊನೆಗೆ ಒಬ್ಬ ಸಾಹುಕಾರನನ್ನು ಸಂಧಿಸುತ್ತಾರೆ.
“ನಮಸ್ಕಾರ , ಸ್ವಾಮಿ ! ”
“ನಮಸ್ಕಾರ! ”
“ ನಾವು ನಿಮ್ಮನ್ನು ಒಂದು ಮಾತು ಕೇಳಬೇಕೂಂತ ...”
“ಕೇಳಿ, ಕೇಳಿ ! ”
“ ಈ ಪ್ರಪಂಚದಲ್ಲಿ ಹೇಗೆ ಬಾಳುವುದು ಉತ್ತಮ : ಸತ್ಯದ ಅಥವಾ ಅಸತ್ಯದಲ್ಲೋ ? ”
“ ಅಯ್ಯೋ , ಪುಣ್ಯಾತ್ಮರಾ ! ಈ ಪ್ರಪಂಚದಲ್ಲಿ ಸತ್ಯ ಅನ್ನೋದಾದರೂ ಎಲ್ಲಿದೆ? ಸತ್ಯದಲ್ಲಿ
ಬಾಳೊಕೆ ಎಂದಿಗೂ ಆಗದು . ನಾನೇನಾದರೂ ಸತ್ಯದಲ್ಲಿ ಬಾಳಿದ್ದರೆ, ಹೀಗೆ...”
ಅವನು ತನ್ನ ಮಾತು ಮುಗಿಸಲೇ ಇಲ್ಲ, ಮುಂದೆ ಹೋದ.
“ನೋಡಿದೆಯಾ, ತಮ್ಮ ! ನಡಿ, ಮನೆಗೆ ಹೋಗೋಣ” ಎಂದ ಧನಿಕ. “ ನಿನ್ನ ಆಸ್ತಿಯ
ನ್ನೆಲ್ಲ ನನಗೆ ಕೊಡು! ”
ಬಡವ ಮನೆಗೆ ಹೋದ. ಅವನು ದುಃಖಾಕ್ರಾಂತನಾದ. ಧನಿಕ ಅಣ್ಣ ಬಂದ. ತನ್ನ ಬಡ
ತಮ್ಮನ ಖಾಲಿ ಮನೆಯೊಂದನ್ನು ಬಿಟ್ಟು ಅವನಲ್ಲಿದ್ದ ಎಲ್ಲ ಆಸ್ತಿಯನ್ನೂ ಕೊಂಡೊಯ್ದ .
“ನೀನು ಸ್ವಲ್ಪ ಕಾಲ ಬೇಕಾದರೆ ಇಲ್ಲೇ ವಾಸವಾಗಿರು . ಮನೆ ಸದ್ಯಕ್ಕೆ ನನಗೆ ಬೇಡ. ಆಮೇಲೆ
ಎಲ್ಲಾದರೂ ಬೇರೆ ಕಡೆಗೆ ಹೋಗುವಿಯಂತೆ ” ಎಂದ ಆ ಧನಿಕ ಸೋದರ .
ಹೀಗೆ ದುಃಖಭರಿತನಾಗಿ ತಲೆ ತಗ್ಗಿಸಿ ತನ್ನ ಕುಟುಂಬದೊಂದಿಗೆ ಬಡವ ಸೋದರ ಮನೆಯಲ್ಲಿ
ಕುಳಿತ . ಮನೆಯಲ್ಲಿ ತಿನ್ನಲು ಒಂದು ಚೂರುರೊಟ್ಟಿಯೂ ಇಲ್ಲ. ಕೆಲಸಕ್ಕೂ ಎಲ್ಲಿಗೂ ಹೋಗುವ
ಹಾಗಿಲ್ಲ – ಆ ವರ್ಷ ಸುಗ್ಗಿ ಬೇರೆ ಏನೇನೂ ಚೆನ್ನಾಗಿರಲಿಲ್ಲ. ಬಡತನದ ಬವಣೆ ಸಹಿಸಲಸಾಧ್ಯ
ವಾಗಿತ್ತು ... ಮಕ್ಕಳು ಅಳುತ್ತಿದ್ದರು ... ಅವನು ಒಂದು ಅಳತೆಪಾತ್ರೆ ತೆಗೆದುಕೊಂಡು ತನ್ನ ಧನಿಕ
ಅಣ್ಣನ ಮನೆಗೆ ಹೋದ.
“ ಅಣ್ಣ ! ಈ ಅಳತೆಪಾತ್ರೆಯಲ್ಲಿ ಒಂದಿಷ್ಟು ಏನಾದರೂ ಹಿಟ್ಟು ಕೊಡು. ನಮಗೆ ತಿನ್ನೋಕೆ
ಏನೂ ಇಲ್ಲ. ಮಕ್ಕಳು ಹಸಿವಿನಿಂದ ಅಳುತ್ತಿದಾರೆ !”
ಅವನು ಹೇಳಿದ : “ನಿನ್ನ ಒಂದು ಕಣ್ಣು ಕೊಡು. ನಿನಗೆ ಒಂದು ಅಳತೆ ಹಿಟ್ಟು ಕೊಡುತ್ತೇನೆ. ”
ಬಡವ ಯೋಚಿಸಿದ, ಯೋಚಿಸಿದ. ವಿಧಿಯಿಲ್ಲದೆ ಒಪ್ಪಿಕೊಂಡ.
“ ಹುಂ . ತಗೋ ನನ್ನ ಒಂದು ಕಣ್ಣು . ಏನನ್ನಾದರೂ ಒಂದಿಷ್ಟು ತಿನ್ನಲುಕೊಡು. ದೇವರಿಗೆ
ಪ್ರೀತಿಯಾಗಲಿ ! ”
ಧನಿಕ ಬಡವನ ಒಂದು ಕಣ್ಣು ಕಳಚಿಕೊಂಡು ಅವನಿಗೆ ಒಂದು ಅಳತೆ ಹುಳು ಹತ್ತಿದ
ಹಿಟ್ಟು ಕೊಟ್ಟ . ಅದನ್ನು ತೆಗೆದುಕೊಂಡು ಬಡವ ತನ್ನ ಮನೆಗೆ ಹೋದ. ಹೆಂಡತಿ ಅವನನ್ನು
ನೋಡಿದ್ದೇ ಕೂಗಿಕೊಂಡಳು :
“ ಏನು ಮಾಡಿಬಿಟ್ಟೆ ನೀನು ? ಎಲ್ಲಿ ನಿನ್ನ ಕಣ್ಣು ? ”
“ಓಹ್ , ಏನು ಮಾಡೋದು? ಅಣ್ಣ ತೆಗೆದುಕೊಂಡ !”
ಹಾಗೆಂದು ಅವನು ಅವಳಿಗೆ ಎಲ್ಲವನ್ನೂ ವಿವರಿಸಿದ. ಎಲ್ಲರೂ ಕೂತು ಅತ್ತರು. ಆಮೇಲೆ
ಜೀವನ ನಡೆಸಿಕೊಂಡು ಹೋದರು . ಅವನು ತಂದ ಹಿಟ್ಟನ್ನೇ ತಿಂದುಕೊಂಡು ಜೀವಿಸುತ್ತಿದ್ದರು .
ಒಂದು ವಾರವೋ ಏನೋ ಕಳೆಯಿತು. ಒಂದು ಅಳತೆ ಒಟ್ಟು ಎಷ್ಟು ದಿವಸ ಬರುತ್ತೆ ? ಬರಿ
ದಾಯಿತು. ಬಡವ ಮತ್ತೆ ಅಳತೆಪಾತ್ರೆ ಹಿಡಿದುಕೊಂಡು ಸೋದರನ ಬಳಿಗೆ ಹೋದ.
“ಪ್ರೀತಿಯ ಅಣ್ಣ , ಒಂದಿಷ್ಟು ಹಿಟ್ಟು ಕೊಡು! ನೀನು ಕೊಟ್ಟಿದ್ದೆಲ್ಲ ಮುಗಿದು ಹೋಯಿತು. ”
“ ನಿನ್ನ ಇನ್ನೊಂದು ಕಣ್ಣನ್ನೂ ಕಳಚಿಕೊಡು. ಇನ್ನೊಂದು ಅಳತೆ ಹಿಟ್ಟು ತಗೊಂಡುಹೋಗು! ”
“ ಅದು ಹೇಗೆ ಸಾಧ್ಯ , ಅಣ್ಣ ? ಕಣ್ಣಿಲ್ಲದೆ ಈ ಪ್ರಪಂಚದಲ್ಲಿ ವಾಸಮಾಡೋದು ಹೇಗೆ ?
ಒಂದನ್ನಾಗಲೇ ತೆಗೆದುಕೊಂಡಿದೀಯಲ್ಲ. ದಯವಿಟ್ಟು ಇನ್ನೂ ಒಂದು ಅಳತೆ ಹಿಟ್ಟು ಸುಮ್ಮನೆ
ಕೊಡು! ”
“ ಇಲ್ಲ. ಸುಮ್ಮನೆ ನಾನು ಕೊಡೋದಿಲ್ಲ. ಕಣ್ಣು ಕಳಚಿಕೊಡು. ಆಗಷ್ಟೆ ಇನ್ನೊಂದು ಅಳತೆ
ಹಿಟ್ಟು ನಿನಗೆ ಕೊಡುತ್ತೇನೆ.”
ಬಡವನಿಗೆ ತುಂಬ ದುಃಖವಾಯಿತು. ಆದರೆ ಮಾಡುವುದೇನು ? “ಸರಿ ” ಅವನೆಂದ.
“ಕಳಚಿಕೊ , ಇನ್ನೊಂದು ಕಣ್ಣನ್ನೂ , ದೇವರಿಗೆ ಪ್ರೀತಿಯಾಗಲಿ ! ”
ಧನಿಕ ಸೋದರ ಅವನ ಇನ್ನೊಂದು ಕಣ್ಣನ್ನೂ ಕಳಚಿಕೊಂಡು ಇನ್ನೊಂದು ಅಳತೆ ಹಿಟ್ಟು
ಕೊಟ್ಟ. ಕುರುಡ ಅದನ್ನು ತೆಗೆದುಕೊಂಡು ಮನೆಯ ಕಡೆಗೆ ತಿರುಗಿದ. ಬೇಲಿಯ ಕಟಕಟೆಯನ್ನೇ
ಹಿಡಿದುಕೊಂಡು ತಡವರಿಸಿಕೊಂಡು ಹೇಗೋ ಮನೆಯವರೆಗೂ ಬಂದ . ಹಿಟ್ಟನ್ನೂ ಹೊತ್ತು
ತಂದ. ಹೆಂಡತಿ ಅವನನ್ನು ಕಂಡವಳೇ ಸಿಡಿಲು ಬಡಿದವಳಂತಾದಳು .
“ ಏನು ನೀನು ? ಎಂಥ ದುಃಖ ತಂದುಕೊಂಡೆಯಲ್ಲ! ಕಣ್ಣಿಲ್ಲದೆ ಜೀವಿಸುವುದು ಹೇಗೆ ?
ನಾವು ಹಿಟ್ಟಿಲ್ಲದೆಯೇ ಹೇಗೋ ಇದ್ದುಕೊಂಡಿರಬಹುದಿತ್ತು . ಆದರೆ ಈಗ...”
ಅಳುತ್ತಾಳೆ, ಗೋಳಾಡುತ್ತಾಳೆ. ಅವಳ ಆಕ್ರಂದನವನ್ನು ಮಾತುಗಳಲ್ಲಿ ವರ್ಣಿಸಿ ತಿಳಿಸು
ವುದು ಸಾಧ್ಯವಿಲ್ಲ.
ಕುರುಡ ಹೇಳಿದ: “ ಅಳಬೇಡಕಣೇ ! ಏನು ಈ ಪ್ರಪಂಚದಲ್ಲಿ ನಾನೊಬ್ಬನೇಯೇ ಕಣ್ಣಿಲ್ಲದೆ
ಇರುವವನು ! ಎಷ್ಟೋ ಮಂದಿ ಕುರುಡರಿದ್ದಾರೆ. ಅವರೆಲ್ಲ ದೃಷ್ಟಿ ಇಲ್ಲದೆ ಜೀವಿಸುತ್ತಿಲ್ಲವೇ ? ”
ಸರಿ, ಅವರು ಹೀಗೇ ಸ್ವಲ್ಪ ಕಾಲ ತಳ್ಳಿದರು . ಅವನು ತಂದಿದ್ದ ಆ ಹಿಟ್ಟೂ ಮುಗಿಯಿತು.
ಒಂದು ಅಳತೆ ಹಿಟ್ಟು ಇಡೀ ಕುಟುಂಬಕ್ಕೆ ಎಷ್ಟು ಕಾಲ ಬರುತ್ತೆ !
“ ಈಗ ಏನು ಮಾಡೋದು? ” ಕುರುಡ ಹೆಂಡತಿಗೆ ಹೇಳಿದ. “ ಇನ್ನು ಅಣ್ಣನ ಬಳಿಗೆ
ನಾನು ಹೋಗಲಾರೆ. ಈಗ ಹೀಗೆ ಮಾಡು . ಹಳ್ಳಿಯ ಬೀದಿಯ ಪಕ್ಕದಲ್ಲಿ ಒಂದು ದೊಡ್ಡ
ಪೊಪ್ಪಾರ್ ಮರ ಇದೆಯಲ್ಲ, ಅದರ ಕೆಳಗೆ ನನ್ನನ್ನು ಕರೆದುಕೊಂಡು ಹೋಗಿಕೂರಿಸು , ಅಲ್ಲೇ
ನನ್ನನ್ನು ಇಡೀ ದಿನ ಬಿಟ್ಟಿರು . ಸಾಯಂಕಾಲ ಬಂದು ಮನೆಗೆ ಕರೆದುಕೊಂಡು ಹೋಗು. ದಾರಿ
ಯಲ್ಲಿ ಹೋಗುವವರೂ ಬರುವವರೂ ಯಾರಾದರೂ ಬಹುಶಃ ಒಂದೊಂದು ಚೂರು ರೊಟ್ಟಿ
ಭಿಕ್ಷೆಯಾಗಿ ಕೊಡಬಹುದು.” ಹೆಂಡತಿ ಹಾಗೆಯೇ ಮಾಡಿ ತಾನೇ ಮನೆಗೆ ಹಿಂದಿರುಗಿದಳು.
ಈ ವ್ಯಕ್ತಿ ಅಲ್ಲಿ ಹೀಗೆ ಕುಳಿತಿದ್ದ . ಯಾರು ಯಾರೋ ಅವನಿಗೆ ಚೂರುಪಾರು ಭಿಕ್ಷೆ ನೀಡಿ
ದರು . ಸಾಯಂಕಾಲವಾಯಿತು. ಹೆಂಡತಿ ಬರಲೇ ಇಲ್ಲ . ಅವನಿಗೆ ಕೂತುಕೂತು ಸಾಕಾಯಿತು.
ಒಬ್ಬನೇ ಮನೆಗೆ ಹೋಗಲು ಬಯಸಿದ. ಎದ್ದು ಹೊರಟ. ಆದರೆ ತಪ್ಪು ತಿರುಗಿದ, ಹೋದ,
ಹೋದ. ಅವನಿಗೇ ಗೊತ್ತಿಲ್ಲ ಎಲ್ಲಿಗೆ ಹೋಗುತ್ತಿದ್ದ ಅಂತ. ಕೂಡಲೇ ಅವನಿಗೆ ಕೇಳಿಸಿತು -
ಹತ್ತಿರದಲ್ಲೇ ಕಾಡಿನ ಮರ್ಮರ ಶಬ್ದ . ಅಯ್ಯೋ , ಹಾಗಾದರೆ ಇಡೀ ರಾತ್ರಿ ಕಾಡಿನಲ್ಲೇ ಕಳೆಯ
ಬೇಕು ! ಅವನಿಗೆ ಕಾಡು ಪ್ರಾಣಿಗಳ ಭಯವಾಯಿತು. ಹತ್ತಿರದಲ್ಲೇ ಇದ್ದ ಓಕ್ ಮರ ಹತ್ತಿ
ಕುಳಿತ .
ಸುಮಾರು ಮಧ್ಯರಾತ್ರಿಯಾಗಿರಬೇಕು ಆಗ ಆ ಸ್ಥಳಕ್ಕೆ , ಅದೇ ಮರದ ಕೆಳಕ್ಕೆ , ಕೆಲವು
ದುಷ್ಟ ಶಕ್ತಿಗಳು - ಪಿಶಾಚಿಗಳು - ತಮ್ಮ ನಾಯಕನೊಂದಿಗೆ ಬಂದವು. ನಾಯಕ- ಪಿಶಾಚಿ ಉಳಿ
ದವುಗಳನ್ನು ಅವು ಏನೇನು ಅನಿಷ್ಟ ಕೆಲಸಗಳನ್ನು ಮಾಡಿದವು ಎಂದು ವಿಚಾರಿಸ ತೊಡಗಿತು .
ಒಂದು ಪಿಶಾಚಿ ಹೇಳಿತು :
“ ನಾನು ಏನು ಮಾಡಿದೆ ಅಂದರೆ - ಒಬ್ಬ ಅಣ್ಣ ಅವನ ತಮ್ಮನಿಂದ ಎರಡು ಅಳತೆ ಹಿಟ್ಟಿಗೆ
ಬದಲು ಜೀವಂತ ಕಣ್ಣುಗಳನ್ನೇ ಕಿತ್ತುಕೊಳ್ಳೋ ಹಾಗೆ ಮಾಡಿದೆ.”
ನಾಯಕ- ಪಿಶಾಚಿ ಹೇಳಿತು : “ ಚೆನ್ನಾದ ಕೆಲಸ ಮಾಡಿದೆ. ಆದರೂ ಅದೇನೂ ಪೂರ್ತಿ
ಚೆನ್ನಾಗಲಿಲ್ಲ !”
“ ಅದು ಹೇಗೆ ? ”
“ಕಣ್ಣು ಕಳೆದುಕೊಂಡ ಆ ಕುರುಡ ತನ್ನ ಕಣ್ಣುಗಳಿಗೆ ಈ ಮರದ ಕೆಳಗೆ ಹುಲ್ಲಿನ ಮೇಲೆ
ಹರಡಿರುವ ಇಬ್ಬನಿಯನ್ನು ಹಚ್ಚಿಕೊಂಡರೆ ಅವನಿಗೆ ಮತ್ತೆ ದೃಷ್ಟಿ ಬಂದು ಬಿಡುತ್ತೆ ! ”
“ ಅದು ಯಾರಿಗೆ ಗೊತ್ತು ? ಅದನ್ನು ಯಾರು ಕೇಳಿದಾರೆ ? ”
“ಸರಿ , ನೀನು ಏನು ಮಾಡಿದೆ ? ” ಎಂದು ನಾಯಕ- ಪಿಶಾಚಿ ಇನ್ನೊಂದು ಪಿಶಾಚಿಯನ್ನು
ಕೇಳಿತು .
“ ನಾನು ಒಂದು ಹಳ್ಳಿಯಲ್ಲಿದ್ದ ನೀರನ್ನೆಲ್ಲ ಒಣಗಿಸಿ ಬಿಟ್ಟೆ . ಅಲ್ಲಿ ಒಂದು ಹನಿ ನೀರನ್ನೂ
ಬಿಡಲಿಲ್ಲ. ಅಲ್ಲಿನ ಜನ ಈಗ ನೀರನ್ನು ಮೂವತ್ತು - ನಾಲ್ವತ್ತು ವೆರ್ಸ್ಟ್ ದೂರದಿಂದ ತರಬೇಕು.
ಅನೇಕರು ಬಾಯಾರಿಕೆಯಿಂದ ಸಾಯ್ತಿದಾರೆ .”
“ ಚೆನ್ನಾದ ಕೆಲಸಮಾಡಿದೆ. ಆದರೂ ಅದೇನೂ ಪೂರ್ತಿ ಚೆನ್ನಾಗಲಿಲ್ಲ ! ”
“ ಅದು ಹೇಗೆ? ”
“ ಹಳ್ಳಿಯ ಹತ್ತಿರದಲ್ಲೇ ಇರೋ ನಗರದಲ್ಲಿ ಒಂದು ಬಂಡೆ ಇದೆ. ಅದನ್ನು ಯಾರಾ
ದರೂ ಪಕ್ಕಕ್ಕೆ ಸರಿಸಿದರೆ, ಅದರ ಕೆಳಗಿನಿಂದ ನೀರು ಚಿಮ್ಮಿ ಬರುತ್ತೆ , ಸುತ್ತಮುತ್ತ ಎಲ್ಲ ಹರಡಿ
ಕೊಳ್ಳುತ್ತೆ !”
“ ಅದು ಯಾರಿಗೆ ಗೊತ್ತು ? ಅದನ್ನು ಯಾರು ಕೇಳಿದಾರೆ ? ”
“ ಸರಿ, ನೀನು ಏನು ಮಾಡಿದೆ ? ” ಎಂದು ನಾಯಕ- ಪಿಶಾಚಿ ಮೂರನೆಯದನ್ನು
ಕೇಳಿತು .
“ ಒಂದಾನೊಂದು ರಾಜ್ಯದಲ್ಲಿ ರಾಜನಿಗೆ ಒಬ್ಬಳೇ ಒಬ್ಬ ಮಗಳಿದ್ದಾಳೆ. ನಾನು ಅವಳನ್ನು
ಕುರುಡಳನ್ನಾಗಿ ಮಾಡಿಬಿಟ್ಟೆ . ಯಾವ ಔಷಧಿಯ ಅವಳನ್ನು ಗುಣಪಡಿಸೋಕೆ ಆಗೋಲ್ಲ. ”
“ ಚೆನ್ನಾದ ಕೆಲಸ ಮಾಡಿದೆ. ಆದರೂ ಅದೇನೂ ಪೂರ್ತಿ ಚೆನ್ನಾಗಲಿಲ್ಲ ! ”
“ ಅದು ಹೇಗೆ? ”
“ ಈ ಮರದ ಕೆಳಗಿರೋ ಇಬ್ಬನಿಯನ್ನು ಅವಳ ಕಣ್ಣಿಗೆ ಹಚ್ಚಿದರೆ ಅವಳಿಗೆ ದೃಷ್ಟಿ ಮತ್ತೆ
ಬಂದು ಬಿಡುತ್ತೆ ! ”
“ ಅದು ಯಾರಿಗೆ ಗೊತ್ತು ? ಅದನ್ನು ಯಾರು ಕೇಳಿದಾರೆ ? ”
ಮನುಷ್ಯ ಮರದ ಮೇಲೆ ಕುಳಿತು ಇವೆಲ್ಲವನ್ನೂ ಕೇಳಿಸಿಕೊಂಡ. ಆ ಪಿಶಾಚಿಗಳು ಹೊರಟು
ಹೋದಮೇಲೆ ಅವನು ಆ ಮರದ ಕೆಳಗಿದ್ದ ಇಬ್ಬನಿಯಿಂದ ತನ್ನ ಕಣ್ಣುಗಳನ್ನು ಉಜ್ಜಿಕೊಂಡ -
ತಕ್ಷಣವೇ ಅವನಿಗೆ ದೃಷ್ಟಿ ಬಂದಿತು . ಆಗ ಅವನು ತನ್ನಲ್ಲೇ ಹೇಳಿಕೊಂಡ: “ ಈಗ ಹೋಗಿ ಜನರಿಗೆ
ಸಹಾಯ ಮಾಡ್ತೀನಿ. ” ಆ ಮರದ ಕೆಳಗಿದ್ದ ಒಂದಿಷ್ಟು ಇಬ್ಬನಿಯನ್ನು ತೊಗಟೆಯಲ್ಲಿ ಸಂಗ್ರ
ಹಿಸಿಕೊಂಡು ಅವನು ಹೊರಟ .
ಅವನು ಯಾವ ಹಳ್ಳಿಯಲ್ಲಿ ನೀರೆಲ್ಲ ಇಂಗಿ ಹೋಗಿತ್ತೋ ಆ ಹಳ್ಳಿಗೆ ಬಂದ. ನೋಡ್ತಾನೆ -
ಅಲ್ಲೊಬ್ಬ ಮುದುಕಿ ಹೋಗಿದಾಳೆ. ಅವಳು ಒಂದು ಅಡ್ಡೆಯಲ್ಲಿ ಒಂದು ಬಕೆಟ್ ಇಟ್ಟುಕೊಂಡು
ನೀರು ಹೊತ್ತುಕೊಂಡು ಹೋಗ್ತಿದಾಳೆ. ಅವನು ಅವಳ ಬಳಿಗೆ ಹೋಗಿಕೇಳಿದ:
“ ಅಜ್ಜಿ , ನನಗೆ ಬಾಯಾರಿಕೆ, ಸ್ವಲ್ಪ ನೀರು ಕೊಡ್ತೀಯ ಕುಡಿಯೋಕೆ! ”
“ ಅಯ್ಯೋ , ಮಗು, ಏನು ಹೇಳೀಯ ? ನಾನು ಈ ನೀರನ್ನು ಮೂವತ್ತು ವೆರ್ಸ್ಟ್ ದೂರದಿಂದ
ಹೊತ್ತು ತರುತ್ತಿದೀನಿ. ಇದರಲ್ಲೂ ಅರ್ಧ ಎಲ್ಲ ಆಗಲೇ ತುಳುಕಿ ಚೆಲ್ಲಿ ಹೋಗಿದೆ. ನನ್ನ
ಕುಟುಂಬವೋ ದೊಡ್ಡದು. ನೀರಿಲ್ಲದೆ ಸಾಯ್ತಾರೆ! ”
“ ನಾನು ನಿಮ್ಮ ಹಳ್ಳಿಗೇ ಬರುತ್ತಿದೀನಿ, ಅಜ್ಜಿ , ಎಲ್ಲರಿಗೂ ನೀರು ಸಿಗೋ ಹಾಗೆ ಮಾಡ್ತೀನಿ.”
ಅವಳು ಅವನಿಗೆ ಕುಡಿಯಲು ಸ್ವಲ್ಪ ನೀರು ಕೊಟ್ಟಳು. ಅವಳಿಗೆ ಎಷ್ಟು ಆನಂದವಾಯಿತು
ಅಂದರೆ ತಕ್ಷಣವೇ ಹಳ್ಳಿಗೆ ಓಡಿ ಹೋಗಿ ಎಲ್ಲರಿಗೂ ಈ ವ್ಯಕ್ತಿಯ ವಿಷಯ ಹೇಳಿದಳು . ಕೆಲವರು
ನಂಬಿದರು , ಕೆಲವರು ನಂಬಲಿಲ್ಲ. ಆದರೂ ಎಲ್ಲರೂ ಅವನನ್ನು ಸಂಧಿಸಲು ಓಡೋಡಿ ಬಂದರು.
ಅವನಿಗೆ ಬಾಗಿ ನಮಸ್ಕರಿಸಿದರು : “ಸತ್ಪುರುಷನೇ , ನಮ್ಮನ್ನು ಈ ಕೂರ ಸಾವಿನಿಂದ
ರಕ್ಷಿಸು ! ”
“ ಆಗಲಿ ” ಅವನೆದ, “ ಆದರೆ ನೀವು ನನಗೆ ಸಹಾಯ ಮಾಡಬೇಕು. ನನ್ನನ್ನು ನಿಮ್ಮ
ಹಳ್ಳಿಗೆ ಸಮೀಪವಿರುವ ನಗರಕ್ಕೆ ಕರೆದುಕೊಂಡು ಹೋಗಿ.”
ಅವರು ಅವನನ್ನು ಅಲ್ಲಿಗೆ ಕರೆದೊಯ್ದರು. ಅವನು ಅಲ್ಲಿ ಹುಡುಕ ತೊಡಗಿದ – ಆ ಬಂಡೆ
ಯನ್ನು ಕಂಡುಹಿಡಿದ. ಎಲ್ಲರೂ ಸೇರಿ ಅದನ್ನು ಪಕ್ಕಕ್ಕೆ ಸರಿಸಿದರು. ಅದರ ಕೆಳಗಿನಿಂದ ನೀರು
ಚಿಮ್ಮಿ ಹೊರಬಂತು . ಹ್ಯಾಗೆ ಹರಿದುಕೊಂಡು ಬಂತು – ಎಲ್ಲ ಬಾವಿಗಳೂ ಎಲ್ಲ ಕೊಳಗಳೂ
ಎಲ್ಲ ಹೊಂಡಗಳೂ ನೀರಿನಿಂದ ತುಂಬಿಕೊಂಡವು ! ಜನರಿಗೆ ಭಾರಿ ಸಂತೋಷವಾಯಿತು. ಆ ವ್ಯಕ್ತಿಗೆ
ತಮ್ಮ ಕೃತಜ್ಞತೆ ಸಲ್ಲಿಸಿದರು. ಅವನಿಗೆ ಬೇಕಾದಷ್ಟು ಹಣ ಮತ್ತಿತರ ವಸ್ತುಗಳನ್ನು ಕೊಟ್ಟರು.
ಅವನು ಕುದುರೆ ಏರಿ ಮುಂದೆ ಹೊರಟ . ದಾರಿಯಲ್ಲಿ ಎಲ್ಲರನ್ನೂ , ರಾಜಕುಮಾರಿ ಹಾಸಿಗೆ ಹಿಡಿದು
ಮಲಗಿರುವ ರಾಜ್ಯ ಎಲ್ಲಿದೆ, ಎಂದು ವಿಚಾರಿಸುತ್ತ ಹೋದ. ದೀರ್ಘ ಕಾಲವೋ ಸ್ವಲ್ಪ ಕಾಲವೋ
ಪ್ರಯಾಣ ಮಾಡಿಕೊಂಡು ಅವನು ಅಂತೂ ಆ ರಾಜ್ಯ ತಲುಪಿದ . ರಾಜನ ಅರಮನೆಗೆ ಹೋಗಿ
ಅಲ್ಲಿದ್ದ ಭಟರನ್ನು ಕೇಳಿದ : “ನಿಮ್ಮ ರಾಜನ ಮಗಳಿಗೆ ಮೈ ಚೆನ್ನಾಗಿಲ್ಲ ಅಂತ ಕೇಳಿದೆ. ನಾನು
ಅವಳನ್ನು ಗುಣಪಡಿಸಬಲ್ಲೆ ! ”
“ ಅಯ್ಯೋ , ನಿನಗೆಲ್ಲಿ ಆಗುತ್ತೆ ! ಮಹಾಮಹಾ ಪಂಡಿತರಿಗೇ ಅವಳನ್ನು ಗುಣಪಡಿಸಲು
ಆಗಲಿಲ್ಲ. ನಿನ್ನ ಕೈಲೂ ಏನೂ ಮಾಡೋಕೆ ಆಗೋಲ್ಲ.”
“ ಆದರೂ ರಾಜನಿಗೆ ವಿಷಯ ತಿಳಿಸಿ ! ”
ಅವರಿಗೆ ಇಷ್ಟವಿರಲಿಲ್ಲ . ಆದರೂ ಅವನು ಹಟ ಹಿಡಿದ: “ನೀವು ಹೋಗಿ ತಿಳಿಸಿ ಬಿಡಿ.
ಅಷ್ಟೇ ಸಾಕು ! ”
ಅವರು ಹೋಗಿ ತಿಳಿಸಿದರು . ರಾಜ ಅವನನ್ನು ಅರಮನೆಯ ಒಳಗೆ ಬರುವಂತೆ
ಹೇಳಿದ.
“ನೀನು ನನ್ನ ಮಗಳನ್ನು ಗುಣಪಡಿಸಬಲ್ಲೆಯಾ ? ” ರಾಜ ಕೇಳಿದ.
“ ಬಲ್ಲೆ ” ಉತ್ತರಿಸಿದ.
“ಸರಿ , ಪ್ರಯತ್ನ ಮಾಡು. ನಿನಗೆ ಏನು ಬೇಕೋ ಎಲ್ಲ ಕೊಡುತ್ತೇನೆ. ”
ಅವನು ರಾಜಕುಮಾರಿ ಮಲಗಿದ್ದ ಕೋಣೆಗೆ ಹೋದ. ತಾನು ತಂದಿದ್ದ ಇಬ್ಬನಿಯನ್ನು
ಅವಳ ಕಣ್ಣಿಗೆ ತಿಕ್ಕಿದ. ತಕ್ಷಣವೇ ಅವಳಿಗೆ ದೃಷ್ಟಿ ಬಂದಿತು . ರಾಜನಿಗೆ ಎಷ್ಟು ಮಹದಾನಂದವಾ
ಯಿತು, ಹೇಳಿ ತಿಳಿಸುವುದು ಸಾಧ್ಯವಿಲ್ಲ ! ರಾಜ ಅವನಿಗೆ ಎಷ್ಟು ಸಂಪತ್ತನ್ನು ಬಳುವಳಿಯಾಗಿ
ನೀಡಿದನೆಂದರೆ, ಅವನು ಅವುಗಳನ್ನು ಅನೇಕ ಬಂಡಿಗಳಲ್ಲಿ ತುಂಬಿಕೊಂಡು ಸಾಗಿಸಬೇಕಾಯಿತು.
ಈಮಧ್ಯೆ ಅವನ ಹೆಂಡತಿ ತುಂಬ ದುಃಖಿಸಿದಳು , ಗೋಳಾಡಿದಳು . ಗಂಡ ಎಲ್ಲಿ ಅನ್ನು
ವುದೇ ಅವಳಿಗೆ ತಿಳಿಯದು. ಅವನು ಆಗಲೇ ಈ ಪ್ರಪಂಚದಲ್ಲಿ ಇಲ್ಲ ಎಂದೇ ಭಾವಿಸಿಕೊಂಡಿದ್ದಳು .
ಆಗ ಇದ್ದಕ್ಕಿದ್ದಂತೆ ಅವನು ಬರುತ್ತಾನೆ. ಕಿಟಕಿಯ ಬಳಿ ನಿಂತು ಕೂಗುತ್ತಾನೆ: “ ಹೆಂಡತಿ , ಬಾಗಿಲು
ತೆರೆ ! ”
ಅವನ ಧ್ವನಿಯಿಂದ ತನ್ನ ಪತಿ ಬಂದನೆಂದು ಅವಳು ತಿಳಿದಳು . ತುಂಬ ಸಂತೋಷಪಟ್ಟಳು.
ಓಡಿ ಹೋಗಿ ಬಾಗಿಲು ತೆರೆದಳು . ಅವನನ್ನು ಒಳಕ್ಕೆ ಕರೆದೊಯ್ದಳು. ಅವನಿನ್ನೂ ಕುರುಡ
ಎಂದೇ ಅವಳ ಭಾವನೆ.
“ ದೀಪ ಹಚ್ಚು ! ” ಅವನು ಹೇಳಿದ .
ಅವಳು ದೀಪ ಹಚ್ಚಿದಳು . ಅವನನ್ನು ನೋಡಿದ್ದೇ ಕೈ ಚಪ್ಪಾಳೆ ತಟ್ಟಿದಳು - ದೃಷ್ಟಿ ಬಂದಿದೆ !
“ಓಮ್, ದೇವರೇ ! ಎಷ್ಟು ಚೆನ್ನಾಗಿ ಆಗಿಬಿಟ್ಟಿದೀಯ ! ಹೇಗಾಯಿತು ಇದೆಲ್ಲ ? ಹೇಳು ! ”
“ ತಾಳು , ಹೆಂಡತಿ, ಮೊದಲು ನಾನು ತಂದಿರುವ ಸಂಪತ್ತನ್ನೆಲ್ಲ ಒಳಕ್ಕೆ ತರೋಣ.”
ಎಷ್ಟೊಂದು ಸಂಪತ್ತನ್ನು ಒಳ ತಂದರು . ಇದರ ಮುಂದೆ ಅವನ ಧನಿಕಸೋದರನ ಸಂಪತ್ತು
ತೃಣ ಸಮಾನ !
ಅವರು ಶ್ರೀಮಂತರಾಗಿ ಜೀವನ ನಡೆಸ ತೊಡಗಿದರು . ಧನಿಕ ಸೋದರನಿಗೆ ಈ ವಿಷಯ
ತಿಳಿಯಿತು. ಅವನು ಓಡೋಡಿ ಬಂದ : “ ಇದು ಹೇಗೆ ಹೀಗೆ, ತಮ್ಮ ? ನೀನು ಹೇಗೆ ಮತ್ತೆ
ದೃಷ್ಟಿ ಪಡೆದೆ, ಹೇಗೆ ಇಷ್ಟು ಶ್ರೀಮಂತನಾದೆ ? ”
ಅವನು ಎಲ್ಲವನ್ನೂ ರಹಸ್ಯವಾಗಿಡದೆ ವಿವರಿಸಿ ತಿಳಿಸಿದ.
ಈಗ ಆ ಧನಿಕ ಅಣ್ಣನಿಗೆ ತಾನೂ ಇನ್ನಷ್ಟು ಸಂಪತ್ತು ಪಡೆಯಬೇಕೆಂದು ಆಸೆಯಾಯಿತು.
ರಾತ್ರಿಯಾದಾಗ ಯಾರಿಗೂ ಕಾಣದಂತೆ ಅದೇ ಕಾಡಿಗೆ ಹೋಗಿ ಅದೇ ಮರದ ಮೇಲೆ ಹತ್ತಿ
ಕುಳಿತ. ಮಧ್ಯ ರಾತ್ರಿ ಪಿಶಾಚಿಗಳು ತಮ್ಮ ನಾಯಕ- ಪಿಶಾಚಿಯೊಂದಿಗೆ ಬಂದವು. ಅವು
ತಮ್ಮಲ್ಲೇ ಮಾತನಾಡಿಕೊಂಡವು:
“ ಏನಿದು ? ಯಾರೂ ಕೇಳಿಸಿಕೊಂಡಿಲ್ಲ, ಯಾರಿಗೂ ತಿಳಿದಿಲ್ಲ. ಆದರೂ ಆಗಲೇ ಕುರುಡ
ಸೋದರನಿಗೆ ದೃಷ್ಟಿ ಬಂತು . ಬಂಡೆಯ ಕೆಳಗಿನಿಂದ ನೀರು ಹರಿದು ಬರುತ್ತಿದೆ, ರಾಜಕುಮಾರಿ
ಮತ್ತೆ ಆರೋಗ್ಯವಂತಳಾಗಿದ್ದಾಳೆ ! ಯಾರೋ ನಮ್ಮ ಮಾತನ್ನು ಕದ್ದು ಕೇಳುತ್ತಿರಬಹುದೆ ?
ಹುಡುಕಿ ನೋಡೋಣ! ”
ಅವು ಹುಡುಕ ತೊಡಗಿದವು. ಮರ ಹತ್ತಿದವು. ಅಲ್ಲಿ ಕುಳಿತಿದಾನೆ ಧನಿಕ ಸೋದರ ! ಅವು
ಅವನನ್ನು ಹಿಡಿದು ತುಂಡುತುಂಡು ಮಾಡಿದವು.
by admin | ಫೆಬ್ರ 21, 2020 | ಓದಿ ಕಲಿ
ಒಂದಾನೊಂದು ಕಾಲದಲ್ಲಿ ಇಬ್ಬರು ಸೋದರರು ವಾಸಿಸುತ್ತಿದ್ದರು . ಒಬ್ಬ ಬಡವ, ಇನ್ನೊಬ್ಬ
ಶ್ರೀಮಂತ , ಬಡವನ ಬಳಿ ಏನೇನೂ ಇರಲಿಲ್ಲ. ಮಕ್ಕಳಿಗೆ ಹಾಲು ಕೊಡಲೂ ಅವನಿಗೆ ಶಕ್ಯವಿರ
ಲಿಲ್ಲ. ಅವನ ದುಸ್ಥಿತಿಯನ್ನು ಕಂಡು ಶ್ರೀಮಂತ ಸೋದರ ಮರುಗಿದ. ಅವನಿಗಾಗಿ ಒಂದು ಹಸು
ವನ್ನು ಕೊಡುತ್ತ ಹೇಳಿದ:
“ ತಗೋ ಇದನ್ನು ಉಪಯೋಗಿಸಿಕೊ . ಇದಕ್ಕೆ ದುಡ್ಡನೂ ಕೊಡಬೇಡ. ಬದಲು ನನ್ನ
ಬಳಿ ಸ್ವಲ್ಪ ಕಾಲ ಕೆಲಸ ಮಾಡು.”
ಬಡವ ಸೋದರ ಶ್ರೀಮಂತ ಸೋದರನ ಬಳಿ ಕೆಲಸ ಮಾಡಿದ, ಸಾಲ ತೀರಿಸಿದ. ಆಗ
ಶ್ರೀಮಂತ ಸೋದರನಿಗೆ ಹಸು ಹೊರಟು ಹೋಯಿತಲ್ಲ ಎಂದು ದುಃಖವಾಯಿತು. ಅವನು
ಹೇಳಿದ :
“ ನನ್ನ ಹಸುವನ್ನು ನನಗೆ ಕೊಟ್ಟು ಬಿಡು. ”
ಬಡವ ಸೋದರ ಹೇಳಿದ: “ ಅಲ್ಲಪ್ಪ . ಅದಕ್ಕೆ ಬದಲು ನಾನು ನಿನ್ನ ಬಳಿ ಕೆಲಸ ಮಾಡಲಿ
ಲ್ಲವೇ ? ”
“ ಏನು ಮಹಾ ನೀನು ಮಾಡಿದ್ದು ಕೆಲಸ ! ಬೆಕ್ಕು ಅತ್ತ ಹಾಗೆ ! ನನ್ನ ಹಸು ನೋಡು,
ಎಷ್ಟು ಚೆನ್ನಾಗಿದೆ ! ಕೊಟ್ಟುಬಿಡು, ಕೊಟ್ಟುಬಿಡು ! ”
ಇಷ್ಟು ಕೆಲಸ ಮಾಡಿಯೂ ಫಲವಿಲ್ಲದೆ ಹೋಗುತ್ತದಲ್ಲ ಎಂದು ಬಡವ ಸೋದರನಿಗೆ
ದುಃಖವಾಯಿತು. ಅವನಿಗೆ ಹಸುವನ್ನು ಹಿಂದಿರುಗಿಸುವುದು ಇಷ್ಟವಾಗಲಿಲ್ಲ. ಅವರು ವ್ಯಾಜ್ಯ
ತೀರ್ಮಾನಕ್ಕಾಗಿ ಧಣಿಯ ಬಳಿ ಹೋದರು . ಇವರ ಜಗಳ ತೀರ್ಮಾನಿಸಲು, ಯಾರು ತಪ್ಪು
ಯಾರು ಸರಿ ಎಂದು ಕಂಡುಹಿಡಿಯಲು, ಧಣಿ ಯಾಕೆ ತಲೆ ಕೆಡಿಸಿಕೊಳ್ಳುತ್ತಾನೆ !
“ ಯಾರು ನನ್ನ ಒಗಟಿಗೆ ಸರಿಯಾದ ಉತ್ತರ ಹೇಳುತ್ತಾರೋ ಅವರಿಗೆ ಹಸು ” ಅವನೆಂದ.
“ಹೇಳಿ, ಮಹಾ ಸ್ವಾಮಿ ! ”
“ಕೇಳಿ: ಯಾವುದು ಈ ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಹೊಟ್ಟೆ ತುಂಬಿಸುವುದು , ಯಾವುದು
ಎಲ್ಲಕ್ಕಿಂತ ಹೆಚ್ಚು ವೇಗವಾಗಿ ಓಡುವುದು, ಯಾವುದು ಎಲ್ಲಕ್ಕಿಂತ ಹೆಚ್ಚು ಸುಖ ನೀಡುವುದು ?
ನಾಳೆ ಬನ್ನಿ - ಉತ್ತರ ಹೇಳಿ. ”
ಸೋದರರು ಮನೆಗಳಿಗೆ ಹಿಂದಿರುಗಿದರು . ಶ್ರೀಮಂತ ಸೋದರ ಯೋಚಿಸಿದ : “ ಅಯೋ ,
ಇದೆಂಥ ಒಗಟು ಇದು . ಇದು ಒಗಟು ಅಲ್ಲವೇ ಅಲ್ಲ ! ಹೊಟ್ಟೆ ತುಂಬಿಸೋದು ಹಂದಿ ಮಾಂಸ,
ಜೋರಾಗಿ ಓಡೋದು ಬೇಟೆ ನಾಯಿ , ಸುಖ ಕೊಡೋದು ಹಣ ! ಹಸು ನನ್ನದಾಗುತ್ತೆ ! ”
ಬಡವ ಸೋದರ ತನ್ನ ಮನೆಗೆ ಹೋದ. ಯೋಚನೆ ಮಾಡಿದ, ಮಾಡಿದ. ಉತ್ತರ ಹೊಳೆ
ಯಲೇ ಇಲ್ಲ. ತಲೆ ತಗ್ಗಿಸಿ ದುಃಖಿಸುತ್ತ ಕುಳಿತ. ಅವನಿಗೊಬ್ಬ ಮಗಳಿದ್ದಳು , ಮರಸ್ಯ ಅಂತ.
ಅವಳು ತಂದೆ ಮುಖ ಬಾಡಿದ್ದುದನ್ನು ಕಂಡು ಕೇಳಿದಳು :
“ ಏನಪ್ಪ , ಏನಾಯಿತು ? ಯಾಕೆ ಹೀಗೆ ದುಃಖಿಸುತ್ತ ಕುಳಿತೆ ? ಧಣಿ ಏನು ಹೇಳಿದರು ? ”
“ ಧಣಿ ನಮಗೆ ಭಾರಿ ಒಗಟನ್ನೇ ಕೊಟ್ಟಿದ್ದಾರೆ - ತಲೆ ತಿನ್ನುವಂತಹುದು. ”
“ ಏನದು ಒಗಟು ? ”
“ ಯಾವುದು ಎಲ್ಲಕ್ಕಿಂತ ಹೆಚ್ಚು ಹೊಟ್ಟೆ ತುಂಬಿಸುವುದು , ಯಾವುದು ಎಲ್ಲಕ್ಕಿಂತ ಹೆಚ್ಚು
ವೇಗವಾಗಿ ಓಡುವುದು, ಯಾವುದು ಎಲ್ಲಕ್ಕಿಂತ ಹೆಚ್ಚು ಸುಖ ನೀಡುವುದು , ಅಂತ ”
“ ಅಯ್ಯೋ , ಅಪ್ಪ ! ಇದಕ್ಕೆ ಯಾಕೆ ಹೀಗೆ ದುಃಖಿಸುತ್ತ ಕುಳಿತೆ ? ಎಲ್ಲಕ್ಕಿಂತ ಹೆಚ್ಚು ಹೊಟ್ಟೆ
ತುಂಬಿಸುವುದು ಭೂಮಿ ತಾಯಿ . ಅದೇ ಅಲ್ಲವೇ ನಮ್ಮನ್ನೆಲ್ಲ ಪೋಷಿಸುತ್ತಿರುವುದು , ನಮಗೆ
ತಿನ್ನಲು ಕುಡಿಯಲು ಕೊಡುತ್ತಿರುವುದು ? ಎಲ್ಲಕ್ಕಿಂತ ಹೆಚ್ಚು ವೇಗವಾಗಿ ಓಡುವುದೆಂದರೆ
ಮನಸ್ಸು . ಮನಸ್ಸಿನಲ್ಲಿ ಯೋಚಿಸಿಕೊಂಡು ನೀನು ಎಲ್ಲಿಗೆ ಬೇಕಾದರೂ ಕ್ಷಣ ಮಾತ್ರದಲ್ಲಿ ಹೋಗ
ಬಹುದು. ಎಲ್ಲಕ್ಕಿಂತ ಹೆಚ್ಚು ಸುಖ ಕೊಡುವುದೆಂದರೆ ನಿದ್ರೆ , ನಿದ್ರೆಯಲ್ಲಿ ಮನುಷ್ಯನಿಗೆ ಎಂಥ
ಸುಖ ಸಿಗುತ್ತೆ - ಅವನು ಎಲ್ಲವನ್ನೂ ತೊರೆಯುತ್ತಾನೆ, ಎಲ್ಲವನ್ನೂ ಮರೆಯುತ್ತಾನೆ. ”
“ ಹೌದಲ್ಲವೇ ? ನೀನು ಹೇಳಿದ್ದು ಸರಿ, ಮಗಳೇ ! ನಾನು ಇದನ್ನೇ ಧಣಿಯ ಮುಂದೆ
ಹೇಳೀನಿ. ”
ಮಾರನೆಯ ದಿನ ಇಬ್ಬರು ಸೋದರರೂ ಧಣಿಯ ಬಳಿಗೆ ಬಂದರು . ಧಣಿ ಕೇಳಿದ:
“ ಹುಂ , ಏನು ? ಒಗಟಿಗೆ ಉತ್ತರ ಕಂಡುಹಿಡಿದಿರಾ ? ”
ಶ್ರೀಮಂತ ಸೋದರ ಬೇಗ ಮುಂದೆ ಬಂದ. ತಾನೇ ಮೊದಲು ಉತ್ತರ ಹೇಳಿ ಹಸುವನ್ನು
ಗಿಟ್ಟಿಸಿಕೊಂಡು ಬಿಡಬೇಕು ಅಂತ. ಅವನು ಹೇಳಿದ :
“ ಎಲ್ಲಕ್ಕಿಂತ ಹೆಚ್ಚು ಹೊಟ್ಟೆ ತುಂಬಿಸುವುದು , ಧಣಿಗಳೇ , ನಿಮ್ಮ ರೊಪ್ಪದಲ್ಲಿರುವ ಹಂದಿ
ಗಳು , ಎಲ್ಲಕ್ಕಿಂತ ಹೆಚ್ಚು ವೇಗವಾಗಿ ಓಡುವುದು ನಿಮ್ಮ ಬೇಟೆನಾಯಿಗಳು , ಎಲ್ಲಕ್ಕಿಂತ ಹೆಚ್ಚು
ಸುಖ ನೀಡುವುದು ಹಣ. ”
“ಉಹೂಂ, ಉಹೂಂ, ಎಲ್ಲ ತಪ್ಪು ! ” ಎಂದ ಧಣಿ, “ ನಿನ್ನ ಉತ್ತರ ಏನು ? ”
“ ನಾನು ಹೇಳೋದು ಏನೂಂದರೆ, ಧಣಿಗಳೇ , ಭೂಮಿ ತಾಯಿಗಿಂತ ಹೆಚ್ಚು ಹೊಟ್ಟೆ
ತುಂಬಿಸೋದು ಬೇರೆ ಯಾವುದೂ ಇಲ್ಲ. ಅದೇ ಎಲ್ಲರನ್ನೂ ಪೋಷಿಸುತ್ತಿರುವುದು , ಎಲ್ಲರಿಗೂ
ತಿನ್ನಲು ಕುಡಿಯಲು ಕೊಡುತ್ತಿರುವುದು .”
“ ಭೇಷ್, ಭೇಷ್ ! ಸರಿಯಾಗಿ ಹೇಳಿದೆ. ಎಲ್ಲಕ್ಕಿಂತ ವೇಗವಾಗಿ ಹೋಗೋದು ಯಾವುದು ? ”
“ ಮನಸ್ಸು , ಮಹಾ ಸ್ವಾಮಿ , ಮನಸ್ಸಿನಲ್ಲಿ ಯೋಚಿಸಿಕೊಂಡು ನಾವು ಎಲ್ಲಿಗೆ ಬೇಕಾದರೂ
ಕ್ಷಣಮಾತ್ರದಲ್ಲಿ ಹೋಗಬಹುದು. ”
“ಸರಿಯಾಗಿ ಹೇಳಿದೆ ! ಎಲ್ಲಕ್ಕಿಂತ ಹೆಚ್ಚು ಸುಖ ಕೊಡೋದು ಯಾವುದು ? ”
“ನಿದ್ರೆ , ಮಹಾ ಸ್ವಾಮಿ , ನಿದ್ರೆಯಲ್ಲಿ ಮನುಷ್ಯನಿಗೆ ಎಂಥ ಸುಖ ಸಿಗುತ್ತೆ - ಅವನು ಎಲ್ಲ
ವನ್ನೂ ತೊರೆಯುತ್ತಾನೆ, ಎಲ್ಲವನ್ನೂ ಮರೆಯುತ್ತಾನೆ.”
“ ಎಲ್ಲ ಸರಿಯಾಗಿ ಹೇಳಿದೆ ! ” ಎಂದ ಧಣಿ, “ ಹಸು ನಿನ್ನದು. ಆದರೆ ಹೇಳು – ಉತ್ತರ
ಎಲ್ಲ ನೀನೇ ಕಂಡುಹಿಡಿದೆಯೋ , ಅಥವಾ ಬೇರೆ ಯಾರಾದರೂ ನಿನಗೆ ಸಹಾಯ ಮಾಡಿದರೋ ? ”
“ ಹೌದು, ಧಣಿಗಳೇ , ನನಗೊಬ್ಬ ಮಗಳಿದಾಳೆ , ಮರಸ್ಯ ಅಂತ. ಅವಳು ನನಗೆ ಹೇಳಿ
ಕೊಟ್ಟಳು.”
ಧಣಿಗೆ ಕೋಪ ಬಂತು .
“ ಹೌದಾ ? ನಾನು ಎಷ್ಟು ಬುದ್ದಿವಂತ. ಅವಳು ಒಬ್ಬ ಸಾಮಾನ್ಯ ಹುಡುಗಿ, ನನ್ನ ಒಗಟಿಗೆ
ಉತ್ತರ ಹೇಳಿಬಿಟ್ಟಳಲ್ಲ ! ತಾಳು , ತಾಳು ! ಇಲ್ನೋಡು ಇಲ್ಲಿ ಹತ್ತು ಬೇಯಿಸಿದ ಮೊಟ್ಟೆಗಳಿವೆ.
ಇವನ್ನು ನಿನ್ನ ಮಗಳಿಗೆ ಕೊಡು. ಅವಳು ಇವುಗಳ ಮೇಲೆ ಒಂದುಕೋಳಿಕೂರಿಸಿ ಒಂದೇ ರಾತ್ರಿ
ಯಲ್ಲಿ ಇವುಗಳಿಂದ ಹತ್ತು ಕೋಳಿ ಮರಿಗಳು ಹೊರಬರುವಂತೆ ಮಾಡಬೇಕು, ಅವು ದೊಡ್ಡ
ದಾಗಿ ಬೆಳೆಯಬೇಕು , ಅವಳು ಅವುಗಳಲ್ಲಿ ಮೂರನ್ನು ಬೆಂಕಿಯಲ್ಲಿ ಸುಟ್ಟು ನನ್ನ ಬೆಳಗಿನ ಉಪಾ
ಹಾರಕ್ಕೆ ತಿನ್ನಲು ಸಿದ್ದವಾಗಿ ಇರಿಸಬೇಕು. ನಾನು ಬೆಳಿಗ್ಗೆ ಎದ್ದ ಕೂಡಲೇ ನೀನು ಅದನ್ನು ನನಗೆ
ತಂದು ಕೊಡಬೇಕು. ನಾನು ಕಾಯುತ್ತಿರುತ್ತೀನಿ. ಇದನ್ನು ಮಾಡದೆ ಹೋದರೆ ನಿನಗೇ ಕೇಡು. ”
ಬಡವ ಮನೆಗೆ ಹೋದ, ಅಳುತ್ತ ಕೂತ. ಮಗಳು ಬರುತ್ತಾಳೆ, ಕೇಳುತ್ತಾಳೆ:
“ ಯಾಕಪ್ಪ ಅಳುತಿದೀಯ ? ”
“ ಅಳದೆ ಏನು ಮಾಡಲಿ , ಮಗಳೆ ! ನೋಡು ಧಣಿ ನಿನಗೆ ಈ ಹತ್ತು ಬೇಯಿಸಿದ ಮೊಟ್ಟೆ
ಗಳನ್ನು ಕೊಟ್ಟಿದಾರೆ. ನೀನು ಇವುಗಳ ಮೇಲೆಕೋಳಿಕೂರಿಸಿ ಒಂದೇ ರಾತ್ರಿಯಲ್ಲೇ ಈ ಮೊಟ್ಟೆ
ಗಳೆಲ್ಲ ಒಡೆದು ಮರಿಗಳು ಹೊರಬರುವಂತೆ ಮಾಡಬೇಕಂತೆ, ಅವು ದೊಡ್ಡದಾಗಿ ಬೆಳೀಬೇಕಂತೆ,
ಆಮೇಲೆ ನೀನು ಅವುಗಳಲ್ಲಿ ಮೂರನ್ನು ಸುಟ್ಟು ಭಕ್ಷ ತಯಾರಿಸಬೇಕಂತೆ, ನಾನು ನಾಳೆ ಬೆಳಿಗ್ಗೆ
ಅದನ್ನು ಅವರ ಉಪಾಹಾರಕ್ಕೆ ತಗೊಂಡು ಹೋಗಿಕೊಡಬೇಕಂತೆ . ”
ಹುಡುಗಿ ನಸುನಕ್ಕು , ಅಂಬಲಿ ತುಂಬಿದ ಮಡಕೆಯೊಂದನ್ನು ತೆಗೆದುಕೊಂಡು ಹೇಳಿದಳು :
“ ಅಪ್ಪ , ಈ ಅಂಬಲಿಯ ಮಡಕೆಯನ್ನು ಧಣಿಗಳಿಗೆ ತೆಗೆದುಕೊಂಡು ಹೋಗಿಕೊಡು.
ಅವರು ಒಂದು ತುಂಡು ಭೂಮಿಯನ್ನು ಉತ್ತು ಅದರಲ್ಲಿ ಈ ಅಂಬಲಿಯನ್ನು ಬಿತ್ತಿ ,ಗೋಧಿ ಬೆಳೆ
ತೆಗೆದು , ಕಟಾವು ಮಾಡಿ, ಕಾಳು ಒಕ್ಕಿ , ಅವರು ಕಳಿಸಿಕೊಟ್ಟಿರುವ ಈ ಮೊಟ್ಟೆಗಳು ಒಡೆದು
ಮರಿಯಾದ ಕೂಡಲೇ ಅವಕ್ಕೆ ತಿನ್ನಲು ಕೊಡಲು ಅನುವಾಗುವಂತೆ ಆ ಕಾಳುಗಳನ್ನು ನನಗೆ
ಕಳಿಸಿಕೊಡಬೇಕು , ಅಂತ ಹೇಳು. ”
ಬಡವ ಸೋದರ ಮಗಳು ಹೇಳಿದಂತೆಯೇ ಮಾಡಿದ. ಅಂಬಲಿಯ ಮಡಕೆಯನ್ನು ಧಣಿಗೆ
ತಲುಪಿಸಿ ಮಗಳು ಹೇಳಿದಂತೆಯೇ ಪದ- ಪದ ಎಲ್ಲವನ್ನೂ ಹೇಳಿದ .
ಧಣಿ ಆ ಅಂಬಲಿಯನ್ನು ನೋಡಿದ, ಮತ್ತೆ ನೋಡಿದ. ಆಮೇಲೆ ಅದನ್ನು ತನ್ನ ನಾಯಿಗಳ
ಮುಂದೆ ಚೆಲ್ಲಿದ. ಅನಂತರ ಅವನು ಎಲ್ಲಿಂದಲೋ ಅಗಸೆ ಗಿಡದ ಒಂದು ದಿಂಡನ್ನು ತಂದು ಆ
ಬಡವ ಸೋದರನ ಮುಂದೆ ಹಿಡಿದು ಹೇಳಿದ:
“ ಈ ದಿಂಡನ್ನು ನಿನ್ನ ಮಗಳಿಗೆ ಕೊಡು. ಅವಳಿಗೆ ಹೇಳು, ಇದನ್ನು ನೆನಸಿ, ಒಣಗಿಸಿ ,
ಹಿಂಜಿ ನೂಲು ತೆಗೆದು ಅದರಿಂದ ನೂರು ಗಜ ಬಟ್ಟೆ ನೇಯಬೇಕು, ಅಂತ ... ಮಾಡದೆ ಇದ್ದರೆ
ನಿನಗೆ ಕಷ್ಟ ತಪ್ಪದು.”
ಬಡವ ಸೋದರ ಮನೆಗೆ ಹೋಗಿ ಮತ್ತೆ ಅಳುತ್ತ ಕೂತ. ಮಗಳು ಬಂದು ಕೇಳುತ್ತಾಳೆ:
“ ಯಾಕಪ್ಪ ಅಳುತಿದೀಯ ? ”
“ನೋಡಮ್ಮ , ಧಣಿಗಳು ನಿನಗೆ ಈ ಅಗಸೆ ಗಿಡದ ದಿಂಡು ಕಳಿಸಿಕೊಟ್ಟಿದಾರೆ. ನೀನು ಇದನ್ನು
ನೆನಸಿ, ಒಣಗಿಸಿ, ಹಿಂಜಿ ನೂಲು ತೆಗೆದು ಅದರಿಂದ ನೂರು ಗಜ ಬಟ್ಟೆ ನೇಯಬೇಕಂತೆ .”
ಮರಸ್ಯ ಒಂದು ಚಾಕುವನ್ನು ತೆಗೆದುಕೊಂಡು ಹೊರ ಹೋಗಿ ಒಂದು ಗಿಡದಿಂದ ಅದರ
ಅತ್ಯಂತ ತೆಳುವಾದ ರೆಂಬೆಯನ್ನು ಕಡಿದುಕೊಂಡು ಬಂದಳು. ಅದನ್ನು ಅಪ್ಪನಿಗೆ ಕೊಟ್ಟು ಹೇಳಿ
ದಳು :
- “ ಅಪ್ಪ , ಈ ರೆಂಬೆಯನ್ನು ಧಣಿಗಳಿಗೆ ಕೊಟ್ಟು ಇದರಿಂದ ಒಂದು ಹಿಕ್ಕಣಿಕೆ ಹಾಗೂ ಹಂಜಿ
ಗೋಲನ್ನು ಮಾಡಿಕೊಡುವಂತೆ ಹೇಳು. ಅದರ ಸಹಾಯದಿಂದ ನಾನು ನೂಲು ನೂತು ಅವ
ರಿಗೆ ಬಟ್ಟೆ ನೇಯು ಕೊಡುತ್ತೇನೆ.”
ಬಡವಸೋದರ ರೆಂಬೆಯನ್ನು ಧಣಿಗೆ ಕೊಂಡೊಯ್ದು ಕೊಟ್ಟು ಮಗಳು ಏನು ಹೇಳಿದಳೋ
ಅದೆಲ್ಲವನ್ನೂ ಹೇಳಿದ. ಧಣಿ ನೋಡಿದ, ನೋಡಿದ, ಆ ರೆಂಬೆಯನ್ನು ಪಕ್ಕಕ್ಕೆ ಎಸೆದ. ಆಮೇಲೆ
ಯೋಚಿಸಿದ : “ಓಹೋ , ಇವಳನ್ನು ಮೋಸಗೊಳಿಸುವುದು ಸಾಧ್ಯವಿಲ್ಲ. ಇವಳು ಎಲ್ಲರಂತಲ್ಲ
ಎಂದು ಕಾಣಿಸುತ್ತೆ ! ” ಆಮೇಲೆ ತುಂಬ ತುಂಬ ಯೋಚನೆ ಮಾಡಿ ಆ ಬಡವನಿಗೆ ಹೇಳಿದ :
“ಹೋಗಿ ಹೇಳು ನಿನ್ನ ಮಗಳಿಗೆ : ಅವಳು ನನ್ನ ಮನೆಗೆ ಅತಿಥಿಯಾಗಿ ಬರಬೇಕು. ಹೇಗೆ
ಅಂದರೆ, ನಡೆದುಕೊಂಡ ಬರಬಾರದು, ಸವಾರಿಮಾಡಿಕೊಂಡೂ ಬರಬಾರದು, ಬರಿಗಾಲಲ್ಲೂ
ಇರಬಾರದು ಬೂಟನ್ನೂ ತೊಟ್ಟಿರಬಾರದು, ನನಗಾಗಿ ಕಾಣಿಕೆ ತರಲೂ ಬೇಕು ತರದೆ ಇರಲೂ
ಬೇಕು. ಅವಳು ಇದನ್ನು ಮಾಡದೆ ಹೋದರೆ ಅವಳಿಗೆ ಕೇಡು ತಪ್ಪದು.”
ಅಪ್ಪ ಮನೆಗೆ ಹೋಗಿ ಅಳುತ್ತ ಕುಳಿತ. ಮಗಳು ಬಂದಳು . ಅವನು ಅವಳಿಗೆ ಹೇಳಿದ :
“ ಈಗ ಏನು ಮಾಡುತಿ, ಮಗಳೇ ? ಧಣಿ ಹೀಗೆ ಆಜ್ಞೆ ಮಾಡಿದ್ದಾರೆ. ಹಾಗೆಂದು ಅವನು
ಅವಳಿಗೆ ಎಲ್ಲವನ್ನೂ ಹೇಳಿದ.
ಮರಸ್ಯ ಹೇಳಿದಳು : "ನೀನೇನೂ ದುಃಖಿಸಬೇಡ, ಅಪ್ಪ , ಎಲ್ಲ ಸರಿಯಾಗಿ ಆಗುತ್ತೆ .
ಹೋಗಿ ನನಗೆ ಒಂದು ಜೀವಂತ ಮೊಲವನ್ನು ಕೊಂಡುಕೊಂಡು ಬಾ .”
ಅಪ್ಪ ಹೋಗಿಜೀವಂತ ಮೊಲವನ್ನು ಕೊಂಡು ತಂದ . ಮರಸ್ಯ ತಕ್ಷಣವೇ ಧಣಿಯ ಮನೆಗೆ
ಹೊರಡಲು ಸಿದ್ದಳಾಗ ತೊಡಗಿದಳು . ಮೊದಲು ಒಂದು ಕಾಲಿಗೆ ಒಂದು ಹರಕು ಬೂಟು
ತೊಟ್ಟಳು, ಇನ್ನೊಂದು ಕಾಲನ್ನು ಬರಿದಾಗಿಯೇ ಬಿಟ್ಟಳು. ಒಂದು ಜಾರುಬಂಡಿ
ತಂದು ಅದಕ್ಕೆ ಒಂದು ಹೊತ ಕಟ್ಟಿದಳು. ಆಮೇಲೆ ಒಂದು ಗುಬ್ಬಚ್ಚಿಯನ್ನು ಹಿಡಿದು ಇಟ್ಟು
ಕೊಂಡಳು . ಇಷ್ಟು ಮಾಡಿದ ಮೇಲೆ ಅವಳು ಮೊಲವನ್ನು ಕಂಕುಳಲ್ಲಿ ಇರಿಸಿಕೊಂಡಳು. ಗುಬ್ಬಚ್ಚಿ
ಯನ್ನು ಕೈಯಲ್ಲಿ ಹಿಡಿದುಕೊಂಡಳು . ಒಂದು ಕಾಲನ್ನು ಜಾರುಬಂಡಿಯಲ್ಲಿರಿಸಿದಳು. ಇನ್ನೊಂದನ್ನು
ನೆಲದ ಮೇಲಿರಿಸಿದಳು - ಒಂದು ಕಾಲನ್ನು ಹೋತ ಒಯ್ದರೆ ಇನ್ನೊಂದು ನಡೆದುಕೊಂಡು
ಹೋಗುತ್ತೆ . ಈ ರೀತಿ ಅವಳು ಧಣಿಯ ಮನೆಗೆ ಬಂದಳು . ಅಂಗಳದಲ್ಲೇ ಅವಳನ್ನು ಕಂಡ ಧಣಿ
ತಾನು ಸೋತೆನೆಂದು ತಿಳಿದ. ಅವನಿಗೆಕೋಪಬಂದಿತು . ತನ್ನ ಸೇವಕರಿಗೆ ಕೂಗಿ ಹೇಳಿದ :
“ ನಾಯಿಗಳನ್ನು ಅವಳ ಮೇಲೆ ಛಬಿಡಿ ! ”
ಅವರು ಅವಳನ್ನು ಬೇಟೆನಾಯಿಗಳಿಂದ ನಾಶಗೊಳಿಸಲು ಯತ್ನಿಸಿದರು . ಆದರೆ ಅವಳು
ಮೊಲವನ್ನು ಹೊರ ಬಿಟ್ಟಳು. ಬೇಟೆನಾಯಿಗಳು ಅವಳ ಮೇಲೆಬೀಳುವ ಬದಲು ಆ ಮೊಲವನ್ನು
ಅಟ್ಟಿಸಿಕೊಂಡು ಹೋದವು. ಆಗ ಅವಳು ಮಹಲಿನೊಳಗೆ ಧಣಿಯ ಬಳಿಗೆ ಹೋಗಿಬಾಗಿ ವಂದಿಸಿ
ಹೇಳಿದಳು :
“ನೋಡಿ, ಧಣಿಗಳೇ , ನಿಮ್ಮಲ್ಲಿಗೆ ಅತಿಥಿಯಾಗಿ ಬಂದಿದ್ದೇನೆ. ನಿಮಗೆ ಈ ಗುಬ್ಬಚ್ಚಿಯನ್ನು
ಕಾಣಿಕೆಯಾಗಿ ತಂದಿದ್ದೇನೆ.”
ಧಣಿ ಗುಬ್ಬಚ್ಚಿಯನ್ನು ತೆಗೆದುಕೊಳ್ಳ ಬಯಸಿ ಕೈ ನೀಡಿದ. ಅವಳು ಅದನ್ನು ಬಿಟ್ಟು ಬಿಟ್ಟಳು.
ಓಹ್, ಅದು ಪುರ್ ಎಂದು ತೆರೆದ ಕಿಟಕಿಯಿಂದ ಆಚೆಗೆ ಹಾರಿ ಹೋಯಿತು.
ಅದೇ ಸಮಯಕ್ಕೆ ಸರಿಯಾಗಿ ಇಬ್ಬರು ರೈತರು ಧಣಿಯ ಬಳಿಗೆ ತಮ್ಮ ಜಗಳದ ನ್ಯಾಯ
ತೀರ್ಮಾನಕ್ಕಾಗಿ ಬಂದರು . ಧಣಿ ಅವರನ್ನು ಕೇಳಿದ:
“ ಏನು ಬಂದಿರಿ, ಸಜ್ಜನರೇ ? ಏನು ಸಮಾಚಾರ ? ”
ಅವರಲ್ಲೊಬ್ಬ ಹೇಳಿದ: “ಅದು ಹೀಗೆ, ಮಹಾ ಸ್ವಾಮಿಗಳೇ ! ನಾವಿಬ್ಬರೂ ಹೊಲದಲ್ಲೇ
ಮಲಗಿ ರಾತ್ರಿ ಕಳೆದೆವು. ಬೆಳಿಗ್ಗೆ ಏಳುತ್ತಲೇ ನೋಡುತ್ತೇವೆ- ನನ್ನ ಕುದುರೆ ಮರಿ
ಹಾಕಿದೆ ! ”
ಎರಡನೆಯ ವ್ಯಕ್ತಿ ಹೇಳಿದ : “ ಅದು ಸುಳ್ಳು , ಮಹಾಪ್ರಭು ! ಮರಿ ಹಾಕಿದುದು ನನ್ನ
ಕುದುರೆ , ನೀವೇ ತೀರ್ಮಾನ ಹೇಳಿ, ಧಣಿಗಳೇ ! ”
ಧಣಿ ತುಂಬ ತುಂಬ ಯೋಚನೆ ಮಾಡಿದ. ಆಮೇಲೆ ಹೇಳಿದ:
ಕುದುರೆಮರಿಯನ್ನೂ ನಿಮ್ಮ ಎರಡು ಕುದುರೆಗಳನ್ನೂ ಇಲ್ಲಿಗೆ ಕರತನ್ನಿ . ಯಾವ ಕುದುರೆಯ
ಬಳಿಗೆ ಮರಿ ಓಡಿ ಹೋಗುತ್ತೊ ಅದೇ ಅದರ ತಾಯಿ .”
- ಎರಡು ಕುದುರೆಗಳನ್ನೂ ತಂದು ದೂರದೂರದಲ್ಲಿ ಕಟ್ಟಿ ಹಾಕಿದರು . ಆಮೇಲೆಮರಿಯನ್ನು
ತಂದು ಅವುಗಳ ಮಧ್ಯದಲ್ಲಿರಿಸಿದರು . ಇಬ್ಬರು ರೈತರೂ ಮರಿ ತಮ್ಮ ತಮ್ಮ ಕುದುರೆಯ
ಬಳಿಯೇ ಹೋಗಲೆಂದು ಆ ಮರಿಯನ್ನು ಎಷ್ಟು ಪುಸಲಾಯಿಸಿದರು ! ಆದರೆ ಆ ಮರಿಗೆ ಯಾವ
ಕಡೆಗೆ ಹೋಗಬೇಕೆಂಬುದೇ ತಿಳಿಯದಾಯಿತು. ಬೇರೆ ಯಾವುದೋ ಕಡೆಗೆ ಓಡಿ ಹೋಯಿತು.
ಎಲ್ಲರೂ ಗೊಂದಲಕ್ಕೊಳಗಾದರು . ಈಗೇನು ಮಾಡುವುದು ? ಆ ಮರಿ ಯಾರದೆಂದು ಹೇಗೆ
ತೀರ್ಮಾನಿಸುವುದು ? ಆಗ ಮರಸ್ಯ ಮುಂದೆ ಬಂದು ಹೇಳಿದಳು :
“ನೀವು ಹೀಗಲ್ಲ , ಬೇರೆ ರೀತಿಯಲ್ಲಿ ಮಾಡಿ . ಕುದುರೆಮರಿಯನ್ನು ಒಂದು ಜಾಗದಲ್ಲಿ
ಕಟ್ಟಿ ಹಾಕಿ, ಎರಡು ಕುದುರೆಗಳನ್ನೂ ಬಿಚ್ಚಿ ಬಿಟ್ಟು ಬಿಡಿ . ಯಾವ ಕುದುರೆ ಮರಿಯ ಬಳಿಗೆ
ಓಡಿ ಹೋಗುತ್ತದೋ ಅದೇ ಅದರ ತಾಯಿ . ”
ಹಾಗೆಯೇ ಮಾಡಲಾಯಿತು. ಕುದುರೆಗಳನ್ನು ಬಿಚ್ಚಿ ಬಿಡಲಾಯಿತು. ಕುದುರೆಮರಿಯನ್ನು
ತಂದು ಅವುಗಳ ಮುಂದೆ ಕಟ್ಟಿ ಹಾಕಲಾಯಿತು. ಒಂದು ಕುದುರೆ ಅದರ ಬಳಿಗೆ ಓಡಿ
ಹೋಯಿತು. ಇನ್ನೊಂದು ನಿಂತಲ್ಲೇ ನಿಂತಿದ್ದಿತು.
- ಈಗ ಧಣಿಗೆ ತಿಳಿಯಿತು ಅವಳು ಎಂತಹ ಬುದ್ದಿವಂತೆ ಅಂತ. ಅವಳನ್ನು ಯಾವ ರೀತಿ
ಯಲ್ಲೂ ಅವನುಸೋಲಿಸದಾಗಿದ್ದ. ಅವಳನ್ನು ಶಾಂತಿಯಿಂದ ಮನೆಗೆ ಹೋಗಲು ಬಿಟ್ಟುಕೊಟ್ಟ .
by admin | ಫೆಬ್ರ 21, 2020 | ಓದಿ ಕಲಿ
ಒಮ್ಮೆ ಮೂವರು ಸೋದರರು ವಾಸಿಸುತ್ತಿದ್ದರು. ಅವರು ತಮ್ಮ ತಂದೆತಾಯಿಯರನ್ನು
ಎಳೆಯ ವಯಸ್ಸಿನಲ್ಲೇ ಕಳೆದುಕೊಂಡಿದ್ದರು. ಮನೆ ಇಲ್ಲ, ಮಠ ಇಲ್ಲ, ಹೊಲ ಇಲ್ಲ, ಬೆಳೆ ಇಲ್ಲ.
ಅನಾಥರಾಗಿದ್ದ ಅವರು ಒಂದು ದಿನ ಕೆಲಸ ಹುಡುಕಿಕೊಂಡು ಹೊರಟರು. ಹೋಗುತ್ತ ಯೋಚಿ
ಸುತ್ತಾರೆ: “ ಅಯೊ , ಯಾರಾದರೂ ಒಳ್ಳೆಯ ಒಡೆಯ ಸಿಕ್ಕಿದರೆ ಎಷ್ಟು ಚೆನ್ನಾಗಿರುತ್ತೆ !
ಕೆಲಸ ಮಾಡಿಕೊಂಡು ಹೊಟ್ಟೆ ಹೊರೆದುಕೊಳ್ಳಬಹುದು !” ನೋಡುತ್ತಾರೆ - ಒಬ್ಬ ಮುದುಕ
ಬರುತ್ತಿದ್ದಾನೆ. ಹಣ್ಣು ಹಣ್ಣು ಮುದುಕ . ಬಿಳಿ ಗಡ್ಡ ಮಂಡಿಯವರೆಗೂ ಇಳಿಬಿದ್ದಿದೆ. ಈ ಮುದುಕ
ಮೂವರು ಸೋದರರನ್ನೂ ನಿಲ್ಲಿಸಿ ಕೇಳಿದ :
“ ಎಲ್ಲಿಗೆ ಹೊರಟಿರಿ, ಮಕ್ಕಳೇ ? ”
ಅವರು ಉತ್ತರಿಸಿದರು :
“ಕೆಲಸ ಹುಡುಕಿಕೊಂಡು ಹೊರಟಿದ್ದೇವೆ. ”
“ ಯಾಕೆ ನಿಮ್ಮ ಬಳಿ ಹೋಲ- ಕಾಣಿ ಏನೂ ಇಲ್ಲವೇ ? ”
“ ಇಲ್ಲ ” ಅವರೆಂದರು . “ ಯಾರಾದರೂ ಒಳ್ಳೆಯ ಒಡೆಯ ಸಿಕ್ಕಿದರೆ ನಾವು ಅವನಿಗೆ
ಶ್ರದ್ದೆಯಿಂದ ಸೇವೆ ಸಲ್ಲಿಸುತ್ತೇವೆ, ಅವನನ್ನು ನಮ್ಮ ಸ್ವಂತ ತಂದೆಯೆಂದೇ ಕಂಡುಕೊಳ್ಳುತ್ತೇವೆ.”
ಮುದುಕ ಸ್ವಲ್ಪ ಹೊತ್ತು ಯೋಚಿಸಿ ಹೇಳಿದ:
“ ಹಾಗಾದರೆ, ನೀವು ನನಗೆ ಮಕ್ಕಳಾಗಿ, ನಾನು ನಿಮಗೆ ತಂದೆಯಾಗುತ್ತೇನೆ. ಆಗಬಹುದೆ ?
ನಾನು ನಿಮ್ಮನ್ನು ದೊಡ್ಡವರನ್ನಾಗಿ ಬೆಳೆಸುತ್ತೇನೆ. ಪ್ರಾಮಾಣಿಕ ಜೀವನ ನಡೆಸುವುದನ್ನು , ಅಂತ
ರಂಗ ಶುದ್ದಿಯಿಂದ ಬಾಳಿ ಬದುಕುವುದನ್ನು ಹೇಳಿಕೊಡುತ್ತೇನೆ. ಆದರೆ ನೀವು ನಾನು ಹೇಳಿದ
ಹಾಗೆ ಕೇಳಬೇಕಷ್ಟೆ . ”
ಸೋದರರು ಒಪ್ಪಿಕೊಂಡು ಆ ಮುದುಕನ ಹಿಂದೆ ಹೊರಟರು . ಅವರು ದಟ್ಟವಾದ ಕಾಡು
ಗಳನ್ನೂ ಅಗಲವಾದ ಹೊಲಗದ್ದೆಗಳನ್ನೂ ದಾಟಿಕೊಂಡು ಹೋದರು. ಹೋಗುತ್ತಾರೆ, ಹೋಗು
ತಾರೆ. ನೋಡುತ್ತಾರೆ - ಒಂದು ಮನೆ ಕಂಡುಬರುತ್ತೆ , ಎಂಥ ಅಚ್ಚುಕಟ್ಟಾದ, ಗಾಳಿ ಬೆಳಕಿನಿಂದ
ಕೂಡಿದ ಮನೆ ! ಸುತ್ತ ಸುಂದರವಾದ ತೋಟ, ತೋಟದ ತುಂಬ ಘಮಘಮಿಸುವ ಬಣ್ಣ ಬಣ್ಣದ
ಹೂಗಳು . ಪಕ್ಕದಲ್ಲೇ ಚೆರಿ ಹಣ್ಣಿನತೋಟ. ಆ ತೋಟದಲ್ಲಿ ಒಬ್ಬ ಹುಡುಗಿ - ಆ ಹೂಗಳಂತೆಯೇ
ಸುಂದರಳಾದ, ಉಲ್ಲಾಸಯುತಳಾದ , ಕಂಗೊಳಿಸುವ ಹುಡುಗಿ. ಅವಳನ್ನು ಕಂಡೊಡನೇ ಹಿರಿಯ
ಸೋದರ ಹೇಳಿದ:
- “ ಈ ಹುಡುಗಿ ನನ್ನ ಹೆಂಡತಿಯಾದರೆ ಎಷ್ಟು ಚೆನ್ನ ! ಸ್ವಂತ ಹೊಲ, ಹೆಚ್ಚಿನ ಸಂಖ್ಯೆಯಲ್ಲಿ
ಸ್ವಂತ ದನಕರು ಇದ್ದರೆ ಎಷ್ಟು ಚೆನ್ನ ! ”
ಮುದುಕ ಅವನಿಗೆ ಹೇಳಿದ :
“ ಅದಕ್ಕೇನಂತೆ, ಹೋಗಿ ಕೇಳೋಣ. ನಿನಗೆ ಹೆಂಡತಿ , ಹೊಲ, ದನಕರುಗಳು ಎಲ್ಲ
ಸಿಕ್ಕಂತಾಗುತ್ತೆ . ಸಂತೋಷದಿಂದ ಜೀವಿಸಿಕೊಂಡಿರುವಂತೆ. ಆದರೆ ಜೀವನದಲ್ಲಿ ಋಜು
ಮಾರ್ಗವನ್ನು ಮಾತ್ರ ಮರೆಯಬೇಡ. ”
ಅವರು ಹೋದರು . ಕೇಳಿದರು , ಒಪ್ಪಿಗೆಯಾಯಿತು. ಸಂಭ್ರಮದ ಮದುವೆಯ ನಡೆ
ಯಿತು. ಹಿರಿಯ ಸೋದರ ಒಡೆಯನಾಗಿ ತನ್ನ ಎಳೆಯ ಹೆಂಡತಿಯೊಂದಿಗೆ ಆ ಮನೆಯಲ್ಲೇ
ಉಳಿದ.
ಮುದುಕನೂ ಇನ್ನಿಬ್ಬರು ಸೋದರರೂ ಮುಂದೆ ನಡೆದರು . ದಟ್ಟವಾದ ಕಾಡುಗಳನ್ನೂ
ಅಗಲವಾದ ಹೊಲಗಳನ್ನೂ ದಾಟಿಕೊಂಡು ಹೋದರು. ಹೋಗುತ್ತಾರೆ, ಹೋಗುತ್ತಾರೆ.
ನೋಡುತ್ತಾರೆ - ಒಂದು ಮನೆ ಕಂಡುಬರುತ್ತೆ . ಚೆನ್ನಾದ, ಬೆಳಕಿನಿಂದಕೂಡಿದ ಮನೆ. ಮನೆಯ
ಪಕ್ಕದಲ್ಲಿ ಒಂದು ಕೊಳ, ಕೊಳದ ಬಳಿಯೇ ಒಂದು ಮಿಲ್ , ಮನೆಯ ಸಾಪದಲ್ಲಿ ಚೆಲುವೆ
ಯಾದ ಒಬ್ಬ ಹುಡುಗಿ ಏನೋ ಕೆಲಸ ಮಾಡುತ್ತಿದ್ದಾಳೆ. ಮಧ್ಯಮ ಸೋದರ ಅವಳನ್ನು ಕಂಡೊ
ಡನೆಯೇ ಹೇಳಿದ :
- “ ಈ ಹುಡುಗಿ ನನ್ನ ಹೆಂಡತಿಯಾದರೆ ಎಷ್ಟು ಚೆನ್ನ ! ಜೊತೆಗೆ ನನಗೆ ಸ್ವಂತ ಮಿಲ್ಲು, ಕೊಳ
ಇರುವುದೂ ಒಳ್ಳೆಯದು. ನಾನು ಮಿಲ್ಲಿನಲ್ಲಿ ಕುಳಿತು ಗೋಧಿ ಹಿಟ್ಟು ಮಾಡುತ್ತೇನೆ. ಸುಖದ
ತೃಪ್ತಿಯ ಬಾಳು ನಡೆಸಬಹುದು ! ”
ಮುದುಕ ಹೇಳಿದ :
“ ಅದಕ್ಕೇನಂತೆ , ಮಗು. ನಿನಗಿಷ್ಟವಾದರೆ ಅದು ಹಾಗೇ ಆಗುತ್ತೆ ! ”
ಅವರು ಮನೆಯ ಒಳ ಹೋದರು . ಹುಡುಗಿಯೊಂದಿಗೆ ಮಾತುಕತೆ ನಡೆಸಿದರು . ಸಂಭ್ರ
ಮದ ಮದುವೆಯ ಆಯಿತು. ಈಗ ಮಧ್ಯಮ ಸೋದರ ತನ್ನ ಎಳೆಯ ಹೆಂಡತಿಯೊಂದಿಗೆ
ಆ ಮನೆಯಲ್ಲೇ ಉಳಿದ. ಮುದುಕ ಅವನಿಗೆ ಹೇಳಿದ :
“ ಸರಿ , ಮಗು, ಸುಖದಿಂದ ಬಾಳು . ಆದರೆ ಋಜು ಮಾರ್ಗವನ್ನು ಮಾತ್ರ ಮರೆಯಬೇಡ. ”
ಅವರು - ಕಿರಿಯ ಸೋದರ ಮತ್ತು ಅವನ ಸಾಕು ತಂದೆ – ಮುಂದೆ ನಡೆದರು .ಹೋದರು ,
ಹೋದರು , ನೋಡುತ್ತಾರೆ - ಒಂದು ಬಡ ಗುಡಿಸಿಲು ಕಾಣುತ್ತೆ . ಅದರಿಂದ ಒಬ್ಬ ಹುಡುಗಿ
ಹೊರಬರುತ್ತಾಳೆ. ಉಷಸ್ಸಿನಂತೆ ಸೊಬಗಿನಿಂದ ಕೂಡಿದ್ದಾಳೆ. ಆದರೆ ಬಡವಿ , ಚಿಂದಿ ಬಟ್ಟೆ ತೊಟ್ಟಿ
ದಾಳೆ. ಅವಳನ್ನು ಕಂಡ ಕಿರಿಯ ಸೋದರ ಹೇಳುತ್ತಾನೆ:
“ ಈ ಹುಡುಗಿ ನನ್ನ ಹೆಂಡತಿಯಾದರೆ ಎಷ್ಟು ಚೆನ್ನ ! ನಾವು ಒಟ್ಟಿಗೆ ದುಡಿದು ಏನು ಸಂಪಾ
ದಿಸುತ್ತೇವೋ ಅದನ್ನು ನನಗಿಂತ ಬಡವರಾದವರೊಂದಿಗೆ ಹಂಚಿಕೊಂಡು ಬಾಳಬಹುದು. ”
ಮುದುಕ ಹೇಳಿದ:
“ ಅದು ನಿನ್ನಿಚ್ಛೆಯಾದರೆ, ಹಾಗೆಯೇ ಆಗಲಿ , ಮಗು ! ಆದರೆ ಋಜು ಮಾರ್ಗವನ್ನು
ಮಾತ್ರ ಮರೆಯಬೇಡ.”
ಅವನು ಮೂರನೆಯ ಸೋದರನ ವಿವಾಹವನ್ನೂ ನೆರವೇರಿಸಿ ತನ್ನ ದಾರಿ ಹಿಡಿದುಹೋದ.
ಹೀಗೆಮೂವರು ಸೋದರರೂ ಜೀವನ ನಡೆಸಿಕೊಂಡು ಹೋದರು . ಹಿರಿಯ ಮಗ ತುಂಬ
ಶ್ರೀಮಂತನಾದ, ತನಗಾಗಿ ಹೊಸ ಮನೆ ಕಟ್ಟಿಕೊಂಡ. ಬೇಕಾದಷ್ಟು ಚಿನ್ನ ಗುಡ್ಡೆ ಹಾಕಿದ. ಅವನ
ಯೋಚನೆಯಲ್ಲಿ ಇನ್ನಷ್ಟು ಮತ್ತಷ್ಟು ಚಿನ್ನ ಗುಡ್ಡೆ ಹಾಕಬೇಕು ಅನ್ನುವುದಷ್ಟೆ ಆಗಿತ್ತು . ಬಡವರಿಗೆ
ಸಹಾಯ ಮಾಡುವ ಮಾತಿನ ಸೊಲ್ಲೇ ಇಲ್ಲ. ಅವರನ್ನು ಕಂಡರೆ ಬೈದು ಅಟ್ಟುತ್ತಿದ್ದ !
ಮಧ್ಯಮ ಸೋದರನ ಏಳಿಗೆ ಪಡೆದ. ತನ್ನ ಮಿಲ್ಲಿನಲ್ಲಿ ಕೆಲಸ ಮಾಡಲು ಅನೇಕ ಕೆಲಸ
ಗಾರರನ್ನು ನೇಮಿಸಿಕೊಂಡ . ತಾನೇ ಸ್ವಲ್ಪವೂ ಕೆಲಸ ಮಾಡುತ್ತಿರಲಿಲ್ಲ . ಸದಾ ಮಲಗಿರುವುದು ,
ತಿನ್ನುವುದು, ಕುಡಿಯುವುದು, ಆಜ್ಞಾಪಿಸುವುದು ಅಷ್ಟೆ .
- ಕಿರಿಯ ಸೋದರ ಸರಳ ಸಾಮಾನ್ಯ ಬಾಳುವೆ ನಡೆಸುತ್ತಿದ್ದ. ಮನೆಯಲ್ಲಿ ಏನಾದರೂ ಇದ್ದರೆ
ಇತರರೊಂದಿಗೆ ಹಂಚಿಕೊಂಡು ಅನುಭೋಗಿಸುವುದು . ಏನೂ ಇಲ್ಲದಿದ್ದರೆ , ಪರವಾಗಿಲ್ಲ ಬೇಡ
ಅಂದುಕೊಳ್ಳುತ್ತಿದ್ದ. ಸ್ವಲ್ಪವೂ ಅಸೂಯೆ ಪಡುತ್ತಿರಲಿಲ್ಲ.
ಬಿಳಿ ಗಡ್ಡದ ಮುದುಕ, ಆ ಸಾಕು ತಂದೆ, ಜಗತ್ತಿನಲ್ಲಿ ಸುತ್ತುತ್ತ ಹೋದ. ಕೊನೆಗೊಮ್ಮೆ
ತನ್ನ ಸಾಕು ಮಕ್ಕಳು ಹೇಗೆ ಬಾಳುತ್ತಿದ್ದಾರೆ. ಖಜು ಮಾರ್ಗ ಬಿಟ್ಟು ಹೋಗಿಲ್ಲ ತಾನೆ, ಎಂದು
ನೋಡ ಬಯಸಿದ. ಅವನು ಮುದುಕ ಭಿಕ್ಷುಕನ ಹಾಗೆ ವೇಷ ಮರೆಸಿಕೊಂಡು ಚಿಂದಿ ಬಟ್ಟೆ
ಉಟ್ಟು ಹಿರಿಯ ಮಗನ ಬಳಿಗೆ ಹೋದ. ಅಂಗಳಕ್ಕೆ ಹೋಗಿತಗ್ಗಿದ ನಡುಗುವ ಧ್ವನಿಯಲ್ಲಿಕೇಳಿದ:
“ ಈ ಮುದುಕ ಭಿಕ್ಷುಕನಿಗೆ ಒಂದಿಷ್ಟು ಏನಾದರೂ ಭಿಕ್ಷೆ ಕೊಡುವಿರಾ ? ”
ಮಗ ಹೇಳಿದ:
“ನೀನೇನೂ ಅಷ್ಟು ಮುದುಕನಲ್ಲ. ಭಿಕ್ಷೆ ಬೇಡೋಕೆ ನಾಚಿಕೆಯಾಗೊಲ್ವೆ ! ಬೇಕಾದರೆ ಕೆಲಸ
ಮಾಡು ! ನಾನೇ ಈಚೆಗಷ್ಟೇ ನನ್ನ ಕಾಲ ಮೇಲೆ ನಿಲ್ಲುವಂತಾಗಿದ್ದೇನೆ. ಹೋಗು, ಹೋಗಾಚೆ !”
ಆದರೆ ಅವನ ಬಳಿ ಸಂಪತ್ತು ಪೆಟ್ಟಿಗೆಗಳಲ್ಲಿ ತುಂಬಿ ತುಳುಕುತ್ತಿತ್ತು . ಹೊಸ ಮನೆಗಳನ್ನು
ಕಟ್ಟಿಕೊಂಡಿದ್ದ , ಉಗ್ರಾಣದ ತುಂಬ ಸಾಮಾನುಗಳಿದ್ದವು, ತಿನ್ನಲು ಬೇಕಾದಷ್ಟು ಆಹಾರವಿತ್ತು .
ದುಡ್ಡಂತೂ ಎಣಿಸಲಾಗದಷ್ಟಿತ್ತು . ಆದರೂ ಬಡವರಿಗೆ ಕಿಂಚಿತ್ತೂ ಸಹಾಯ ಮಾಡುತ್ತಿರಲಿಲ್ಲ !
ಮುದುಕ ಅವನಿಂದ ಹೊರಟ . ಒಂದು ವೆರ್ಸ್ಟ್ ದೂರಹೋಗಿ ತನ್ನ ಸಾಕು ಮಗನ ಮನೆ
ಹಾಗೂ ಹೊಲದ ಕಡೆಗೊಮ್ಮೆ ತಿರುಗಿ ನೋಡಿದ.ಕೂಡಲೇ ಅವೆಲ್ಲ ಸುಟ್ಟು ಬೂದಿಯಾದವು!
ಮುದುಕ ಮಧ್ಯಮ ಸೋದರನ ಬಳಿಗೆ ಹೋದ. ಹೋಗಿನೋಡುತ್ತಾನೆ - ಅವನ ಮನೆ,
ಮಿಲ್ಲು, ಕೊಳ, ಹೊಲ, ಎಲ್ಲ ಚೆನ್ನಾಗಿವೆ. ಅವನು ಮಿಲ್ನಲ್ಲಿ ಕುಳಿತಿದ್ದ. ಮುದುಕ ಬಾಗಿ ನಡು
ಗುವ ಧ್ವನಿಯಲ್ಲಿ ಕೇಳಿದ :
“ ಪುಣ್ಯವಂತರೇ , ನನಗೆ ಒಂದು ಹಿಡಿ ಹಿಟ್ಟು ಕೊಡ್ತೀರ? ನಾನೊಬ್ಬ ಮುದಿ ಭಿಕ್ಷುಕ.
ತಿನ್ನಲು ಏನೂ ಇಲ್ಲ.”
- “ ನನಗೇ ಸಾಕಷ್ಟಿಲ್ಲ, ನಿನಗೆಂಥದು ಕೊಡಲಿ ! ನಿನ್ನಂಥ ಅಲೆಮಾರಿಗಳು ಎಷ್ಟು ಮಂದಿಯೋ !
ನಿಮಗೆಲ್ಲ ಕೊಟ್ಟು ಪೂರೈಸುವುದು ಎಲ್ಲಿ ಸಾಧ್ಯ ? ” ಅವನೆಂದ.
ಮುದುಕ ಅವನಿಂದಲೂ ಹೊರಟ . ಸ್ವಲ್ಪ ದೂರ ಹೋಗಿ ಹಿಂದಿರುಗಿ ನೋಡಿದ - ಅಲ್ಲಿದ್ದ
ಮನೆ ಮಿಲ್ಲು ಎಲ್ಲ ಹೇಗೆ ಹೊತ್ತಿಕೊಂಡು ಉರಿದು ಬೂದಿಯಾದವು!
ಇನ್ನೂ ಭಿಕ್ಷುಕನ ವೇಷದಲ್ಲಿದ್ದಂತೆಯೇ ಮುದುಕ ಕಿರಿಯ ಮಗನ ಬಳಿಗೆ ಹೋದ. ಅಲ್ಲಿ
ಕಿರಿಯ ಮಗ ಬಡತನದಲ್ಲಿ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದ. ಚಿಕ್ಕದಾಗಿದ್ದರೂ ಮನೆ ಚೊಕ್ಕಟ
ವಾಗಿತ್ತು .
“ ಸಜ್ಜನರೇ , ಈ ಮುದುಕ ಭಿಕ್ಷುಕನಿಗೆ ಒಂದು ತುಂಡು ರೊಟ್ಟಿ ಕೊಡುತ್ತೀರ? ”
ಕಿರಿಯ ಸೋದರ ಅವನಿಗೆ ಹೇಳುತ್ತಾನೆ:
“ ಮನೆಯ ಒಳಗೆ ಹೋಗು, ಅಜ್ಜ , ಅಲ್ಲಿ ನಿನಗೆ ಊಟ ಹಾಕ್ತಾರೆ. ದಾರಿಗೆ ಬುತ್ತಿಯನ್ನೂ
ಕಟ್ಟಿ ಕೊಡ್ತಾರೆ.”
ಮುದುಕ ಮನೆಯ ಒಳಗೆ ಹೋದ. ಮನೆಯೊಡತಿ ಅವನನ್ನು ನೋಡಿದಳು - ಅವನ
ಬಟ್ಟೆ ಎಲ್ಲ ಎಷ್ಟು ಚಿಂದಿಚಿಂದಿಯಾಗಿದೆ ! ತಕ್ಷಣವೇ ಒಳಗಿನಿಂದ ಹೊಸ ಬಟ್ಟೆ ತಂದುಕೊಟ್ಟಳು.
ಅವನು ಅದನ್ನು ಉಟ್ಟುಕೊಂಡ. ಅವನು ಈ ಬಟ್ಟೆ ತೊಡುತ್ತಿದ್ದಾಗ ಅವನ ಎದೆಯ ಮೇಲೆ
ಒಂದು ದೊಡ್ಡ ಗಾಯ ಇದ್ದುದನ್ನು ಮನೆಯೊಡತಿಯ ಅವಳ ಪತಿಯ ಕಂಡರು . ಕೂಡಲೇ
ಮುದುಕನನ್ನು ಕುರ್ಚಿಯ ಮೇಲೆಕೂರಿಸಿದರು . ಅವನಿಗೆ ಹೊಟ್ಟೆ ತುಂಬ ತಿನ್ನಲು ಕುಡಿಯಲು
ಕೊಟ್ಟರು. ಅನಂತರ ಅವನನ್ನು ಕೇಳಿದರು :
"ಹೇಳು, ಅಜ್ಜ , ನಿನ್ನ ಎದೆಯ ಮೇಲೆ ತುಂಬ ದೊಡ್ಡ ಗಾಯ ಇರುವಂತಿದೆಯಲ್ಲ.
ಅದು ಹೇಗಾಯಿತು ? ”
“ ಹೌದು, ನನ್ನ ಎದೆಯ ಮೇಲೆದೊಡ್ಡ ಗಾಯ ಇದೆ. ಅದರಿಂದ ನಾನು ಬೇಗನೆಯೇ ಸಾಯ
ಲಿದ್ದೇನೆ. ಇನ್ನು ನನಗೆ ಜೀವದಿಂದಿರಲು ಒಂದೇ ಒಂದು ದಿನ ಅಷ್ಟೆ ಉಳಿದಿರೋದು. ”
“ ಅಯ್ಯೋ , ಪಾಪ !” ಎಂದಳು ಹೆಂಡತಿ, “ ಈ ಗಾಯಕ್ಕೆ ಯಾವ ಮದ್ದೂ ಇಲ್ಲವೇ ? ”
“ಇದೆ ” ಎಂದ ಅವನು . “ ಒಂದು ಮದ್ದು ಇದೆ. ಅದನ್ನು ಯಾರು ಬೇಕಾದರೂ ಕೊಡ
ಬಹುದು. ಆದರೆ ಯಾರೂ ಕೊಡುತ್ತಿಲ್ಲ, ಅಷ್ಟೆ . ”
ಗಂಡ ಕೇಳಿದ:
“ ಯಾಕೆ ಕೊಡುತ್ತಿಲ್ಲ? ಹೇಳು, ಏನದು ಮದ್ದು ? ”
“ ಅದು ಬಹಳ ಕಷ್ಟದ್ದು ! ಯಾವುದೇ ಮನೆಯ ಮಾಲೀಕ ತನ್ನ ಮನೆಯನ್ನೂ ಅದರಲ್ಲಿ
ರುವ ಎಲ್ಲ ವಸ್ತುಗಳನ್ನೂ ಸುಟ್ಟು ಹಾಕಿ ಅದರಿಂದ ಬರುವ ಬೂದಿಯನ್ನು ನನ್ನ ಗಾಯಕ್ಕೆ ಹಚ್ಚಿ
ದರೆ ಆಗ ಗಾಯ ವಾಸಿಯಾಗುತ್ತೆ , ನಾನು ಇನ್ನಷ್ಟು ಕಾಲ ಬಾಳಬಹುದು. ”
ಕಿರಿಯ ಸೋದರ ಯೋಚನೆ ಮಾಡಿದ. ತುಂಬ ಹೊತ್ತು ಯೋಚನೆ ಮಾಡಿದ. ಆಮೇಲೆ
ಹೆಂಡತಿಯನ್ನು ಕೇಳಿದ: “ ಏನಂತೀಯ , ನೀನು ? ”
“ ನನಗೇನು ಅನಿಸುತ್ತೆಂದರೆ, ಮನೆಯನ್ನಾದರೆ ನಾವು ಇನ್ನೊಂದು ಕಟ್ಟಿಕೊಳ್ಳಬಹುದು .
ಮನುಷ್ಯ ಸತ್ತ ಮೇಲೆ ಮತ್ತೆ ಬದುಕಲಾರ ” ಎಂದಳು ಅವಳು.
“ಸರಿ, ಹಾಗೇ ಆಗಲಿ ” ಎಂದ ಅವಳ ಗಂಡ “ ಮಕ್ಕಳನ್ನೆಲ್ಲ ಹೊರಗೆ ಒಯ್ಯ . ”
ಅವರು ಮಕ್ಕಳನ್ನು ಹೊರಗೆ ಕಳುಹಿಸಿದರು . ತಾವೇ ಹೊರ ಬಂದರು . ತನ್ನ ಮನೆಯನ್ನೂ
ಸಂಪತ್ತನ್ನೂ ಸುಟ್ಟು ಹಾಕುವುದು ಕಿರಿಯ ಸೋದರನಿಗೆ ದುಃಖಕರವೇ ಆಗಿತ್ತು . ಆದರೆ ಆ ಭಿಕ್ಷು
ಕನ ಸ್ಥಿತಿ ಇನ್ನೂ ಹೆಚ್ಚು ದುಃಖಕರವಾಗಿತ್ತು . ಅವನು ಕೊಳ್ಳಿ ತೆಗೆದುಕೊಂಡು ಮನೆಗೆ ಬೆಂಕಿ
ಹಚ್ಚಿದ. ಮನೆ ಎಲ್ಲ ಸುಟ್ಟು ಬೂದಿಯಾಗಿ ಕೆಳಕ್ಕೆ ಬಿದ್ದಿತು. ಆದರೆ ನೋಡುತ್ತಾರೆ - ಅದರ
ಸ್ಥಳದಲ್ಲಿ ಒಂದು ಹೊಸ, ಬೆಳಕಿನಿಂದ ಕೂಡಿದ, ಎತ್ತರವಾದ ಮನೆ ನಿಂತಿದೆ !
ಅಜ್ಜ ನಿಂತು ತನ್ನ ಗಡ್ಡದೊಳಗೇ ಮುಸಿಮುಸಿ ನಗುತ್ತಿದ್ದ.
“ನೋಡು, ಮಗು, ನೀವುಮೂವರು ಸೋದರರಲ್ಲಿ ನೀನೊಬ್ಬನೇ ಋಜು ಮಾರ್ಗ ಬಿಟ್ಟು
ಅಡ್ಡ ಸರಿದಿಲ್ಲ, ಅನ್ನುವುದನ್ನು ನಾನೀಗ ಕಂಡೆ. ನೀನು ಯಾವತ್ತೂ ಸುಖ ಸಂತೋಷಗಳಿಂದ
ಬಾಳು ! ”
ಆಗ ಕಿರಿಯ ಸೋದರನಿಗೆ ತಿಳಿಯಿತು ಆ ಭಿಕ್ಷುಕ ತನ್ನ ಸಾಕು ತಂದೆ ಅಂತ. ಅವನನ್ನು
ಅಪ್ಪಿಕೊಳ್ಳಲು ಧಾವಿಸಿದ . ಆದರೆ ಆ ಮುದುಕ ಆಗಲೇ ಅಂತರ್ಧಾನನಾಗಿದ್ದ.
by admin | ಫೆಬ್ರ 21, 2020 | ಓದಿ ಕಲಿ
ಒಂದಾನೊಂದು ಕಾಲದಲ್ಲಿ ಒಬ್ಬ ಮುದುಕ, ಒಬ್ಬ ಮುದುಕಿ ವಾಸವಾಗಿದ್ದರು. ಅವರಿ
ಗೊಬ್ಬ ಮಗಳಿದ್ದಳು. ಮುದುಕಿ ತುಂಬ ಕಾಲ ಜೀವಿಸಿದಳೊ ಅಲ್ಪ ಕಾಲ ಜೀವಿಸಿದ್ದಳೋ
ತಿಳಿಯದು, ಅಂತೂ ಅವಳ ಸಾವಿನ ಸಮಯ ಸಮಿಾಪಿಸಿತು . ಸಾಯುವ ಮುನ್ನ ಅವಳು ಮುದುಕ
ನಿಗೆ ಹೇಳಿದಳು :
" ಮುದುಕ, ನೀನು ಮತ್ತೆ ಮದುವೆಯಾಗಬೇಕೂಂತ ಅಂದುಕೊಂಡರೆ , ನೋಡು, ಪಕ್ಕದ
ಮನೆಯಲ್ಲಿ ಮಗಳ ಜೊತೆ ವಾಸ ಮಾಡ್ತಿದಾಳಲ್ಲ ಆ ವಿಧವೆಯನ್ನೆಂದೂ ಮದುವೆಯಾಗಬೇಡ.
ಅವಳು ನಿನಗೇನೋ ಒಳ್ಳೆಯ ಹೆಂಡತಿಯಾಗಬಹುದು, ಆದರೆ ನಮ್ಮ ಮಗಳಿಗೆ ಒಳ್ಳೆಯ ತಾಯಿ
ಯಾಗೋಲ್ಲ! ”
“ ಆಗಲಿ , ನಾನು ಅವಳನ್ನೂ ಮದುವೆಯಾಗೊಲ್ಲ, ಯಾರನ್ನೂ ಮದುವೆಯಾಗೊಲ್ಲ”
ಎಂದ ಮುದುಕ.
ಮುದುಕಿ ಸತ್ತಳು . ಮುದುಕ ಅವಳ ಶವಸಂಸ್ಕಾರ ನಡೆಸಿದ . ಒಬ್ಬನೇ ಮಗಳೊಂದಿಗೆ ವಾಸ
ಮಾಡ ತೊಡಗಿದ. ಸ್ವಲ್ಪ ಕಾಲ ಕಳೆಯಿತು . ಒಂದು ದಿನ ಯಾವುದೋ ಕೆಲಸದ ಮೇಲೆ, ಮುದುಕಿ
ಹೇಳಿದಳಲ್ಲ ಆ ವಿಧವೆಯ ಮನೆಗೆ ಹೋದ. ತಾನು ಯಾರನ್ನೂ ಮದುವೆಯಾಗುವುದಿಲ್ಲ ಅಂತ
ಮುದುಕಿಗೆ ಹೇಳಿದ್ದ ಮಾತನ್ನು ಮರೆತ . ವಿಧವೆಯ ಮನೆಯಲ್ಲಿ ಕುಳಿತು ಅದೂ ಇದೂ ಮಾತನಾ
ಡುತ್ತ ಕೊನೆಗೆ ಮದುವೆಯ ವಿಷಯವನ್ನು ಎತ್ತಿದ. ವಿಧವೆಗೆ ಪರಮಾನಂದವಾಯಿತು.
“ ನಾನು ಬಹಳ ಕಾಲದಿಂದ ಇದಕ್ಕಾಗಿಯೇ ಕಾಯುತ್ತಿದ್ದೆ ” ಎಂದಳು ಅವಳು .
ಅವನು ಅಂದಿದ್ದೇ ತಡ ಅವಳು ತನ್ನೆಲ್ಲ ವಸ್ತುಗಳನ್ನೂ ಗಂಟುಮೂಟೆಕಟ್ಟಿಕೊಂಡು ತನ್ನ
ಮಗಳೊಂದಿಗೆ ಮುದುಕನ ಮನೆಗೆ ಅವನ ಜೊತೆಯಲ್ಲಿ ವಾಸಿಸಲು ಹೋದಳು .
- ಅವರು ಒಟ್ಟಿಗೆ ವಾಸಿಸುತ್ತಾರೆ - ಮುದುಕನ ಮಗಳು ಹಾಗೂ ಮುದುಕಿಯ ಮಗಳು.
ದುಷ್ಟ ಮುದುಕಿಗೆ ಮುದುಕನ ಮಗಳನ್ನು ಕಂಡರಾಗದು . ಮೂರು ಹೊತ್ತೂ ಆ ಬಡಪಾಯಿ
ಹುಡುಗಿಯನ್ನು ಬಯ್ಯುತ್ತಿದ್ದಳು . ಅಲ್ಲದೆ ಮುದುಕನ ಮಗಳು ಮುದುಕಿಯ ಮಗಳು ಇಬ್ಬರೂ
ತಮ್ಮತಮ್ಮಲ್ಲೇ ತುಂಬ ಆಗಾಗ್ಗೆ ಜಗಳ ಆಡುತ್ತಿದ್ದರು.
ಅವರು ಆಗಾಗ್ಗೆ ಹಳ್ಳಿ ಕೂಟಗಳಿಗೆ ಹೋಗುತ್ತಿದ್ದರು. ಆಗ ಮುದುಕನ ಮಗಳು ಹೆಚ್ಚಾಗಿ
ರಾಟೆಯಿಂದ ನೂಲು ತೆಗೆಯುತ್ತ ಹೆಣೆಯುತ್ತ ಕುಳಿತಿರುತ್ತಿದ್ದಳು. ಮುದುಕಿಯ ಮಗಳಾದರೋ
ಇಡೀ ರಾತ್ರಿ ಹಳ್ಳಿಯ ಹೈದರೊಂದಿಗೆ ಸರಸ ವಿನೋದಗಳಲ್ಲಿ ಕಳೆಯುತ್ತಿದ್ದಳು. ಸರಸದಲ್ಲಿ ಮೈ
ಮರೆತು ಅವಳು ಹೆಣಿಗೆಯನ್ನೆಲ್ಲ ಗೋಜು ಮಾಡಿ ಬಿಟ್ಟು , ಎಳೆಗಳನ್ನು ಹರಿಯುತ್ತಿದ್ದಳು.
ಮುಂಜಾನೆ ಮನೆಗೆ ಹಿಂದಿರುಗುತ್ತಿದ್ದರು. ಬೇಲಿಯವರೆಗೂ ಬರುತ್ತಿದ್ದರು. ಈಗ ಬೇಲಿ ದಾಟ
ಬೇಕು. ಆಗ ಮುದುಕಿಯ ಮಗಳು ಹೇಳುತ್ತಿದ್ದಳು:
“ನಿನಗೆ ಈ ಹೆಣಿಗೆಯನ್ನೆಲ್ಲ ಹಿಡಿದುಕೊಂಡು ದಾಟುವುದು ಕಷ್ಟವಾಗುತ್ತೆ . ನನಗೆ ಕೊಡು.
ನೀನು ದಾಟುವಾಗ ನಾನು ಹಿಡಿದುಕೊಂಡಿದ್ದೇನೆ. ”
“ ಆಗಲಿ ” ಅನ್ನುತ್ತಿದ್ದಳು ಮುದುಕನ ಮಗಳು . “ ಹುಂ , ತಗೋ , ಹಿಡಿದುಕೊಂಡಿರು . ”
ಮುದುಕನ ಮಗಳು ಬೇಲಿ ದಾಟುವ ಸಮಯದಲ್ಲಿ ಮುದುಕಿಯ ಮಗಳು ಹೆಣಿಗೆಯನ್ನೆಲ್ಲ
ತೆಗೆದುಕೊಂಡು ತಾಯಿಯ ಬಳಿಗೆ ಓಡುತ್ತಿದ್ದಳು , ಇಲ್ಲಸಲ್ಲದ ಸುಳ್ಳುಗಳನ್ನು ಪೋಣಿಸಿ ಕಥೆ
ನೇಯು ಹೇಳುತ್ತಿದ್ದಳು - ಮಲಸೋದರಿ ಇಡೀ ರಾತ್ರಿ ಹುಡುಗರೊಂದಿಗೆ ಚಕ್ಕಂದವಾಡಿದಳು ,
ಎಳೆ ಹರಿದು ಬಿಟ್ಟಳು, ಗೋಜು ಮಾಡಿ ಬಿಟ್ಟಳು ಎಂದೆಲ್ಲ ಹೇಳುತ್ತಿದ್ದಳು .
“ ನಾನಾದರೋ ನೆಟ್ಟಗೆ ಕೂತು ನೇಯ್ದೆ , ನೇರವಾಗಿ ಮನೆಗೆ ಬಂದೆ. ನೋಡು, ಅವಳು
ಎಷ್ಟು ಸೋಮಾರಿ ! ಎಷ್ಟು ನಿರ್ಲಕ್ಷ ಅವಳದು ! ”
ಮುದುಕನ ಮಗಳು ಮನೆಗೆ ಬಂದಾಗ ಮಲತಾಯಿ ಅವಳನ್ನು ಚೆನ್ನಾಗಿ ಬಯ್ಯುತ್ತಿದ್ದಳು,
ಹೊಡೆಯುತ್ತಿದ್ದಳು. ಮುದುಕನಿಗೆ ದೂರುತ್ತಿದ್ದಳು :
“ ನಿನ್ನ ಮಗಳಂಥವಳನ್ನು ಎಲ್ಲೂ ಕಂಡಿಲ್ಲ. ಇವಳಿಗೆ ಕೆಲಸ ಮಾಡಲೇ ಇಷ್ಟವಿಲ್ಲವಲ್ಲ !
ನೀನೂ ಅವಳಿಗೆ ಏನೂ ಹೇಳಿಕೊಡುವುದೂ ಇಲ್ಲ ! ”
ಮಲತಾಯಿ ಎಷ್ಟೇ ಬೈದರೂ ಹೊಡೆದರೂ , ಮಲಸೋದರಿ ಎಷ್ಟೇ ಕುಚೇಷ್ಟೆ ಮಾಡಿ
ದರೂ ಮುದುಕನ ಮಗಳಂತೂ ತನ್ನ ತಂದೆಗೆ ಒಂದಿಷ್ಟೂ ಚಾಡಿ ಹೇಳುತ್ತಿರಲಿಲ್ಲ. ಎಲ್ಲವನ್ನೂ
ಸಹಿಸಿಕೊಂಡು ತನ್ನಷ್ಟಕ್ಕೆ ತಾನು ಮೌನದಿಂದ ಕೆಲಸ ಮಾಡುತ್ತಲೇ ಹೋಗುತ್ತಿದ್ದಳು . ಮುದುಕ
ಅವಳನ್ನು ಪ್ರೀತಿಸುತ್ತಿದ್ದುದನ್ನು ಕಂಡು ಮಲತಾಯಿಯ ಮಲಸೋದರಿಯ ಇನ್ನಷ್ಟು
ಕೆರಳುತ್ತಿದ್ದರು . ಅವಳನ್ನು ಈ ಜಗತ್ತಿನಲ್ಲೇ ಇಲ್ಲದಂತೆ ಮಾಡಲು ಏನು ಮಾಡಬೇಕು ಎಂದು
ಯೋಚಿಸ ತೊಡಗಿದರು .
ಮುದುಕಿ ಮುದುಕನನ್ನು ಛೇಡಿಸ ತೊಡಗಿದಳು . ಪದೇಪದೇ ಹೇಳ ತೊಡಗಿದಳು :
“ ನಿನ್ನ ಮಗಳು ಶುದ್ಧ ಸೋಮಾರಿ. ಅವಳಿಗೆ ಏನು ಮಾಡಲೂ ಇಷ್ಟವಿಲ್ಲ . ಸುಮ್ಮನೆ
ಬೀದಿ ಅಲೀತಾಳೆ, ಮನೆಗೆ ಬಾಳೆ, ತಿಂತಾಳೆ, ಮಲಗುತ್ತಾಳೆ. ಇಷ್ಟಾದರೂ ನೀನು ಅವಳಿಗೆ
ದಂಡಿಸೊಲ್ಲ, ಒಂದು ಮಾತೂ ಹೇಳೊಲ್ಲ! ಅವಳನ್ನು ಯಾರಿಗಾದರೂ ಕೆಲಸದ ತೊತ್ತನ್ನಾಗಿ
ಕೊಟ್ಟುಬಿಡೋದು ವಾಸಿ. ”
“ ಆದರೆ ಯಾರು ತಗೋತಾರೆ ? ” ಮುದುಕ ಕೇಳಿದ.
“ ಎಲ್ಲಿಗಾದರೂ ಸರಿ ಕರಕೊಂಡು ಹೋಗಿ ಬಿಟ್ಟು ಬಿಡು ! ಸದ್ಯಕ್ಕೆ ಅವಳು ನಮ್ಮ ಮನೆಯ
ಲ್ಲಿಲ್ಲದಿದ್ದರೆ ಸಾಕು ! ”
ಮುದುಕಿ ಮುದುಕನನ್ನು ತುಂಬ ಪೀಡಿಸ ತೊಡಗಿದಳು , ದಿನದಿನವೂ ಅದೇ ಹಾಡು -
“ ಮಗಳನ್ನು ಎಲ್ಲಾದರೂ ಕರೆದುಕೊಂಡು ಹೋಗಿ ಬಿಟ್ಟು ಬಿಡು ! ” ಮುದುಕ ಬೇಸತ್ಯ .
ಮಗಳ ಬಗೆಗೆ ಎಷ್ಟೇ ಪ್ರೀತಿ ಕರುಣೆ ಇದ್ದರೂ , ಅವನು ಏನೂ ಮಾಡದಾದ.
ಅವರು ಗಂಟುಮೂಟೆ ಕಟ್ಟಿಕೊಂಡು ಹೊರಟರು . ದಟ್ಟವಾದ ಕಾಡಿನ ಬಳಿ ಬಂದರು .
ಮಗಳು ತಂದೆಗೆ ಹೇಳಿದಳು :
“ನೀನು ಮನೆಗೆ ಹೋಗಪ್ಪ . ನಾನು ಮುಂದೆ ಒಬ್ಬಳೇ ಹೋಗುತ್ತೇನೆ. ಎಲ್ಲಾದರೂ ಕೆಲಸ
ಕಂಡುಕೊಳ್ಳುತ್ತೇನೆ. ”
" ಹಾಗೇ ಆಗಲಿ , ಮಗಳೇ ! ” ಎಂದ ಮುದುಕ .
ಮಗಳಿಗೆ ವಿದಾಯ ಹೇಳಿದ. ಅವನು ಒಂದು ದಾರಿ ಹಿಡಿದ, ಮಗಳು ಇನ್ನೊಂದು ದಾರಿ
ಹಿಡಿದಳು .
ಹುಡುಗಿ ಆ ದಟ್ಟವಾದ ಕಾಡಿನಲ್ಲಿ ಹೊರಟಳು . ನೋಡುತ್ತಾಳೆ - ಅಲ್ಲೊಂದು ಸೇಬಿನ
ಗಿಡ ಇದೆ. ಅದರ ಸುತ್ತಮುತ್ತ ಎಷ್ಟು ಕಳೆ ಬೆಳೆದಿದೆ ಎಂದರೆ ಸೇಬಿನ ಗಿಡವೇ ಕಾಣುತ್ತಿಲ್ಲ,
ಅಷ್ಟು !
“ಪ್ರೀತಿಯ ಹುಡುಗಿ ! ನನ್ನ ಸುತ್ತಮುತ್ತ ಬೆಳೆದಿರೋ ಈ ಕಳೆಯನ್ನೆಲ್ಲ ಕಿತ್ತು ಹಾಕಿ ನನ್ನನ್ನು
ಸ್ವಲ್ಪ ಶುದ್ಧಗೊಳಿಸುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ” ಎಂದು
ಹೇಳಿತು ಸೇಬಿನ ಗಿಡ.
ಮುದುಕನ ಮಗಳು ಅಂಗಿಯ ತೋಳು ಹಿಂದಕ್ಕೆ ಸರಿಸಿಕೊಂಡು ಕೆಲಸದಲ್ಲಿ ತೊಡಗಿದಳು.
ಕಳೆಯನ್ನೆಲ್ಲ ಕಿತ್ತಳು, ಹೆಚ್ಚಿನ ರೆಂಬೆಗಳನ್ನೆಲ್ಲ ಕತ್ತರಿಸಿ ಹಾಕಿ ಗಿಡವನ್ನು ಸವರಿದಳು , ಬುಡದ
ಸುತ್ತ ಹೊಸ ಮಣ್ಣು ಮರಳು ಹರಡಿದಳು . ಸೇಬಿನ ಗಿಡ ಅವಳಿಗೆ ತುಂಬ ವಂದನೆ ಸಲ್ಲಿಸಿತು .
ಹುಡುಗಿ ಮುಂದುವರಿದಳು.
* ಹೋಗುತ್ತಾಳೆ, ಹೋಗುತ್ತಾಳೆ, ಅವಳಿಗೆ ಬಾಯಾರುತ್ತೆ . ಒಂದು ಬಾವಿಯ ಬಳಿಗೆ ಹೋಗು
ತಾಳೆ, ಬಾವಿ ಹೇಳುತ್ತೆ :
- “ಪ್ರೀತಿಯ ಹುಡುಗಿ !. ನನ್ನನ್ನು ಸ್ವಲ್ಪ ಶುದ್ಧಗೊಳಿಸುತ್ತೀಯ ? ಸ್ವಲ್ಪ ಅಂದಗೊಳಿಸು
ತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯಮಾಡ್ತೀನಿ. ”
ಹುಡುಗಿ ಬಾವಿಯನ್ನು ಶುದ್ಧಗೊಳಿಸಿದಳು, ಸುತ್ತ ಬೆಣಚುಕಲ್ಲು ಮರಳು ಹರಡಿ ಅಂದ
ಗೊಳಿಸಿದಳು . ಬಾವಿ ಅವಳಿಗೆ ತುಂಬ ವಂದನೆ ಸಲ್ಲಿಸಿತು. ಹುಡುಗಿ ಮುಂದೆ ಹೊರಟಳು.
ಒಂದು ನಾಯಿ ಅವಳ ಕಡೆಗೇ ಓಡಿ ಬಂದಿತು . ಅದು ತುಂಬ ಕೊಳಕಾಗಿತ್ತು . ಮೈಗೆಲ್ಲ
ಹುಲ್ಲು ಮಣ್ಣು ಮೆತ್ತಿಕೊಂಡಿತ್ತು .
“ಪ್ರೀತಿಯ ಹುಡುಗಿ! ನನ್ನನ್ನು ಸ್ವಲ್ಪ ಶುಭ್ರಗೊಳಿಸುತ್ತೀಯ ? ಪುನಃ ಚೆನ್ನಾಗಿ ಕಾಣುವಂತೆ
ಮಾಡುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ” ಎಂದದು ಹೇಳಿತು .
ಹುಡುಗಿ ನಾಯಿಯ ಮೈಯನ್ನು ತಿಕ್ಕಿ ಶುಭ್ರಗೊಳಿಸಿದಳು , ಅದರ ಬಾಲಕ್ಕೆ ಅಂಟಿಕೊಂಡಿದ್ದ
ಮುಳ್ಳುಗಳನ್ನು ಕಿತ್ತು ಹಾಕಿದಳು.
“ ತುಂಬ ವಂದನೆಗಳು ನಿನಗೆ, ಪ್ರೀತಿಯ ಹುಡುಗಿ ! ” ಎಂದದು ಹೇಳಿತು .
“ಓಹ್ , ಪರವಾಗಿಲ್ಲ . ಇದೇನು ಮಹಾ ! ” ಎಂದು ಹೇಳಿ ಹುಡುಗಿ ಮುಂದೆ ಹೊರಟಳು .
ನೋಡುತ್ತಾಳೆ - ಅಲ್ಲೊಂದು ಒಲೆ ಇದೆ. ಅದರ ಗಾರೆ ಎಲ್ಲ ಕಿತ್ತು ಬಂದಿದೆ. ಅದರ ಒಡ
ಲೆಲ್ಲ ಸುಟ್ಟು ಕಪ್ಪಗಾಗಿದೆ. ಅದರ ಪಕ್ಕದಲ್ಲಿ ಜೇಡಿಮಣ್ಣಿನ ರಾಶಿ ಇದೆ. ಒಲೆ ಹೇಳಿತು:
- “ಪ್ರೀತಿಯ ಹುಡುಗಿ ! ನನ್ನನ್ನು ತಿಕ್ಕಿ ಸ್ವಲ್ಪ ಸ್ವಚ್ಛಗೊಳಿಸುತ್ತೀಯ ? ಆ ಜೇಡಿಮಣ್ಣು
ಮೆತ್ತಿ ಸ್ವಲ್ಪ ಅಂದಗೊಳಿಸುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ !”
ಸರಿ, ಹುಡುಗಿ ಒಲೆಯನ್ನು ತಿಕ್ಕಿ ಸ್ವಚ್ಛಗೊಳಿಸಿದಳು, ಕಪ್ಪು ಗಾರೆಯನ್ನು ಕಿತ್ತು ಹಾಕಿದಳು ,
ಅದರ ಜಾಗದಲ್ಲಿ ಹೊಸ ಜೇಡಿಮಣ್ಣು ಮೆತ್ತಿದಳು , ಸುತ್ತ ಹೂಗಳನ್ನೂ ಎಲೆಗಳನ್ನೂ ಇರಿಸಿ
ಅಂದಗೊಳಿಸಿದಳು . ಒಲೆ ಹುಡುಗಿಗೆ ತುಂಬ ವಂದನೆ ಸಲ್ಲಿಸಿತು . ಹುಡುಗಿ ಮುಂದೆ ಹೊರಟಳು .
ಹೋಗುತ್ತಾಳೆ, ಹೋಗುತ್ತಾಳೆ, ಅವಳಿಗೊಬ್ಬ ಹೆಂಗಸು ಭೇಟಿಯಾಗುತ್ತಾಳೆ.
“ನಮಸ್ಕಾರ, ಹುಡುಗಿ ! ” ಅವಳು ಹೇಳುತ್ತಾಳೆ.
“ನಮಸ್ಕಾರ, ಕುಶಲವೇ ? ” ಹುಡುಗಿ ಕೇಳುತ್ತಾಳೆ,
“ ಎಲ್ಲಿಗೆ ಹೊರಟೆ ನೀನು ? ”
“ ಎಲ್ಲಾದರೂ ಕೆಲಸ ಸಿಕ್ಕುತ್ತೆ ಅಂತ ಹುಡುಕಿಕೊಂಡು ಹೊರಟಿದೀನಿ. ”
“ ಹಾಗಾದರೆ ನನ್ನ ಬಳಿಯೇ ಕೆಲಸಕ್ಕೆ ಬಾ ! ”
“ ಆಗಲಿ, ಸಂತೋಷವೇ . ಬರೀನಿ! ” ಉತ್ತರಿಸುತ್ತಾಳೆ ಹುಡುಗಿ.
“ ನಾನು ಹೇಗೆ ತೋರಿಸಿಕೊಡುತ್ತೇನೋ ಹಾಗೆ ಮಾಡಿದರೆ ನನ್ನ ಮನೆಯಲ್ಲಿ ಕೆಲಸವೇನೂ
ನಿನಗೆ ಕಷ್ಟವಾಗದು. ಆಗುತ್ತ ? ”
“ ಯಾಕೆ ಆಗೋಲ್ಲ? ಒಂದು ಸಾರಿ ತೋರಿಸಿಕೊಡಿ. ಆಮೇಲೆ ನಾನೇ ಎಲ್ಲ
ತಿಳಿಕೊತೀನಿ. ”
ಅವರು ಗುಡಿಸಿಲಿಗೆಹೋದರು . ಹೆಂಗಸು ಹೇಳಿದಳು :
“ನೋಡು, ಹುಡುಗಿ, ಇಲೊಡು. ಇಲ್ಲಿ ಕೆಲವು ಮಡಕೆಗಳಿವೆ . ಬೆಳಿಗ್ಗೆ ಹಾಗೂ ಸಾಯಂಕಾಲ
ನೀನು ಈ ಮಡಕೆಗಳಲ್ಲಿ ನೀರು ಕಾಯಿಸಬೇಕು, ಆ ನೀರನ್ನು ಒಂದು ಉದ್ದನೆಯ ಬಾನೆಗೆ
ಹಾಕಬೇಕು. ಅದಕ್ಕೆ ಸ್ವಲ್ಪ ಹಿಟ್ಟು ಬೆರಸಿ ಕಣಕ ತಯಾರಿಸಬೇಕು. ಆದರೆ ನೋಡು, ಅದು ತುಂಬ
ಬಿಸಿಯಾಗಿರಬಾರದು ! ಆಮೇಲೆ ಬಾಗಿಲ ಬಳಿ ನಿಂತು ಮೂರು ಬಾರಿ ಗಟ್ಟಿಯಾಗಿ ಶಿಳ್ಳೆ
ಹಾಕಬೇಕು. ಆಗ ನಿನ್ನ ಬಳಿಗೆ ನಾನಾ ರೀತಿಯ ಮೃಗಗಳು ಬರುತ್ತವೆ. ಅವಕ್ಕೆ ನೀನು ಚೆನ್ನಾಗಿ,
ಹೊಟ್ಟೆ ತುಂಬ, ತಿನ್ನಿಸಬೇಕು. ಆಮೇಲೆ ಅವು ತಮಗೆ ಬೇಕಾದ ಸ್ಥಳಗಳಿಗೆ ಹೊರಟು ಹೋಗು
ತವೆ. ನೀನೇನೂ ಅವಕ್ಕೆ ಹೆದರಬೇಕಾಗಿಲ್ಲ. ಅವು ನಿನಗೆ ಏನೂ ಹಾನಿ ಮಾಡವು.”
“ ಹಾಗೇ ಆಗಲಿ, ನೀವು ಹೇಗೆ ಹೇಳಿದಿರೋ ಹಾಗೇ ಎಲ್ಲವನ್ನೂ ಮಾಡುತ್ತೇನೆ” ಎಂದಳು
ಹುಡುಗಿ,
ಅವರು ಸಂಜೆ ಊಟ ಮಾಡಿದರು . ಹುಡುಗಿ ಒಲೆ ಹೊತ್ತಿಸಿದಳು , ನೀರು ಕಾಯಿಸಿದಳು ,
ಅದನ್ನು ಬಾನೆಗೆ ಸುರಿದಳು , ಅದಕ್ಕೆ ಹಿಟ್ಟು ಬೆರೆಸಿ ಮಿದ್ದು ಕಣಕ ಮಾಡಿದಳು . ಆಮೇಲೆ ಬಾಗಿಲ
ಬಳಿ ಹೋಗಿ ನಿಂತು ಮೂರು ಬಾರಿ ಗಟ್ಟಿಯಾಗಿ ಶಿಳ್ಳೆ ಹಾಕಿದಳು - ಹೇಗೆ ಓಡಿ ಬಂದವು
ತರಹೇವಾರಿ ಕಾಡು ಮೃಗಗಳು ಅವಳ ಬಳಿಗೆ ! ಅವು ಹೊಟ್ಟೆ ತುಂಬ ತಿಂದವು, ಒಂದೊಂದೂ
ಒಂದೊಂದು ದಿಕ್ಕಿನಲ್ಲಿ ಚೆದುರಿ ಹೋದವು.
ಹೀಗೆ ಮುದುಕನ ಮಗಳು ಇಡೀ ಒಂದು ವರ್ಷ ಅವಳ ಒಡತಿ ಹೇಗೆ ಹೇಳಿದಳೊ ಹಾಗೇ
ಎಲ್ಲವನ್ನೂ ಮಾಡುತ್ತ ಸೇವೆ ಸಲ್ಲಿಸಿದಳು . ಒಂದು ವರ್ಷ ಮುಗಿದ ಮೇಲೆ ಯಜಮಾನಿ ಮುದು
ಕನ ಮಗಳಿಗೆ ಹೇಳಿದಳು :
“ ಇಲ್ಲಿ ಕೇಳಮ್ಮ , ಹುಡುಗಿ ! ನೀನು ನನ್ನ ಮನೆಗೆ ಕೆಲಸಕ್ಕೆ ಬಂದು ಇವತ್ತಿಗೆ ಸರಿಯಾಗಿ
ಒಂದು ವರ್ಷವಾಗುತ್ತೆ . ನಿನಗೆ ಇಷ್ಟವಾದರೆ ಇನ್ನಷ್ಟು ಕಾಲ ಇಲ್ಲೇ ಉಳಿ, ಬೇಡವಾದರೆ, ನಿನ
ಗಿಷ್ಟ ಬಂದಂತೆ ಮಾಡು . ನೀನು ನನಗಾಗಿ ತುಂಬ ಚೆನ್ನಾಗಿ ಕೆಲಸ ಮಾಡಿದೆ. ಅದಕ್ಕಾಗಿ ನಿನಗೆ
ತುಂಬ ವಂದನೆಗಳು . ”
ತನಗೆ ಊಟ ವಸತಿ ಕೊಟ್ಟುದಕ್ಕಾಗಿ ಮತ್ತು ಎಲ್ಲ ರೀತಿಯಲ್ಲೂ ಚೆನ್ನಾಗಿನೋಡಿಕೊಂಡು
ದಕ್ಕಾಗಿ ಹುಡುಗಿ ಆ ಹೆಂಗಸಿಗೆ ಕೃತಜ್ಞತೆಸೂಚಿಸಿ ಹೀಗೆ ಹೇಳಿದಳು :
“ ನನಗೆ ಮನೆಗೆ ಹೋಗೋಣ ಅನ್ನಿಸಿದೆ. ಇದುವರೆವಿಗೂ ಇಟ್ಟುಕೊಂಡುದಕ್ಕಾಗಿ ನಿಮಗೆ
ತುಂಬ ವಂದನೆಗಳು , ಒಡತಿ ! ”
ಹೆಂಗಸು ಅವಳಿಗೆ ಹೇಳಿದಳು :
“ ಸರಿ , ಹಾಗೇ ಮಾಡು. ನಿನಗಿಷ್ಟವಾದ ಕುದುರೆಯನ್ನೂ ಗಾಡಿಯನ್ನೂ ಆಯ್ತು
ಕೋ . ”
ಆ ಹೆಂಗಸು ಒಂದು ದೊಡ್ಡ ಪೆಟ್ಟಿಗೆಯ ತುಂಬ ನಾನಾ ರೀತಿಯ ಸೊಗಸಾದ ವಸ್ತು
ಗಳನ್ನು ತುಂಬಿ ಹುಡುಗಿಗೆ ಕೊಟ್ಟಳು. ತಾನೇ ಕಾಡಿನ ಅಂಚಿನವರೆಗೂ ಹೋಗಿ ಅವಳನ್ನು
ಬೀಳ್ಕೊಟ್ಟಳು. ಇಬ್ಬರೂ ಪರಸ್ಪರರಿಗೆ ವಿದಾಯ ಹೇಳಿದರು . ಒಡತಿ ತನ್ನ ಮನೆಗೆ ಹಿಂದಿರುಗಿದಳು .
ಮುದುಕನ ಮಗಳು ತನ್ನ ಮನೆಯ ಕಡೆಗೆ ಹೊರಟಳು. ಎಲ್ಲ ಇಷ್ಟು ಚೆನ್ನಾಗಿ ಕೊನೆಗಂಡದ್ದು
ಅವಳಿಗೆ ಅಮಿತಾನಂದ ತಂದಿತ್ತು .
- ದಾರಿಯಲ್ಲಿ ಅವಳು ಹಿಂದೆ ತಾನು ಚೊಕ್ಕಟಗೊಳಿಸಿದ್ದ ಆ ಒಲೆಯ ಸವಿಾಪ ಬಂದಳು.
ಅದರ ತುಂಬ ಆಗಷ್ಟೆ ಬೇಯಿಸಿದ ಹಸನಾದ ಸೀರೊಟ್ಟಿಗಳಿದ್ದವು. ಅದು ಹೇಳಿತು :
“ಪ್ರೀತಿಯ ಹುಡುಗಿ ! ನೀನು ನನ್ನನ್ನು ಶುಭ್ರಗೊಳಿಸಿ ಬಲಪಡಿಸಿದೆ. ಅದಕ್ಕಾಗಿ ತಗೋ ,
ಇಲ್ಲಿರುವ ಸೀರೊಟ್ಟಿಗಳೆಲ್ಲ ನಿನ್ನವೇ .”
ಹುಡುಗಿ ವಂದನೆ ತಿಳಿಸಿ ಒಲೆಯ ಬಳಿ ಹೋದಳೋ ಇಲ್ಲವೋ ಸೀರೊಟ್ಟಿಗಳೆಲ್ಲ ತಾವೇ
ಹಾರಿ ಬಂದು ಹುಡುಗಿಯ ಗಾಡಿಯೊಳಗೆ ತುಂಬಿಕೊಂಡವು. ಅವಳು ಒಲೆಗೆ ವಂದನೆ ಹೇಳಿ
ಮುಂದೆ ಪ್ರಯಾಣ ಬೆಳೆಸಿದಳು .
ಬರುತ್ತಾಳೆ, ಬರುತ್ತಾಳೆ, ನೋಡುತ್ತಾಳೆ - ಅವಳು ಹಿಂದೆ ಸಹಾಯಮಾಡಿದ ಆ ನಾಯಿ
ಅವಳ ಬಳಿಗೆ ಓಡಿ ಬರುತ್ತಿದೆ. ಅದು ತನ್ನ ಹಲ್ಲುಗಳ ಮಧ್ಯೆ ಒಂದು ಸರವನ್ನು ಕಚ್ಚಿ ಹಿಡಿದಿದೆ.
ಹಾಗೆ
ಎಂತಹ ಸುಂದರವಾದ, ಥಳಥಳಿಸುವ, ಉದ್ದನೆಯ ಸರ ! ನಾಯಿ ಗಾಡಿಯ ಬಳಿಗೆ ಓಡಿ ಬಂದು
ಹೇಳುತ್ತೆ :
“ ಇದು ನಿನಗೆ , ಪ್ರೀತಿಯ ಹುಡುಗಿ ! ನೀನು ನನ್ನ ಮೈ ಉಜ್ಜಿ ಶುಭ್ರಗೊಳಿಸಿದುದಕ್ಕಾಗಿ,
ನನ್ನ ಬಾಲಕ್ಕೆ ಅಂಟಿಕೊಂಡಿದ್ದ ಮುಳ್ಳುಗಳನ್ನು ಕಿತ್ತು ಹಾಕಿದುದಕ್ಕಾಗಿ ! ”
ಹುಡುಗಿ ಆ ಸರವನ್ನು ಸ್ವೀಕರಿಸಿ, ನಾಯಿಗೆ ವಂದನೆ ಸಲ್ಲಿಸಿ, ಸಂತಸದಿಂದ ಮುಂದಕ್ಕೆ
ಪ್ರಯಾಣ ಮಾಡಿದಳು ,
ಬರುತ್ತಾಳೆ, ಅವಳಿಗೆ ಬಾಯಾರಿಕೆಯಾಗುತ್ತೆ . ಸಹಿಸೋಕೇ ಆಗೋಲ್ಲ, ಅಷ್ಟು ಬಾಯಾರಿಕೆ !
ತನ್ನಲ್ಲೇ ಹೇಳಿಕೊಳ್ಳುತ್ತಾಳೆ:
“ ನಾನು ಹಿಂದೆ ಶುದ್ಧಗೊಳಿಸಿದೆನಲ್ಲ ಆ ಬಾವಿಗೆ ಹೋಗಿ ಒಂದಿಷ್ಟು ನೀರು ಕುಡಿಯೋಣ. ”
ಅವಳು ಬಾವಿಯ ಬಳಿಗೆ ಹೋದಳು. ಅದರಲ್ಲಿ ಅಂಚಿನವರೆಗೂ ಅತ್ಯಂತ ಸ್ವಚ್ಛವಾದ
ನಿರ್ಮಲವಾದ ನೀರು ತುಂಬಿತ್ತು . ಬಾವಿಯ ಪಕ್ಕದಲ್ಲಿ ಒಂದು ಚಿನ್ನದ ಪೀಪಾಯಿ ಹಾಗೂ
ಒಂದು ಚಿನ್ನದ ಸೌಟು ಇದ್ದವು.
ಬಾವಿ ಹೇಳಿತು :
“ ಬಾ , ಪ್ರೀತಿಯ ಹುಡುಗಿ, ಬಾ ! ನೀರು ಕುಡಿ. ಈ ಚಿನ್ನದ ಪೀಪಾಯಿಯ ಚಿನ್ನದ ಸೌಟೂ
ನಿನ್ನವೇ , ತಗೋ ! ”
ಹುಡುಗಿ ಕುಡಿಯುತ್ತಾಳೆ. ಅದು ಕೇವಲ ನೀರಾಗಿರಲಿಲ್ಲ , ದ್ರಾಕ್ಷಾರಸವಾಗಿತ್ತು . ಅಂಥ
ರುಚಿಕರವಾದ ದ್ರಾಕ್ಷಾರಸವನ್ನು ಅವಳು ಹಿಂದೆಂದೂ ಕುಡಿದಿರಲಿಲ್ಲ. ಅವಳು ಪೀಪಾಯಿಯ
ತುಂಬ ಆ ದ್ರಾಕ್ಷಾರಸವನ್ನು ತುಂಬಿಕೊಂಡು, ಸೌಟನ್ನೂ ತೆಗೆದುಕೊಂಡು, ಬಾವಿಗೆ ವಂದನೆ
ಸಲ್ಲಿಸಿ ಪ್ರಯಾಣ ಮುಂದುವರಿಸಿದಳು .
ಸ್ವಲ್ಪ ದೂರ ಹೋದ ಮೇಲೆ ನೋಡುತ್ತಾಳೆ – ಎಂಥ ಸುಂದರವಾದ ಸೇಬಿನ ಗಿಡ !
ಅವಳು ಹಿಂದೆ ಸಹಾಯಮಾಡಿದ್ದಳಲ್ಲ ಅದೇ ಗಿಡ . ಈಗ ಎಷ್ಟು ಫಲಭರಿತವಾಗಿ ದಟ್ಟವಾಗಿ
ಬೆಳೆದು ನಿಂತಿದೆ ! ಅದರ ಸೌಂದರ್ಯ ವರ್ಣನಾತೀತ ! ಅದರಲ್ಲಿನ ಸೇಬಿನ ಹಣ್ಣುಗಳೆಲ್ಲ
ಚಿನ್ನ ಬೆಳ್ಳಿಯವು. ಗಿಡದ ಕೊಂಬೆಗಳು ಹಣ್ಣುಗಳ ಭಾರಕ್ಕೆ ಜಗ್ಗುತ್ತಿವೆ. ಅದು
ಹೇಳಿತು :
“ಪ್ರೀತಿಯ ಹುಡುಗಿ ! ಈ ಹಣ್ಣುಗಳೆಲ್ಲ ನಿನ್ನವು. ನೀನು ನನ್ನನ್ನು ಸ್ವಚ್ಛಗೊಳಿಸಿ
ಸುಂದರಗೊಳಿಸಿದುದಕ್ಕಾಗಿ.”
ಹುಡುಗಿ ಹೇಳಿದಳು : " ವಂದನೆಗಳು ! ”
ಗಿಡದ ಕೆಳಗೆ ಹೋದಳು , ಹಣ್ಣುಗಳೆಲ್ಲ ತುಪತುಪನೆ ತಾವೇ ಉದುರಿ ಹುಡುಗಿಯ ಗಾಡಿ
ಯಲ್ಲಿ ತುಂಬಿಕೊಂಡವು.
ಎಲ್ಲವನ್ನೂ ತೆಗೆದುಕೊಂಡು ಮುದುಕನ ಮಗಳು ಮನೆಯ ಬಳಿ ಬಂದು ಕೂಗಿ ಹೇಳಿದಳು :
“ ಅಪ್ಪ ! ನೋಡು ಬಾ , ಅಪ್ಪ , ನಾನು ನಿನಗಾಗಿ ಏನೇನು ತಂದಿದೀನಿ ಅಂತ ! ”
ತಂದೆ ಗುಡಿಸಿಲಿನಿಂದ ಹೊರಬಂದು ನೋಡುತ್ತಾನೆ - ಮಗಳು ಬಂದಿದಾಳೆ. ಅವನಿಗೆ
ತುಂಬ ಸಂತೋಷವಾಯಿತು. ಅವಳನ್ನು ಅಪ್ಪಿ ಮುದ್ದಾಡಿದ . ಕೇಳಿದ :
“ಎಲ್ಲಿಗೆ ಹೋಗಿದ್ದೆ, ಮಗಳೇ ? ಏನು ಮಾಡಿದೆ ? ”
“ ಕೆಲಸ ಮಾಡಿದೆ, ಅಪ್ಪ ” ಅವಳೆಂದಳು . “ ಇವೆಲ್ಲವನ್ನೂ ಒಳಕ್ಕೆ ಕೊಂಡೊಯ್ದಿರಿ! ”
ಓಹ್ , ಅವೂ ಎಷ್ಟೊಂದು ! ಎಂಥೆಂಥ ಸೊಗಸಾದ ವಸ್ತುಗಳು ! ಇಡೀ ಗಾಡಿ ತುಂಬ !
ಅಷ್ಟೇ ಸಾಲದೆನ್ನುವಂತೆ ಅತ್ಯಂತ ಹೆಚ್ಚಿನ ಬೆಲೆಯ ಸೊಗಸಾದ ಸರ ಬೇರೆ!
ಸಾಮಾನುಗಳನ್ನೆಲ್ಲ ಒಳಕ್ಕೆ ಒಯ್ಯ ತೊಡಗಿದರು . ಒಂದು ಚೆನ್ನಾಗಿದ್ದರೆ ಇನ್ನೊಂದು ಅದ
ಕ್ಕಿಂತ ಚೆನ್ನ , ಮುದುಕನ ಮಗಳು ಇಷ್ಟೊಂದು ಸೊಗಸಾದ ವಸ್ತುಗಳನ್ನು ತಂದುದನ್ನು ಕಂಡು
ಮುದುಕಿ ಮುದುಕನನ್ನು ಪೀಡಿಸ ತೊಡಗಿದಳು :
“ಹೋಗು, ನಿನ್ನ ಮಗಳನ್ನು ಎಲ್ಲಿಗೆ ಕರಕೊಂಡು ಹೋಗಿದ್ದೆಯೋ ಅಲ್ಲಿಗೇ ನನ್ನ ಮಗಳನ್ನೂ
ಕರೆದುಕೊಂಡು ಹೋಗು! ”
ಅವಳು ಅವನನ್ನು ಎಷ್ಟು ಬಲಾತ್ಕರಿಸಿದಳೆಂದರೆ ಅವನು ಹೇಳಿದ:
“ಸರಿ, ಹೇಳು ಅವಳಿಗೆ, ಪ್ರಯಾಣಕ್ಕೆ ಸಿದ್ದವಾಗು ಅಂತ.”
ವಿದಾಯ ಹೇಳಿ ಮುದುಕನೂ ಮುದುಕಿಯ ಮಗಳೂ ಹೊರಟರು. ಕಾಡಿನ ಬಳಿ ಬಂದರು .
ಮುದುಕ ಹೇಳಿದ:
“ ಇನ್ನು ಮುಂದೆ ನೀನೇ ಹೋಗು, ಮಗಳೇ ! ನಾನು ಮನೆಗೆ ಹಿಂದಿರುಗುತ್ತೇನೆ. ”
“ ಆಗಲಿ ” ಅವಳೆಂದಳು .
ಅವರು ಅಗಲಿದರು . ಹುಡುಗಿ ಕಾಡಿನಲ್ಲಿ ಹೊರಟಳು. ಮುದುಕ ಮನೆಗೆ ಹಿಂದಿರುಗಿದ.
ಮುದುಕಿಯ ಮಗಳು ಕಾಡಿನಲ್ಲಿ ಹೋಗುತ್ತಾಳೆ, ನೋಡುತ್ತಾಳೆ - ಅಲ್ಲೊಂದು ಸೇಬಿನ
ಗಿಡವಿದೆ. ಅದರ ಸುತ್ತಮುತ್ತ ಕಳೆ ಎಷ್ಟು ತುಂಬಿದೆಯೆಂದರೆ ಸೇಬಿನ ಗಿಡವೇ ಕಾಣುತ್ತಿಲ್ಲ, ಅಷ್ಟು !
“ಪ್ರೀತಿಯ ಹುಡುಗಿ ! ನನ್ನ ಸುತ್ತಮುತ್ತ ಬೆಳೆದಿರೋ ಈ ಕಳೆಯನ್ನೆಲ್ಲ ಕಿತ್ತು ಹಾಕಿ ನನ್ನನ್ನು
ಸ್ವಲ್ಪ ಶುದ್ಧಗೊಳಿಸುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ! ” ಎಂದು
ಹೇಳಿತು ಸೇಬಿನ ಗಿಡ.
ಹುಡುಗಿ ಉತ್ತರಿಸಿದಳು : " ನನ್ನ ಕೈಯನ್ನು ಕೊಲೆ ಮಾಡಿಕೊಳ್ಳುವುದೆ ? ಅದೆಂದೂ ಆಗದು ! ”
ಹಾಗೆಂದು ಅವಳು ಮುಂದೆ ಹೊರಟಳು .
ನೋಡುತ್ತಾಳೆ - ಅಲ್ಲೊಂದು ಬಾವಿ ಇದೆ. ಅದರಲ್ಲಿ ಎಷ್ಟೊಂದು ಕೊಳೆ ತುಂಬಿದೆ ಅಂದರೆ,
ನೀರೇ ಕಾಣುತ್ತಿಲ್ಲ, ಅಷ್ಟು .
ಅದು ಹುಡುಗಿಗೆ ಹೇಳುತ್ತೆ : “ಪ್ರೀತಿಯ ಹುಡುಗಿ, ನನ್ನನ್ನು ಸ್ವಲ್ಪ ಶುದ್ಧಗೊಳಿಸುತ್ತೀಯ ?
ಸ್ವಲ್ಪ ಅಂದಗೊಳಿಸುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ! ”
- “ಹೋಗಿ, ಹೋಗಿ, ಯಾಕೆ ನೀವು ನನಗೆ ಇಷ್ಟು ಕಾಟ ಕೊಡ್ತೀರ? ಅದೆಂದೂ ಆಗದು !
ನಾನು ಮುಂದೆ ಹೋಗಬೇಕು ! ”
ಹೀಗೆ ಹೇಳಿ ಮುದುಕಿಯ ಮಗಳು ಮುಂದುವರಿದಳು .
ಹೋಗುತ್ತ ಹೋಗುತ್ತ ಅವಳು ಒಂದು ಒಲೆಯ ಬಳಿಗೆ ಬರುತ್ತಾಳೆ. ಆ ಒಲೆ ಅವಳಿಗೆ
ಹೇಳುತ್ತೆ :
“ಪ್ರೀತಿಯ ಹುಡುಗಿ ! ನನ್ನನ್ನು ತಿಕ್ಕಿ ಸ್ವಲ್ಪ ಸ್ವಚ್ಛಗೊಳಿಸುತ್ತೀಯ ? ನನ್ನನ್ನು ಅಂದ
ಗೊಳಿಸುತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ! ”
“ ನಾನೇನು ಅಂಥ ಮೂರ್ಖಳೇ ! ನಾನು ನಿನ್ನ ಗೋಡೆ ತಿಕ್ಕಬೇಕೆ ? ಅದೆಂದೂ ಆಗದು ! ”
ಹಾಗೆಂದು ಅವಳು ಮುಂದೆ ಹೊರಟಳು .
ನೋಡುತ್ತಾಳೆ - ಒಂದು ನಾಯಿ ಅವಳ ಕಡೆಗೇ ಓಡಿ ಬರುತ್ತಿದೆ. ಅದು ತುಂಬ ಕೊಳ
ಕಾಗಿದೆ. ಮೈಗೆಲ್ಲ ಮಣ್ಣು ಮೆತ್ತಿಕೊಂಡಿದೆ .
“ಪ್ರೀತಿಯ ಹುಡುಗಿ ! ನನ್ನನ್ನು ಸ್ವಲ್ಪ ಶುಭ್ರಗೊಳಿಸುತ್ತೀಯ ? ಸ್ವಲ್ಪ ಅಂದಗೊಳಿಸು
ತ್ತೀಯ ? ನಾನೂ ನಿನಗೆ ಎಂದಾದರೂ ಸಹಾಯ ಮಾಡ್ತೀನಿ! ”
ಹುಡುಗಿ ಮುಖ ಸೊಟ್ಟಗೆ ಮಾಡಿಕೊಂಡು ಹೇಳಿದಳು :
“ ಅಬ್ಬಾ , ಎಂಥ ಮಾತು ನಿನ್ನದು ! ಇಷ್ಟು ಕೊಳಕಾಗಿದೀಯ , ಮತ್ತೆ ನಾನು ನಿನ್ನನ್ನು
ಶುದ್ದಗೊಳಿಸಬೇಕೆ? ಅದೆಲ್ಲ ಆಗದು !”
ಹಾಗೆಂದು ಅವಳು ಮುಂದೆ ಹೋದಳು .
ಅಲ್ಲಿ ಮುದುಕನ ಮಗಳನ್ನು ಸಂಧಿಸಿದ ಹೆಂಗಸೇ ಇವಳನ್ನೂ ಸಂಧಿಸಿದಳು .
“ ನಮಸ್ಕಾರ, ಹುಡುಗಿ ! ” ಅವಳು ಹೇಳಿದಳು .
“ ನಮಸ್ಕಾರ . ನಿಮಗೆ ಆರೋಗ್ಯವಿರಲಿ, ಚಿಕ್ಕಮ್ಮ ! ”
“ ಎಲ್ಲಿಗೆ ಹೊರಟೆ ? ”
“ ಎಲ್ಲಾದರೂ ಕೆಲಸ ಸಿಕ್ಕುತ್ತೆ ಅಂತ ಹುಡುಕಿಕೊಂಡು ಹೊರಟೆ, ಚಿಕ್ಕಮ್ಮ ”
“ ನನ್ನ ಬಳಿಗೇ ಬಾ ! ”
“ ಆಗಲಿ , ಚಿಕ್ಕಮ್ಮ , ಎಂಥ ಕೆಲಸ ನಿಮ್ಮ ಬಳಿ ? ”
“ ಅಷ್ಟೇನೂ ಕಷ್ಟವಿಲ್ಲ, ಮಗಳೇ ! ನಾನು ಹೇಳಿದ ಹಾಗೆ ಮಾಡಿದರೆ ಎಲ್ಲ ಸುಲಭವಾಗಿ
ಆಗುತ್ತೆ . ”
“ ಯಾಕಾಗೊಲ್ಲ? ಒಂದು ಸಾರಿ ಹೇಳಿಕೊಡಿ, ಎರಡನೆ ಸಾರಿ ನಾನೇ ಮಾಡ್ತೀನಿ.”
“ಕೆಲಸ ಹೀಗಿದೆ, ಹುಡುಗಿ ” ಎಂದು ಹೇಳಿದಳು ಆ ಹೆಂಗಸು. “ ಅಲ್ಲಿ ನೋಡು, ಮಡಕೆ
ಗಳು ಕಾಣುತ್ತವ? ಬೆಳಿಗ್ಗೆ ಹಾಗೂ ಸಾಯಂಕಾಲ ನೀನು ಈ ಮಡಕೆಗಳಲ್ಲಿ ನೀರು ಕಾಯಿಸಬೇಕು.
ಆ ನೀರನ್ನು ಒಂದು ಉದ್ದನೆಯ ಬಾನೆಗೆ ಹಾಕಬೇಕು. ಅದಕ್ಕೆ ಸ್ವಲ್ಪ ಹಿಟ್ಟು ಬೆರಸಿ ಕಣಕ ತಯಾರಿಸ
ಬೇಕು . ಆದರೆ ನೋಡು, ಅದು ತುಂಬ ಬಿಸಿಯಾಗಿರಬಾರದು ! ಆಮೇಲೆ ಬಾಗಿಲ ಬಳಿ ನಿಂತು
ಮೂರು ಬಾರಿ ಗಟ್ಟಿಯಾಗಿ ಶಿಳ್ಳೆ ಹಾಕಬೇಕು. ಆಗ ನಿನ್ನ ಬಳಿಗೆ ನಾನಾ ರೀತಿಯ ಮೃಗಗಳು
ಬರುತ್ತವೆ. ಅವಕ್ಕೆ ನೀನು ಚೆನ್ನಾಗಿ, ಹೊಟ್ಟೆ ತುಂಬ , ತಿನ್ನಿಸಬೇಕು. ಆಮೇಲೆ ಅವು ತಮಗೆ ಬೇಕಾದ
ಸ್ಥಳಗಳಿಗೆ ಹೊರಟು ಹೋಗುತ್ತವೆ. ಅಂದ ಹಾಗೇ , ನೀನೇನೂ ಅವುಗಳಿಗೆ ಹೆದರಬೇಕಾದ್ದಿಲ್ಲ .
ಅವು ನಿನಗೇನೂ ಹಾನಿ ಮಾಡವು. ಈ ಕೆಲಸ ಮಾಡಬಲ್ಲೆಯಾ? ”
“ ಮಾಡಬಲ್ಲೆ ! ” ಎಂದಳು ಮುದುಕಿಯ ಮಗಳು .
ಹೀಗೆ ಅವರು ಮಾತುಕತೆ ನಡೆಸಿ ಒಪ್ಪಂದಕ್ಕೆ ಬಂದರು . ಸಂಜೆಯಾಯಿತು. ಮುದುಕಿಯ
ಮಗಳು ಒಲೆ ಹೊತ್ತಿಸಿದಳು , ನೀರು ತುಂಬಿದ ಮಡಕೆಗಳನ್ನು ಅದರ ಮೇಲಿರಿಸಿದಳು . ನೀರು
ಕುದಿಯ ತೊಡಗಿದಾಗ ಅದನ್ನು ಒಂದು ದೊಡ್ಡ ಬಾನೆಗೆ ಸುರಿದಳು . ಆಮೇಲೆ ಅದಕ್ಕೆ ಅಲ್ಲಿದ್ದ
ಇಡೀ ಹಿಟ್ಟನ್ನು ಹಾಕಿದಳು . ಅದು ಮೆತ್ತಗಿನ ಕಣಕವಾಗುವ ಬದಲು ಒಂದು ಗಟ್ಟಿ ಮುದ್ದೆ
ಯಾಯಿತು. ಬಾಗಿಲ ಬಳಿ ನಿಂತು ಒಂದು, ಎರಡು, ಮೂರು ಬಾರಿ ಶಿಳ್ಳೆ ಹಾಕಿದಳು... ನಾನಾ
ರೀತಿಯ ಮೃಗಗಳು ಬಂದು ನೆರೆಯ ತೊಡಗಿದವು. ಅವು ನಾ ಮುಂದು ತಾ ಮುಂದು ಅನ್ನುತ್ತ
ಆಹಾರ ತಿನ್ನಲು ಬಾನೆಯ ಕಡೆಗೆ ಧಾವಿಸಿದವು. ಬಾಯಿ ಹಾಕಿದವು, ತಕ್ಷಣವೇ ನೆಲದ ಮೇಲೆ
ಪಂಜಗಳನ್ನು ಮೇಲೆ ಮಾಡಿಕೊಂಡು ಬಿದ್ದವು. ಎಲ್ಲವೂ ಹಾಗೆಯೇ ಬಿದ್ದವು- ಸುಟ್ಟು ಸತ್ತು
ಬಿದ್ದವು.
ಎಲ್ಲ ಪ್ರಾಣಿಗಳೂ ತಿಂದು ಮಲಗಿ ಮತ್ತೆ ಏಳದೇ ಇದ್ದುದನ್ನು ಕಂಡು ಮುದುಕಿಯ ಮಗಳು
ಒಡತಿಯ ಬಳಿಗೆ ಹೋಗಿ ಹೇಳಿದಳು :
“ ಏನು, ಒಡತಿ , ನಿಮ್ಮ ಪ್ರಾಣಿಗಳೆಲ್ಲ ವಿಚಿತ್ರವಾದವು. ಎಲ್ಲವೂ ತಿಂದವು, ಮಲಗಿದವು,
ಮತ್ತೆ ಏಳುತ್ತಲೇ ಇಲ್ಲವಲ್ಲ !”
“ ಯಾಕೆ ಏಳುತ್ತಿಲ್ಲ ? ” ಎಂದು ಒಡತಿ ಕೂಗಿ ಹೇಳಿ ಬಾನೆಯ ಕಡೆಗೆ ಓಡಿದಳು .
ನೋಡುತ್ತಾಳೆ – ಎಲ್ಲವೂ ನಿರ್ಜಿವವಾಗಿ ಬಿದ್ದಿವೆ. ಅವಳು ಕೈ ಮೇಲೆ ತಲೆ ಹೊತ್ತುಕೊಂಡು
ಅರಚಿದಳು :
“ ಅಯ್ಯೋ , ದೇವರೇ ! ಅಯ್ಯೋ , ಭಗವಂತ ! ಏನಮ್ಮ , ನೀನು ಏನು ಮಾಡಿಬಿಟ್ಟೆ ! ಅವ
ನ್ನೆಲ್ಲ ಸಾಯಿಸಿ ಬಿಟ್ಟೆಯಲ್ಲ !”
ಅವಳು ಗೋಳಾಡಿದಳು , ಅತ್ತಳು. ಆದರೆ ಅದು ಏನೂ ಸಹಾಯವಾಗಲಿಲ್ಲ. ಸತ್ತ ಪ್ರಾಣಿ
ಗಳನ್ನೆಲ್ಲ ಒಂದು ಪೆಟ್ಟಿಗೆಯಲ್ಲಿ ತುಂಬಿ ಬೀಗ ಹಾಕಿ ಇರಿಸಿದಳು .
ಮುದುಕಿಯ ಮಗಳ ಒಂದು ವರ್ಷದ ಅವಧಿ ಮುಗಿಯಿತು. ಒಡತಿ ಅವಳಿಗೆ ಒಂದು
ಬಡಕಲು ಕುದುರೆಯನ್ನೂ ಒಂದು ಮುರುಕಲು ಬಂಡಿಯನ್ನೂ ಕೊಟ್ಟಳು. ಆ ಬಂಡಿಯೊಳಗೆ
ಸತ್ಯ ಪ್ರಾಣಿಗಳ ಪೆಟ್ಟಿಗೆಯನ್ನಿರಿಸಿ ಹುಡುಗಿಯನ್ನು ಕಾಡಿಗೆ ಕಳಿಸಿಕೊಟ್ಟಳು.
ಮುದುಕಿಯ ಮಗಳು ಹಿಂದೆ ತಾನು ಸಂಧಿಸಿದ್ದ ಆ ಒಲೆಯ ಬಳಿಗೆ ಬಂದಳು . ಅವಳಿಗೆ
ತುಂಬ ಹಸಿವಾಯಿತು. ಒಲೆಯಲ್ಲಿ ತಟ್ಟೆಗಳಲ್ಲಿ ತುಂಬ ಸೀರೊಟ್ಟಿಗಳಿದ್ದವು – ಚೆನ್ನಾಗಿದ್ದವು,
ಘಮಘಮಿಸುತ್ತಿದ್ದವು. ಮುದುಕಿಯ ಮಗಳು ಅವುಗಳಲ್ಲಿ ಒಂದನ್ನು ಎತ್ತಿಕೊಂಡಿ
ಇಲ್ಲವೋ ಅದು ಪುಟನೆಗೆದುಕೊಂಡು ಮತ್ತೆ ಒಲೆಯೊಳಕ್ಕೆ ಹೋಗಿ ಬಿದ್ದಿತು. ಒಲೆಯ
ಬಾಗಿಲು ಮುಚ್ಚಿಕೊಂಡಿತು . ಒಲೆ ಹೇಳಿತು :
“ಏಯ್ , ಹುಡುಗಿ, ನೀನು ನನ್ನನ್ನು ಶುದ್ಧಗೊಳಿಸಲಿಲ್ಲ. ನಾನು ನಿನಗೇಕೆ ಸೀರೊಟ್ಟಿ
ಕೊಡಬೇಕು ? ”
ಹುಡುಗಿ ಅತ್ತಳು, ಮುಂದೆ ಹೊರಟಳು.
ಬಾವಿಯ ಬಳಿಗೆ ಬಂದಳು . ತುಂಬ ಬಾಯಾರಿಕೆ ಆಯಿತು .ನೋಡುತ್ತಾಳೆ – ಬಾವಿಯ ತುಂಬ ,
ಅಂಚಿನವರೆಗೂ , ಸೀನೀರು ತುಂಬಿದೆ. ಅವಳು ಬೇಗ ಅದರ ಬಳಿಗೆ ಓಡಿದಳು . ಆದರೆ ಅವಳು
ಹತ್ತಿರ ಹೋದಳೋ ಇಲ್ಲವೋ ಬಾವಿ ಇದ್ದಕ್ಕಿದ್ದಂತೆ ಒಣಗಿತು . ಸಣ್ಣ ಪಿಸುಧ್ವನಿಯಲ್ಲಿ
ಹೇಳಿತು :
“ಏಯ್, ಹುಡುಗಿ ! ನೀನು ನನ್ನನ್ನು ಶುದ್ಧಗೊಳಿಸಿ ಅಂದಗೊಳಿಸಲು ಇಷ್ಟಪಡಲಿಲ್ಲ.
ಈಗ ನಿನಗೆ ನೀರೂ ಇಲ್ಲ ! ”
ಹುಡುಗಿ ಅತ್ತಳು, ಮುಂದೆ ಹೋದಳು.
ಅವಳು ಸೇಬಿನ ಗಿಡದ ಬಳಿಗೆ ಬಂದಳು . ಗಿಡದ ತುಂಬ ಹಣ್ಣುಗಳು ತೂಗಿ ಬಿದ್ದಿವೆ . ಎಲ್ಲವೂ
ಚೆನ್ನಾದ ಹಣ್ಣುಗಳು – ಬೆಳ್ಳಿಯ ಹಣ್ಣುಗಳು , ಚಿನ್ನದ ಹಣ್ಣುಗಳು ! ಅವನ್ನು ನೋಡಿ ಹುಡುಗಿ
ಅಂದುಕೊಂಡಳು :
“ ಈ ಕೆಲವು ಸೇಬಿನ ಹಣ್ಣುಗಳನ್ನು ಅಮ್ಮನಿಗೆ ಬಳುವಳಿಯಾಗಿ ಕೊಟ್ಟರೆ ಚೆನ್ನಾಗಿರುತ್ತೆ .”
ಹಾಗೆಂದುಕೊಂಡು ಅವಳು ಸೇಬಿನ ಗಿಡದ ಬಳಿಗೆ ಹೋದಳಷ್ಟೆ ತಕ್ಷಣವೇ ಸೇಬಿನ ಗಿಡ
ತನ್ನ ಕೊಂಬೆಗಳನ್ನೆಲ್ಲ ಮೇಲಕ್ಕೆ ಮಾಡಿಕೊಂಡು ಬಿಟ್ಟಿತು. ಅದು ಹೇಳಿತು :
“ಏಯ್ , ಹುಡುಗಿ ! ನನ್ನ ಸುತ್ತ ಬೆಳೆದಿದ್ದ ಕಳೆ ತೆಗೆದು ಹಾಕಿ ಸ್ವಚ್ಛಗೊಳಿಸಲು ನೀನು ಇಷ್ಟ
ಪಡಲಿಲ್ಲ. ಈಗ ಸೇಬಿನ ಹಣ್ಣುಗಳೂ ನಿನಗಿಲ್ಲ ! ”
ಮುದುಕಿಯ ಮಗಳು ಅತ್ತಳು. ಮುಂದಕ್ಕೆ ಹೋದಳು .
ನೋಡುತ್ತಾಳೆ - ನಾಯಿಯೊಂದು ತನ್ನ ಬಳಿಗೇ ಓಡಿ ಬರುತ್ತಿದೆ. ಅದರ ಕತ್ತಿನ ಸುತ್ತ ಒಂದು
ಸೊಗಸಾದ ಸರವಿದೆ – ಎಷ್ಟು ಸುಂದರವಾಗಿದೆ , ಹೇಗೆ ಥಳಥಳ ಅಂತ ಹೊಳೆಯುತ್ತಿದೆ,
ಎಷ್ಟು ಉದ್ದವಾಗಿದೆ ! ಹುಡುಗಿ ಗಾಡಿಯಿಂದ ಇಳಿದು ಆ ನಾಯಿಯನ್ನು ಹಿಡಿದುಕೊಳ್ಳಲು
ಓಡಿದಳು. ಅದರ ಸರವನ್ನು ತೆಗೆದುಕೊಳ್ಳಲು ಅವಳು ಇಚ್ಚಿಸಿದ್ದಳು. ನಾಯಿ ಅವಳಿಗೆ ಹೇಳಿತು :
“ಏಯ್, ಹುಡುಗಿ , ನನ್ನ ಮೈ ಶುಭ್ರಗೊಳಿಸಿ ಅಂದಗೊಳಿಸಲು ನೀನು ಇಚ್ಚಿಸಲಿಲ್ಲ . ಈ
ಸರವೂ ನಿನಗೆ ಸೇರೋಲ್ಲ! ”
ಹಾಗೆಂದು ಅದು ಓಡಿ ಹೋಯಿತು. ಮುದುಕಿಯ ಮಗಳು ಅಳುತ್ತ ಮನೆಯ ಕಡೆಗೆ
ನಡೆದಳು .
ಮನೆ ತಲುಪಿದಳು . ಹೊರಗಿನಿಂದಲೇ ಮುದುಕಿಯನ್ನೂ ಮುದುಕನನ್ನೂ ಕೂಗಿ ಕರೆದು
ಹೇಳುತ್ತಾಳೆ:
“ ಬನ್ನಿ , ನಾನು ತಂದಿರುವ ಸಂಪತ್ತನ್ನೆಲ್ಲ ನೋಡಿ, ಬನ್ನಿ ! ”
ಮುದುಕನೂ ಮುದುಕಿಯ ಗುಡಿಸಿಲಿನಿಂದ ಹೊರ ಬಂದರು . ನೋಡುತ್ತಾರೆ - ಮಗಳು
ಬಂದಿದಾಳೆ ! ಅವರಿಗೆ ತುಂಬ ಸಂತೋಷವಾಯಿತು. ಅವಳನ್ನು ಗುಡಿಸಿಲಿನೊಳಕ್ಕೆ ಕರೆದುಕೊಂಡು
ಹೋದರು. ಪೆಟ್ಟಿಗೆಯನ್ನೂ ಒಳಕ್ಕೆ ಹೊತ್ತು ತಂದರು. ಪೆಟ್ಟಿಗೆ ತೆರೆದು ನೋಡುತ್ತಾರೆ -
ಅದರ ತುಂಬ ಸತ್ಯ ಹಾವುಗಳು , ಹಲ್ಲಿಗಳು ಹಾಗೂ ಕಪ್ಪೆಗಳು ! ಮುದುಕಿ ಹೇಗೆ ಚೀರಿದಳು :
" ಮಗಳೇ , ಏನಿದು ನೀನು ತಂದಿರೋದು? ”
ಆಗ ಮುದುಕಿಯ ಮಗಳು ತನಗೆ ಆದ ಅನುಭವವನ್ನೆಲ್ಲ ವಿವರಿಸಿ ತಿಳಿಸಿದಳು . ಮುದುಕಿ
ಹೇಳಿದಳು :
“ಹೋಗಲಿ ಬಿಡು . ನೀನು ಮನೆಯಲ್ಲೇ ಕುಳಿತಿರೋದು ಒಳ್ಳೆಯದು. ಏನು ಮಾಡೋಕೆ
ಆಗುತ್ತೆ - ನಿನ್ನ ಅದೃಷ್ಟವೇ ಅಂಥದು ! ಅವಳು ಎಷ್ಟೊಂದು ಸಂಪತ್ತು ತಂದಳು , ಆದರೆ ನೀನು
ಈ ಸತ್ಯ ಹಾವು ಕಪ್ಪೆಗಳನ್ನಷ್ಟೆ ತಂದಿದೀಯ ! ಸದ್ಯಕ್ಕೆ ನೀನು ಜೀವದಿಂದ ವಾಪಸಾದೆಯಲ್ಲ,
ಅಷ್ಟೇ ಸಾಕು !”
- ಹೀಗೆ ಅವರು ವಾಸಿಸುತ್ತಿದ್ದಾರೆ. ಬ್ರೆಡ್ಡು ಉಪ್ಪು ತಿಂದುಕೊಂಡು ಜೀವಿಸುತ್ತಿದ್ದಾರೆ. ನಾನೂ
ಅಲ್ಲಿಗೆ ಹೋಗಿದ್ದೆ. ಜೇನು ಮದ್ಯ ಕುಡಿದೆ. ಅದು ಬಾಯಿಯ ಪಕ್ಕದಲ್ಲೇ ಹರಿದು ಹೋಯಿತು.
ಬಾಯಿಯೊಳಕ್ಕೆ ಒಂದು ತೊಟ್ಟೂ ಬೀಳಲಿಲ್ಲ. ಮುದುಕನ ಮಗಳು ಮದುವೆಯಾದಳು . ಆದರೆ
ಮುದುಕಿಯ ಮಗಳು ಇದುವರೆವಿಗೂ ಒಂಟಿಯಾಗಿಯೇ ಉಳಿದಿದಾಳೆ.
by admin | ಫೆಬ್ರ 21, 2020 | ಓದಿ ಕಲಿ
ಒಂದಾನೊಂದು ಕಾಲದಲ್ಲಿ ಒಬ್ಬ ಮುದುಕ ಒಬ್ಬಳು ಮುದುಕಿ ವಾಸಿಸುತ್ತಿದ್ದರು . ಅವರು
ತುಂಬ ಬಡವರಾಗಿದ್ದರು . ಒಂದು ದಿನ ಮುದುಕಿ ಮುದುಕನಿಗೆ ಹೇಳಿದಳು :
“ ಮುದುಕ , ಕಾಡಿಗೆ ಹೋಗಿಒಂದು ಲಿಂಡನ್ ಮರ ಕಡಿದುಕೊಂಡು ಬಾ . ಅದನ್ನು ಉರಿಸಿ
ನಮ್ಮ ಮನೆಯನ್ನು ಸ್ವಲ್ಪ ಬೆಚ್ಚಗಾದರೂ ಇರಿಸಬಹುದು.”
“ ಆಗಲಿ ” ಮುದುಕ ಹೇಳಿದ, ಕೊಡಲಿ ತೆಗೆದುಕೊಂಡು ಕಾಡಿಗೆ ಹೋದ.
ಕಾಡಿಗೆ ಬಂದವನೇ ಒಂದು ಒಳ್ಳೆಯ ಲಿಂಡನ್ ಮರವನ್ನು ಆಯ್ಕೆ ಮಾಡಿದ. ಅದನ್ನು
ಕಡಿದು ಕೆಡವಲೆಂದು ಕೊಡಲಿಯನ್ನು ಮೇಲಕ್ಕೆತ್ತಿದ. ಕೂಡಲೇ ಅವನಿಗೆ ಕೇಳಿಸಿತು - ಲಿಂಡನ್
ಮರ ಮನುಷ್ಯರ ಧ್ವನಿಯಲ್ಲಿ ಮಾತನಾಡುತ್ತಿದೆ:
- “ಓಮ್, ದಯವಿಟ್ಟು ನನ್ನನ್ನು ಕೆಡವಬೇಡ, ಮುದುಕಪ್ಪ, ನಿನಗೆ ಕಷ್ಟ ಬಂದಾಗ ನಾನು
ಸಹಾಯ ಮಾಡ್ತೀನಿ! ”
ಮುದುಕ ಹೆದರಿ ಕೊಡಲಿಯನ್ನು ಕೆಳಗೆ ಬೀಳಿಸಿದ. ಸ್ವಲ್ಪ ಹೊತ್ತು ಹಾಗೇ ನಿಂತ, ಯೋಚನೆ
ಮಾಡಿದ. ಆಮೇಲೆ ಮನೆಗೆ ಹಿಂದಿರುಗಿದ.
ಮನೆಗೆ ಹಿಂದಿರುಗಿದವನೇ ತನಗಾದುದನ್ನೆಲ್ಲ ಮುದುಕಿಗೆ ತಿಳಿಸಿದ . ಮುದುಕಿ ಹೇಳಿದಳು :
“ನೀನು ಎಂಥ ಮೂರ್ಖ! ಈಗಿಂದೀಗಲೇ ಲಿಂಡನ್ ಮರದ ಬಳಿಗೆ ಹೋಗಿ ನಮಗೆ ಒಂದು
ಕುದುರೆ, ಒಂದು ಗಾಡಿಕೊಡು ಅಂತ ಕೇಳು. ನಾವು ಇಷ್ಟು ದಿನದವರೆಗೂ ನಡೆದದ್ದು ಸಾಲದೆ ? ”
“ ಆಗಲಿ , ನಿನಗೆ ಅದು ಇಷ್ಟವಾದರೆ ಹಾಗೇ ಮಾಡ್ತೀನಿ” ಎಂದು ಮುದುಕ ಹೇಳಿದ , ಟೋಪಿ
ಹಾಕಿಕೊಂಡು ಕಾಡಿಗೆ ಹೊರಟ.
* ಲಿಂಡನ್ ಮರದ ಬಳಿ ಬಂದು ಹೇಳಿದ :
“ ಲಿಂಡನ್ ಮರ, ಲಿಂಡನ್ ಮರ ! ನನ್ನ ಮುದುಕಿ ಹೇಳ್ತಾಳೆ ನೀನು ನಮಗೆ ಒಂದು ಕುದುರೆ,
ಒಂದು ಗಾಡಿ ಕೊಡು ಅಂತ. ”
“ ಆಗಲಿ ” ಎಂದಿತು ಲಿಂಡನ್ ಮರ, “ ಮನೆಗೆ ಹೋಗು. ”
ಮುದುಕ ಮನೆಗೆ ಹಿಂದಿರುಗಿದ. ನೋಡ್ತಾನೆ - ಮನೆಯ ಮುಂದೆ ಒಂದು ಕುದುರೆ, ಒಂದು
ಗಾಡಿ ನಿಂತಿವೆ.
“ನೋಡು, ಮುದುಕ ” ಎಂದಳು ಮುದುಕಿ. “ ಇದೀಗ ನಾವೂ ಜನ ಅಂತ ಆದಿವಿ . ಆದರೆ
ನಮ್ಮ ಮನೆ ಎಲ್ಲಿ ಮುರುಕಲು , ಹೋಗುಕಾಡಿಗೆ ಹೋಗಿ ಲಿಂಡನ್ ಮರವನ್ನು ಕೇಳು, ನಮಗೆ
ಒಂದು ಹೊಸ ಮನೆ ಕೊಡು, ಅಂತ, ಅದು ಕೊಟ್ಟರೂ ಕೊಡಬಹುದು. ”
ಮುದುಕ ಲಿಂಡನ್ ಮರದ ಬಳಿಗೆ ಹೋಗಿಹೊಸ ಮನೆ ಬೇಕು ಅಂತ ಕೇಳಿದ .
“ ಆಗಲಿ , ಮನೆಗೆ ಹೋಗು” ಅಂದಿತು ಲಿಂಡನ್ ಮರ.
ಮುದುಕ ಮನೆಗೆ ಹಿಂದಿರುಗಿದ. ಅವನಿಗೆ ಗುರುತೇ ಸಿಗಲಿಲ್ಲ. ಹಳೆಯ ಮನೆಯ ಸ್ಥಳದಲ್ಲಿ
ಒಂದು ಹೊಸತಾದ ಸುಂದರವಾದ ಮನೆ ನಿಂತಿದೆ. ಇಬ್ಬರೂ ಮಕ್ಕಳಷ್ಟು ಸಂತೋಷಪಟ್ಟರು.
“ ಏನು, ಮುದುಕ , ನೀನು ಮತ್ತೆ ಆ ಮರದ ಬಳಿಗೆ ಹೋಗಿ ಒಂದಿಷ್ಟು ದನಕರು,ಕೋಳಿ
ಕೊಡು ಅಂತ ಕೇಳಿದರೆ ಹೇಗೆ? ಅದು ಕೊಟ್ಟರೆ ಸಾಕು . ಆಮೇಲೆ ನಮಗೆ ಹೆಚ್ಚಿಗೆ ಏನೂ ಬೇಕಾ
ಗೊಲ್ಲ” ಎಂದಳು ಮುದುಕಿ.
ಮುದುಕ ಲಿಂಡನ್ ಮರದ ಬಳಿಗೆ ಹೋಗಿ, ದನಕರು ಬೇಕು ಅಂತ ಕೇಳಿದ.
“ ಆಗಲಿ, ಮನೆಗೆ ಹೋಗು” ಎಂದಿತು ಲಿಂಡನ್ ಮರ.
ಮುದುಕ ಹಿಂದಿರುಗಿದ. ಅವನಿಗೆ ಅಮಿತಾನಂದವಾಯಿತು - ಅಂಗಳದಲ್ಲೆಲ್ಲ ದನಕರು
ಗಳು , ಕೋಳಿಗಳು ನಿಂತಿವೆ.
“ ಸರಿ. ಇನ್ನು ನಮಗೆ ಹೆಚ್ಚಿಗೆ ಏನೂ ಬೇಡ” ಎಂದ ಮುದುಕ .
“ ಇಲ್ಲ, ಮುದುಕ. ಮತ್ತೆ ಹೋಗಿ, ಸ್ವಲ್ಪ ಹಣ ಬೇಕು ಅಂತ ಕೇಳು.”
ಮುದುಕ ಲಿಂಡನ್ ಮರದ ಬಳಿಗೆ ಹೋಗಿ ಹಣ ಬೇಕು ಅಂತ ಕೇಳಿದ.
“ ಆಗಲಿ , ಮನೆಗೆ ಹೋಗು” ಎಂದಿತು ಅದು.
ಮುದುಕ ಮನೆಗೆ ಹಿಂದಿರುಗಿದ. ನೋಡ್ತಾನೆ - ಮುದುಕಿ ಹಣ ಎಣಿಸ್ತಿದಾಳೆ, ಚೀಲಗಳಲ್ಲಿ
ತುಂಬಿ ಮೇಜಿನ ಮೇಲೆ ಪೇರಿಸ್ತಿದಾಳೆ !
“ ಈಗನೋಡಿದೆಯಾ, ಮುದುಕ, ನಾವೆಷ್ಟು ಶ್ರೀಮಂತರು ! ” ಎಂದಳು ಮುದುಕಿ, “ ಆದರೆ
ಇದೂ ಸ್ವಲ್ಪವೇ . ನಮಗೆ ಇನ್ನೂ ಬೇಕು. ಎಲ್ಲ ಜನರೂ ನಮ್ಮನ್ನು ಕಂಡರೆ ಭಯಪಡೋ ಹಾಗೆ
ಆಗಬೇಕು. ಆಗಷ್ಟೆ ನಾವು ನಿಜಕ್ಕೂ ಶ್ರೀಮಂತರಾಗೀವಿ! ಹೋಗು, ಮುದುಕ,
ಲಿಂಡನ್ ಮರದ ಬಳಿಗೆ ಹೋಗಿ, ನಮ್ಮನ್ನು ಕಂಡರೆ ಎಲ್ಲರೂ ಭಯಪಡೋ ಹಾಗೆ ಏನಾ
ದರೂ ಮಾಡು, ಅಂತ ಕೇಳು. ”
ಮುದುಕ ಲಿಂಡನ್ ಮರದ ಬಳಿಗೆ ಹೋದ. ಹಾಗೆ ಮಾಡುವಂತೆ ಲಿಂಡನ್ ಮರವನ್ನು
ಕೇಳಿಕೊಂಡ.
“ ಹಾಗೇ ಆಗಲಿ, ಮನೆಗೆ ಹೋಗು” ಎಂದಿತು ಲಿಂಡನ್ ಮರ.
ಮುದುಕ ಮನೆಗೆ ಹಿಂದಿರುಗಿದ.ನೋಡ್ತಾನೆ - ಮನೆಯ ಸುತ್ತ ತುಂಬ ಮಂದಿ ಭಟರಿದ್ದಾರೆ ,
ಎಲ್ಲರೂ ಮನೆಯನ್ನು ಕಾಯುತ್ತಿದ್ದಾರೆ. ಆದರೆ ಮುದುಕಿಗೆ ಇನ್ನೂ ಸಾಲದು.
“ ಏನು , ಮುದುಕ ” ಎಂದವಳು ಹೇಳಿದಳು . “ ಈಗ ಏನು ಆಗಬೇಕೂಂದರೆ, ಹಳ್ಳಿಯ ಸಮ
ಸ್ವರೂ ನಮಗಾಗಿ ದುಡಿಯುವಂತೆ ಮಾಡಬೇಕು. ಅದು ಬಿಟ್ಟರೆ ನಮಗೆ ಬೇಕಾದುದು ಬೇರೇನೂ
ಇಲ್ಲ . ಈಗ ನಮ್ಮ ಬಳಿ ಎಲ್ಲ ಇದೆ.”
ಮುದುಕ ಲಿಂಡನ್ ಮರದ ಬಳಿಗೆ ಹೋಗಿತನ್ನ ಹೆಂಡತಿ ಹೇಳಿದಂತೆ ಮಾಡುವ ಹಾಗೆ ಕೇಳಿ
ಕೊಂಡ, ಲಿಂಡನ್ ಮರ ತುಂಬ ಹೊತ್ತು ಮೌನದಿಂದಿತ್ತು . ಆಮೇಲೆ ಹೇಳಿತು : “ ಸರಿ, ಮನೆಗೆ
ಹೋಗು. ಇದೇ ಕೊನೆಯ ಬಾರಿಗೆ ನಾನು ನಿಮ್ಮ ಅಪೇಕ್ಷೆಯನ್ನು ಪೂರೈಸುವುದು . ”
ಮುದುಕ ಮನೆಗೆ ಹಿಂದಿರುಗುತ್ತಾನೆ. ನೋಡುತ್ತಾನೆ - ಅಲ್ಲಿ ಏನೂ ಇಲ್ಲ. ಅದೇ ಹಳೆಯ
ಮನೆಯಷ್ಟೆ ಇದೆ. ಅದರಲ್ಲಿ ಅವನ ಮುದುಕಿ ಹೆಂಡತಿ ಕುಳಿತಿದ್ದಾಳೆ. ಎಲ್ಲ ಜನರೂ ತಮಗೆ
ಸೇವೆ ಸಲ್ಲಿಸಬೇಕು ಅಂತ ಬಯಸಿದ ಆ ದುರಾಶೆಯ ಮುದುಕಿಗೆ ಲಿಂಡನ್ ಮರ ಹೀಗೆ ಶಿಕ್ಷೆ
ನೀಡಿತ್ತು .
by admin | ಫೆಬ್ರ 21, 2020 | ಓದಿ ಕಲಿ
ಒಮ್ಮೆ ಒಬ್ಬ ರಾಜ , ಒಬ್ಬಳು ರಾಣಿ ವಾಸಿಸುತ್ತಿದ್ದರು . ಅವರಿಗೆ ತುಂಬ ಕಾಲ ಮಕ್ಕಳೇ
ಆಗಲಿಲ್ಲ . ಆದರೆ ವಯಸ್ಸಾದಾಗ ಅವರಿಗೆ ಒಬ್ಬ ಮಗ ಹುಟ್ಟಿದ. ಅದರಿಂದ ಅವರಿಗೆ ತುಂಬ
ಸಂತೋಷವಾಯಿತು. ಮಗ ಬೆಳೆದು ದೊಡ್ಡವನಾದ. ಅವನಿಗೆ ಮದುವೆ ಮಾಡಬೇಕೆಂದು
ನಿರ್ಧರಿಸಿದರು . ಆದರೆ ಮಗ ಹೇಳಿದ:
“ ನನಗೊಂದು ಕುದುರೆ ಬಳುವಳಿಯಾಗಿ ಕೊಡಿ. ಅದು ಬೆಂಕಿ ತಿನ್ನುವಂಥದಾಗಿರಬೇಕು,
ಉರಿ ಕುಡಿಯುವಂಥದಾಗಿರಬೇಕು. ಅದು ಓಡಿದಾಗ ನೆಲ ನಡುಗಬೇಕು, ಗುಡುಗು ಮೊಳಗ
ಬೇಕು, ಓಕ್ ಮರಗಳ ಎಲೆಗಳೆಲ್ಲ ಉದುರಬೇಕು. ಅಂಥ ಕುದುರೆ ಕೊಟ್ಟರಷ್ಟೆ ನಾನು ಮದು
ವೆಗೆ ಒಪ್ಪೋದು.”
- ರಾಜ ತನ್ನ ರಾಜ್ಯದಲ್ಲಿದ್ದ ಅತ್ಯುತ್ತಮರಾದ ಅತ್ಯಂತ ಧೈರ್ಯಶಾಲಿಗಳಾದ ಯೋಧರ
ನ್ನೆಲ್ಲ ಕರೆದು, ಅವರು ಎಂದಾದರೂ ಅಂತಹ ಕುದುರೆ ಕಂಡಿದ್ದರೆ ಅಥವಾ ಅಂತಹ ಕುದುರೆಯ
ವಿಷಯ ಕೇಳಿದ್ದರೆ , ಎಂದು ವಿಚಾರಿಸಿದ. ಅವರೆಲ್ಲ “ಇಲ್ಲ” ಎಂದೇ ಹೇಳಿದರು . ಆಮೇಲೆ ರಾಜ
ತನ್ನ ರಾಜ್ಯದ ಮೂಲೆಮೂಲೆಗಳಿಗೂ ಸಂದೇಶ ಕಳುಹಿಸಿದ. ಅಂತಹ ಕುದುರೆಯ ವಿಷಯವನ್ನು
ಎಂದಾದರೂ ಕೇಳಿದಂಥ ಅಥವಾ ತಾನು ಪತ್ತೆಹಚ್ಚಬಲ್ಲ ಎಂದು ಭಾವಿಸಿದಂಥ ಯಾರೇ ಆಗಲಿ
ತಕ್ಷಣವೇ ಅರಮನೆಗೆ ಬರಬೇಕೆಂದು ಡಂಗುರ ಹೊಡೆಸಿದ.
ಸಂದೇಶ ದೂರದೂರ ಹಳ್ಳಿಗಳಿಗೂ ತಲುಪಿತು . ರೈತರೂ ಈ ಸಂದೇಶ ಓದಿದರು . ಅವ
ರಲ್ಲೊಬ್ಬ ಅನಂತರ ಈ ವಿಷಯವನ್ನು ತನ್ನ ಹೆಂಡತಿಗೆ ಹೇಳಿದ.
“
ನೋಡಿದೆಯಾ ! ಅಂಥ ಕುದುರೆ ಎಲ್ಲಿದೆ ಅನ್ನೋದು ಗೊತ್ತಿದೆ ಅಂತ ಹೇಳಿದರೆ ಸಾಕು ,
ಅರಮನೆಗೆ ಹೋಗಿ ರಾಜನನ್ನು ಕಾಣಬಹುದಲ್ಲ ! ” ಎಂದವನು ಹೇಳಿದ.
ಈ ರೈತನಿಗೆ ಇವಾನ್ ಎಂಬ ಹೆಸರಿನ ಒಬ್ಬ ಮಗನಿದ್ದ. ಅವನು ಹೇಳಿದ :
“ ನನಗೆ ಗೊತ್ತು ಅಂಥ ಕುದುರೆ ಎಲ್ಲಿದೆ ಅಂತ ! ”
“ ಹುಚ್ಚು ಮಾತನಾಡಬೇಡ! ” ತಂದೆ ಹೇಳಿದ , “ಗೇಟಿನಿಂದ ಹೊರಗೆ ಹೋದರೆ ಸಾಕು
ನೆರೆಯವರ ಮಕ್ಕಳೂ ನಿನ್ನನ್ನು ಚೆನ್ನಾಗಿ ಚಚ್ಚಿ ಹಾಕ್ತಾರೆ. ನೀನಿಲ್ಲಿ ಅಂಥ ಕುದುರೆಯ ಬಗ್ಗೆ
ಹರಟುತ್ತೀಯಲ್ಲ ! ”
ಆದರೆ ಇವಾನ್ ಸುಮ್ಮನಿರದಾದ. ಮತ್ತೆ ಹೇಳಿದ: “ಹೊರಗೆ , ಅಂಗಳಕ್ಕೆ , ಬಾ , ಅಪ್ಪ .
ನಾನು ನಿನಗೆ ಒಂದು ವಿಷಯ ತೋರಿಸಬೇಕು ! ”
ಅವರು ಹೊರಗೆ ಹೋದರು . ಮಗ ಓಕ್ ಮರವೊಂದನ್ನು ಹಿಡಿದು ಒಂದೇ ಕೈಯಿಂದ
ಅದನ್ನು ನೆಲಕ್ಕೆ ತಾಗುವಂತೆ ಬಾಗಿಸಿದ. ಅದನ್ನು ಕಂಡು ತಂದೆ ಅಂಜಿಕೆಯಿಂದ ಬಿಳಿಚಿಕೊಂಡು
ನಿಂತ. ಅವನ ಕಣ್ಣುಗುಡ್ಡೆಗಳು ಹೊರಕ್ಕೆ ಕಿತ್ತು ಬರುವಂತೆ ಕಂಡುಬಂದವು.
“ ಈಗ ನಿನ್ನ ಮಾತನ್ನು ನಾನು ನಂಬುತ್ತೇನೆ, ಮಗು !” ಅವನೆಂದ.
ಅವರು ಜಿಲ್ಲಾ ಮುಖ್ಯಾಧಿಕಾರಿಗಳ ಬಳಿಗೆ ಹೋದರು . ತಂದೆ ಇವಾನ್ನನ್ನು ಹೊರಗೆ
ಅಂಗಳದಲ್ಲೇ ಬಿಟ್ಟು ತಾನೊಬ್ಬನೇ ಒಳ ಹೋದ.
“ ನನ್ನ ಮಗ ರಾಜನಿಗೆ ಬೇಕಾದಂಥ ಕುದುರೆಯನ್ನು ತಂದು ಕೊಡಬಲ್ಲ” ಅವನೆಂದ .
ಇದನ್ನು ಕೇಳಿ ಅವರೆಲ್ಲ ಅವನನ್ನು ಬಯ್ಯ ತೊಡಗಿದರು . ಇಂಥ ಸುಳ್ಳು ವದಂತಿಗಳನ್ನು
ಹರಡುತ್ತಿರುವುದಕ್ಕಾಗಿ ರೈತನನ್ನೂ ಅವನ ಮಗನನ್ನೂ ಜೈಲಿಗೆ ದಬ್ಬಬೇಕಷ್ಟೆ , ಎಂದವರು
ಹೇಳಿದರು .
“ ನಿನ್ನ ಮಗ ಒಬ್ಬ ಮೂರ್ಖ ಬಡಾಯಿಕೋರ!” ಅವರು ಕೂಗಿ ಹೇಳಿದರು .
“ ಅವನು ಗೇಟಿನಿಂದ ಹೊರಗೆ ಬಂದರೆ ಸಾಕು ನೆರೆಯ ಮಕ್ಕಳೇ ಅವನನ್ನು ಚಚ್ಚಿ ಹಾಕು
ತಾರೆ ! ”
ಅಪ್ಪನನ್ನೂ ಮಗನನ್ನೂ ಜೈಲಿಗೆ ದಬ್ಬಲಾಯಿತು. ಕೊನೆಗೆ ಜಿಲ್ಲಾ ಮುಖ್ಯಾಧಿಕಾರಿಗಳು
ಪುನರಾಲೋಚಿಸಿ, ಹೇಳಿದರು : “ ಅವನು ರಾಜನಿಗೆ ಸುಳ್ಳು ಹೇಳಿದರೆ ನಮಗೇನಂತೆ ? ಶಿಕ್ಷೆಗೆ
ಗುರಿಯಾಗುವವನು ಅವನಷ್ಟೆ , ನಾವಲ್ಲ !”
ಅವರು ಅಪ್ಪನನ್ನೂ ಮಗನನ್ನೂ ಬಿಟ್ಟು ಬಿಟ್ಟರು, ತಾವೇ ರಾಜನಿಗೆ ಸಂದೇಶ ಕಳುಹಿಸಿ
ದರು . ರಾಜ ಸಂದೇಶ ಓದಿದ. ತನ್ನ ಅತ್ಯುತ್ತಮ ಯೋಧರೂ ಮಾಡಲಾಗದುದನ್ನು ಸಾಮಾನ್ಯ
ರೈತನೊಬ್ಬನ ಮಗ ಮಾಡಬಲ್ಲನೇ ಎಂದು ನಂಬಲಾಗದಾದರೂ ಅವನು ಆ ರೈತನ ಮಗನನ್ನು
ಕರೆದು ವಿಚಾರಿಸಲು ನಿರ್ಧರಿಸಿದ.
ರಾಜನ ಸೇವಕರು ಇವಾನ್ನನ್ನು ಅರಮನೆಗೆ ಕರೆತಂದರೋ ಇಲ್ಲವೋ ಕೂಡಲೇ ಅವ
ನನ್ನು ರಾಜನ ಮುಂದೆ ಹಾಜರು ಪಡಿಸಲಾಯಿತು.
“ನೀನು ನಿಜಕ್ಕೂ ನನಗೆ ಬೇಕಾದ ಕುದುರೆಯನ್ನು ತಂದು ಕೊಡಬಲ್ಲೆಯಾ? ” ರಾಜ ಕೇಳಿದ.
“ ತಂದು ಕೊಡಬಲ್ಲೆ ! ” ಇವಾನ್ ಉತ್ತರಿಸಿದ.
“ನಿನ್ನ ಕೆಲಸ ಸುಲಭವಾಗುವಂತೆ ನಾವೇನಾದರೂ ಮಾಡುವುದಿದೆಯೆ ? ”
“ ಏನಿಲ್ಲ. ನನಗೊಂದು ಒಳ್ಳೆಯ ಕುದುರೆ, ಒಂದು ಭಾರಿ ಬಡಿಗೆ ಕೊಡಿ, ಸಾಕು.”
ರಾಜನು ತನ್ನ ಪ್ರಧಾನ ಅಶ್ವಪಾಲನಿಗೆ ಒಂದು ಚೀಟಿ ಬರೆದು ಅದನ್ನು ಇವಾನ್ನಿಗೆಕೊಟ್ಟು
ಹೇಳಿದ: “ ಈ ಚೀಟಿಯನ್ನು ನನ್ನ ಅಶ್ವಪಾಲನಿಗೆ ಕೊಡು. ಅವನು ನಿನಗೆ ಒಂದು ಒಳ್ಳೆಯ
ಕುದುರೆಯನ್ನು ಹುಡುಕಿ ಕೊಡುತ್ತಾನೆ. ”
ಇವಾನ್ ಅಶ್ವಪಾಲನನ್ನು ಕಂಡು ರಾಜನ ಚೀಟಿಯನ್ನು ಅವನ ಕೈಗಿತ್ತ . ಅವನು ಅದನ್ನು
ಓದಿದನಂತರ ಹೇಳಿದ:
“ ತಾಳು . ನಾನು ನನ್ನ ಕುದುರೆಗಳನ್ನೆಲ್ಲ ನೀರಿಗೆ ಒಯ್ಯುತ್ತೇನೆ. ಆಗ ನೀನೇ ಅವುಗಳಲ್ಲಿ
ಅತ್ಯುತ್ತಮವಾದುದನ್ನು ಆರಿಸಿಕೋ .”
ಅಶ್ವಪಾಲ ಕುದುರೆಗಳನ್ನು ನೀರಿಗೆ ಕರೆದೊಯ್ದ . ಇವಾನ್ ಅವುಗಳನ್ನು ಪರೀಕ್ಷಿಸ ತೊಡ
ಗಿದ. ಅವನು ಕುದುರೆಯೊಂದರ ಬಾಲವನ್ನೊ ಕೇಸರವನ್ನೂ ಹಿಡಿದ ಕೂಡಲೇ ಅವು ಅವನ
ಕೈಗೆ ಕಿತ್ತು ಬರುತ್ತಿದ್ದವು. ಹೀಗೆ ಅವನು ಇಪ್ಪತ್ತು ಚರ್ಮಗಳನ್ನು ಸುಲಿದ, ಆದರೆ ಕುದುರೆಯನ್ನು
ಆರಿಸಿಕೊಳ್ಳಲಿಲ್ಲ.
ಮನೆಗೆ ಹಿಂದಿರುಗಲು ನಿರ್ಧರಿಸಿದ. ಮಾರ್ಗ ಮಧ್ಯದಲ್ಲಿ ಅವನು ಒಂದು ಬಡಕಲು ಗುಡಿ
ಸಿಲನ್ನು ಕಂಡ. ಅದರ ಚಾವಣಿಯೆಲ್ಲ ತೂತುಗಳಿಂದ ತುಂಬಿತ್ತು . ಆಗ ಇದ್ದಕ್ಕಿದ್ದಂತೆ ಆಕಾಶದಲ್ಲಿ
ಕಪ್ಪು ಮೋಡಗಳು ಕಾಣಿಸಿಕೊಂಡವು. ಮಳೆ ಹುಯ್ಯುವಂತೆ ಕಂಡುಬಂದಿತು. ಗುಡಿಸಿಲಿನ ಪಕ್ಕ
ದಲ್ಲಿ ಕುಳಿತಿದ್ದ ಮುದುಕಿ ಅವನನ್ನು ಕಂಡು ಕೇಳುತ್ತಾಳೆ:
“ ಹುಡುಗ ! ಈ ಮುದುಕಿಗೆ ಒಂದಿಷ್ಟು ಸಹಾಯ ಮಾಡಪ್ಪ , ಯಾರೂ ನನ್ನ ವಿಷಯ
ಯೋಚಿಸುತ್ತಲೇ ಇಲ್ಲ. ಮಳೆ ಬಂದರೆ ನೀರೆಲ್ಲ ನನ್ನ ಮನೆಯೊಳಗೇ ಸುರಿಯುತ್ತೆ .”
ಇವಾನ್ ತನ್ನ ಬಳಿ ಇದ್ದ ಕುದುರೆಯ ಚರ್ಮಗಳನ್ನೆಲ್ಲ ಗುಡಿಸಿಲಿನ ಚಾವಣಿಯ ಮೇಲೆ
ಹೊದಿಸಿ ಮಳೆಯ ನೀರು ಒಳಕ್ಕೆ ಸುರಿಯದಂತೆ ಮಾಡಿದ. ಮುದುಕಿ ಅವನಿಗೆ ತುಂಬ ಉಪಕಾರ
ಹೇಳಿದಳು . ಇವಾನ್ ಅವಳಿಗೆ ಶುಭ ಕೋರಿ ಮುಂದುವರಿದ.
ಅವನು ಅರಮನೆಗೆ ಬಂದ. ರಾಜನನ್ನು ಸಂಧಿಸಿದ. ಅವನಿಗೆ ಬೇಕಾದಂಥ ಕುದುರೆ ಸಿಗದಿದ್ದ
ವಿಷಯ ಕೇಳಿ ರಾಜ ಆಶ್ಚರ್ಯಗೊಂಡ.
“ರೈತನ ಮಗ ಇವಾನ್ ! ನನ್ನ ಕುದುರೆಲಾಯಕ್ಕೆ ಹೋಗಿನೋಡು. ಬಹುಶಃ ಅಲ್ಲಿ ನೀನು
ನಿನಗೆ ಇಷ್ಟವಾದಂಥ ಕುದುರೆ ಕಂಡುಕೊಳ್ಳಬಹುದು ! ” ಅವನೆಂದ.
ಇವಾನ್ ರಾಜನ ಕುದುರೆಲಾಯಕ್ಕೆ ಹೋದ. ಅವನು ಕುದುರೆಯೊಂದನ್ನು ಮುಟ್ಟಿದರೆ
ಸಾಕು ಅದು ನೆಲಕ್ಕೆ ಕುಸಿದು ಬೀಳುತ್ತಿತ್ತು . ಹಾಗಾಗಿ ಅಲ್ಲಿ ಕೂಡ ಬೇಕಾದಂಥ ಕುದುರೆ ಸಿಗಲಿಲ್ಲ .
ರಾತ್ರಿಯಾಯಿತು. ಇವಾನ್ ಬೆಂಗಾಡಿಗೆ ಹೋಗಿ ಗಟ್ಟಿಯಾಗಿ ಶಿಳ್ಳೆ ಹಾಕಿದ. ಕೂಡಲೇ
ಎಲ್ಲಿಂದಲೋ ಒಂದು ಕುದುರೆ ಅವನತ್ತ ಓಡಿಕೊಂಡು ಬಂದಿತು.
“ನೀವು ನನ್ನನ್ನು ಕರೆದಿರಾ , ಒಡೆಯ ? ” ಅದು ಕೇಳಿತು .
“ ಹೌದು. ನಾವು ನಮ್ಮ ದಾರಿ ಹಿಡಿದು ಹೋಗುವ ಸಮಯ ಬಂದಿದೆ. ”
“ನೀವು ಸಿದ್ದವಾಗಿದ್ದರೆ ನಾನೂ ಸಿದ್ದ ! ”
ಇವಾನ್ ಆ ಕುದುರೆಯನ್ನು ರಾಜನ ಕುದುರೆಲಾಯಕ್ಕೆ ಕರೆದೊಯ್ದ . ಆ ಕುದುರೆ ಎಷ್ಟು
ದೊಡ್ಡದಾಗಿದ್ದಿತೆಂದರೆ ಲಾಯದ ಎಲ್ಲ ಗೋಡೆಗಳೂ ಮುರಿದು ಬಿದ್ದವು. ಆದರೂ ಅವನು
ಹೇಗೋ ಅಂತೂ ಅದನ್ನು ಒಳಗೆ ಕರೆದೊಯ್ದು ಗೂಟಕ್ಕೆ ಕಟ್ಟಿದ. ಅದಕ್ಕೆ ಬಿಳಿಯ ಅತ್ಯುತ್ತ
ಮವಾದ ಗೋಧಿಯನ್ನು ತಿನ್ನಲು ಕೊಟ್ಟು, ತಾನೇ ಮಲಗಲು ಹೋದ.
ರಾಜನು ಬೆಳಿಗ್ಗೆ ಬೇಗನೆಯೇ ಎದ್ದು ಇವಾನ್ನು ಏನಾದರೂ ಕುದುರೆಯನ್ನು
ಕಂಡನೇ ಎಂಬುದನ್ನು ತಿಳಿಯುವಂತೆ ಆಜ್ಞಾಪಿಸಿದ.
ಇವಾನ್ ಹೇಳಿದ : “ ನನ್ನ ಬಳಿ ಆಗಲೇ ಒಂದು ಕುದುರೆ ಇದೆ. ಅದನ್ನು ಲಾಯದಲ್ಲಿ ಕಟ್ಟಿ
ಹಾಕಿದ್ದೇನೆ... ”
ಅವರು ಲಾಯಕ್ಕೆ ಹೋಗಿನೋಡಿದರು . ರಾಜನು ಆ ಕುದುರೆಯನ್ನು ಕಂಡು ದಿಗಿಲು
ಗೊಂಡ. ಅವನು ಹಿಂದೆಂದೂ ಅಂಥ ಭಾರಿ ಕುದುರೆಯನ್ನು ಕಂಡಿರಲಿಲ್ಲ.
“ ಈಗ ನನಗೆ ಒಂದು ದೊಡ್ಡ ಬಡಿಗೆ ಬೇಕಾಗಿದೆ. ಅದು ಎಷ್ಟು ದೊಡ್ಡದಾಗಿರಬೇಕೆಂದರೆ
ಅದನ್ನು ಕಾಡಿನಿಂದ ಎಳೆದು ತರಲು ಎರಡು ಜೊತೆ ಎತ್ತುಗಳು ಬೇಕಾಗುತ್ತವೆ ಎಂದು ಇವಾನ್
ಹೇಳಿದ.
ಬಡಿಗೆಯನ್ನು ತರಿಸಿ ಕೊಡಲಾಯಿತು. ಅವನು ಅದನ್ನು ಆಕಾಶಕ್ಕೆ ಎಸೆದು, ತಾನೇ ಮಲ
ಗಲು ಹೋದ. ಅವನು ಒಂದು ಹಗಲು ಒಂದು ರಾತ್ರಿ ಮಲಗಿದ. ಆಮೇಲೆ ಇನ್ನೊಂದು ದಿನ
ಮಲಗಿದ. ಅವನು ಎದ್ದಾಗ ಬಡಿಗೆ ಅವನವೇ ಹಾರಿ ಬರುತ್ತಿದ್ದುದನ್ನು ಕಂಡ. ಹಾರಿ ಬರುತ್ತ
ಅದು ಸುಯೊಂದು ಶಬ್ದ ಮಾಡುತ್ತಿತ್ತು . ಅವನು ತನ್ನ ಕಿರುಬೆರಳನ್ನು ಎತ್ತಿಹಿಡಿದ. ಬಡಿಗೆ
ಕಿರುಬೆರಳಿಗೆ ಬಡಿದು ಚೂರುಚೂರಾಗಿ ಬಿದ್ದಿತು .
“ ಇದು ಅಷ್ಟು ಒಳ್ಳೆಯ ಬಡಿಗೆಯಲ್ಲ !” ಇವಾನ್ ಎಂದ. “ ನನಗೆ ಇನ್ನೊಂದು ಮಾಡಿ
ಕೊಡಿ. ಅದು ಎಷ್ಟು ದೊಡ್ಡದಾಗಿರಬೇಕೆಂದರೆ, ಅದನ್ನು ಕಾಡಿನಿಂದ ಎಳೆದು ತರಲು ನಾಲ್ಕು
ಜೊತೆ ಎತ್ತುಗಳು ಬೇಕಾಗುತ್ತವೆ. ”
ಅಂತೆಯೇ ಅವರು ಒಂದು ನೂರು ವರ್ಷದ ದೊಡ್ಡ ಓಕ್ ಮರವನ್ನು ಕಡಿದು ಅದರಿಂದ
ಬಡಿಗೆ ಮಾಡಿದರು . ಅದನ್ನು ಕಾಡಿನಿಂದ ನಾಲ್ಕು ಜೊತೆ ಎತ್ತುಗಳು ಎಳೆದು ತಂದವು. ಇವಾನ್
ಅದನ್ನೂ ಆಕಾಶಕ್ಕೆ ಎಸೆದು ತಾನೇ ಮಲಗಲು ಹೋದ. ಅವನು ಮೂರು ಹಗಲು ಮೂರು
ರಾತ್ರಿ ಮಲಗಿದ. ಎದ್ದಾಗ ಬಡಿಗೆ ತನ್ನತ್ಯವೇ ಹಾರಿಕೊಂಡು ಬರುತ್ತಿದ್ದುದನ್ನು ಕಂಡ. ಹಾರಿ
ಬಂದಂತೆ ಅದು ಸುಯೊಂದು ಶಬ್ದ ಮಾಡುತ್ತಿತ್ತು . ಅವನು ತನ್ನ ಒಂದು ಮಧ್ಯಬೆರಳನ್ನು
ಎತ್ತಿ ಹಿಡಿದ. ಬಡಿಗೆ ಬೆರಳಿಗೆ ಬಡಿದು ಕೆಳಕ್ಕೆ ಬಿದ್ದಿತು . ಬಿದ ಭಾರಕ್ಕೆ ಅದು ನೆಲದಲ್ಲಿ ಐದು ಅಡಿ
ಆಳಕ್ಕೆ ಹೂತುಕೊಂಡಿತು.
“ ಇದೀಗ ಸರಿಯಾದ ಬಡಿಗೆ ” ಎಂದ ಇವಾನ್ .
ಅವನು ಪ್ರಯಾಣ ಹೊರಡಲು ಸಿದ್ಧನಾದ. ರಾಜ ಅವನಿಗೆ ಹೇಳಿದ: “ ಅಂಥ ಕುದುರೆ
ಯನ್ನು ತಂದು ಕೊಟ್ಟರೆ ನಾನು ನಿನಗೆ ಕೇಳಿದುದನ್ನು ಕೊಡುವೆ. ನಿನಗೆ ಮಾತು ಕೊಡುವೆ -
ನಾನೆಂದೂ ನಿನಗೆ ಹಾನಿ ಮಾಡುವುದಿಲ್ಲ. ”
ಇವಾನ್ ಕುದುರೆ ಹತ್ತಿ ಹೊರಟ. ಆದರೂ ರಾಜನಿಗೆ ರೈತನ ಮಗನೊಬ್ಬ ಅಂಥ ಮಹ
ತ್ಯಾರ್ಯ ಎಸಗಬಲ್ಲನೆ ಎಂಬ ಸಂದೇಹ ಇದ್ದೇ ಇದ್ದಿತು . ಆದ್ದರಿಂದ ಅವನು ತನ್ನ ಇಬ್ಬರು ಭೀಮ
ಕಾಯದ ಯೋಧರನ್ನು ಇವಾನ್ನ ಹಿಂದೆಯೇ ಹೋಗುವಂತೆ ಹೇಳಿ ಕಳುಹಿಸಿ ಕೊಟ್ಟ. ಅವರಿ
ಬ್ಬರೂ ಕುಲೀನರಾಗಿದ್ದರು .
- “ ಆ ರೈತನ ಮಗ ಇವಾನ್ನ ಸಮಸಮಕ್ಕೆ ಹೋಗುತ್ತಿರಿ. ಅವನು ಎಲ್ಲಿಗೆ ಹೋದರೆ ನೀವೂ
ಅಲ್ಲಿಗೇ ಹೋಗಿ” ಎಂದವನು ಆಜ್ಞಾಪಿಸಿದ.
ತನ್ನ ಕೆಳಗೆ ಭೂಮಿ ಕಂಪಿಸುತ್ತಿದ್ದುದನ್ನು ಕೇಳಿದ ಇವಾನ್ ತನ್ನಲ್ಲೇ ಹೇಳಿಕೊಂಡ :
“ ನನ್ನ ಹಿಂದೆ ಡೇಗನೆ ಅಥವಾ ಯಾರೋ ಭೀಮಕಾಯರು ಹಿಂಬಾಲಿಸಿಕೊಂಡು ಬರು
ತಿರಬೇಕು .”
ರಾಜನ ಇಬ್ಬರು ಯೋಧರೂ ಇವಾನ್ನ ಬಳಿ ಬಂದರು . ಅವನಿಗೆ ಶುಭಾಶಯ ಹೇಳಿದರು.
“ ಯಾರು ನೀವು? ” ಎಂದು ಇವಾನ್ ಅವರನ್ನು ಕೇಳಿದ.
“ರಾಜ ನಮ್ಮನ್ನು ಕಳುಹಿಸಿದ್ದಾನೆ. ನೀನು ಹೋದೆಡೆಯಲ್ಲೆಲ್ಲ ನಾವೂ ಹೋಗಬೇಕೆಂದು
ಆಜ್ಞಾಪಿಸಿದ್ದಾನೆ ” ಅವರೆಂದರು .
“ ಸರಿ . ಆದರೆ ಒಂದು ವಿಷಯ . ನಮ್ಮ ಮಧ್ಯೆ ಶಿಸ್ತು ಇರಬೇಕಾದರೆ ನಮ್ಮಿ ಬ್ಬರು
ನಾಯಕರಾಗಿರಬೇಕು, ಉಳಿದವರು ಅವನು ಹೇಳಿದ ಹಾಗೆ ಕೇಳಬೇಕು ” ಇವಾನ್ ಎಂದ.
“ ಹಾಗಾದರೆ ನಾನು ನಾಯಕನಾಗುತ್ತೇನೆ! ” ಮೊದಲನೆಯ ಯೋಧ ಹೇಳಿದ. “ ಇಲ್ಲ.
ನಾನು ಆಗುತ್ತೇನೆ! ” ಎರಡನೆಯವನೆಂದ.
ಆದರೆ ರೈತನ ಮಗ ಇವಾನ್ ಹೇಳಿದ : “ ಇಲ್ಲ, ಮಿತ್ರರೇ , ಜಗಳ ಮಾಡಿ ಪ್ರಯೋಜನ
ವಿಲ್ಲ . ಇದನ್ನು ಹೀಗೆ ತೀರ್ಮಾನಿಸೋಣ. ನಮ್ಮಲ್ಲಿ ಒಬ್ಬೊಬ್ಬರೂ ಸರದಿಯಲ್ಲಿ ನಮ್ಮ ಬಡಿಗೆ
ಗಳನ್ನು ಎಸೆಯೋಣ. ಯಾರು ಹೆಚ್ಚು ದೂರ ಎಸೆಯುತ್ತಾರೋ ಅವರು ನಾಯಕರಾಗೋಣ.
ಏನಂತೀರ ? ”
ಇದಕ್ಕೆ ಅವರು ಒಪ್ಪಿಕೊಂಡರು . ಅವರಲ್ಲೊಬ್ಬ ಮುಂದೆ ಬಂದು ತನ್ನ ಬಡಿಗೆಯನ್ನು
ಜೋರಾಗಿ ಎಸೆದ. ಅದು ಕಣ್ಣಿಗೆ ಕಾಣದಷ್ಟು ದೂರ ಹೋಗಿ ಬಿದ್ದಿತು . ಅವರು ಒಂದು ದಿನ,
ಎರಡು ದಿನ ಪ್ರಯಾಣ ಮಾಡಿಕೊಂಡು ಹೋಗುತ್ತಾರೆ - ಬಡಿಗೆ ಇಲ್ಲ... ಮೂರನೆಯ ದಿನ
ನೋಡುತ್ತಾರೆ - ಅದು ದಾರಿಯಲ್ಲಿ ಬಿದ್ದಿದೆ.
ಆಮೇಲೆ ಎರಡನೆಯವ ತನ್ನ ಬಡಿಗೆಯನ್ನು ಬೀಸಿ ಎಸೆದ . ಅವರು ಒಂದು ದಿನ, ಎರಡು
ದಿನ, ಮೂರು ದಿನ ಪ್ರಯಾಣ ಮಾಡಿಕೊಂಡು ಹೋದರು . ಆದರೂ ಅದು ಕಾಣಬರಲಿಲ್ಲ.
ಒಂದು ಇಡೀ ವಾರ ಪ್ರಯಾಣ ಮಾಡಿದನಂತರವಷ್ಟೆ ಅದು ಕಾಣಬಂದಿತು .
ಈಗ ರೈತನ ಮಗ ಇವಾನ್ನ ಸರದಿ . ಅವನು ತನ್ನ ಬಡಿಗೆಯನ್ನು ಎಸೆದ . ಅನಂತರ
ಮೂವರೂ ಅದನ್ನು ಹುಡುಕಿಕೊಂಡು ಪ್ರಯಾಣ ಹೊರಟರು . ಒಂದು ವಾರ ಹೋದರು ,
ಎರಡು ವಾರ ಹೋದರು, ಮೂರು ವಾರ ಹೋದರು . ಆದರೂ ಅದು ಕಾಣಬರಲೇ ಇಲ್ಲ .
“ನಮ್ಮ ಕಣ್ಣು ತಪ್ಪು ಹೋಗಿರಬೇಕು. ಎಲ್ಲೋ ದಾಟಿ ಬಿಟ್ಟೆವೋ ಏನೋ ” ಎಂದು ಆ
ಇಬ್ಬರು ಯೋಧರೂ ಹೇಳಿದರು . “ ಇಲ್ಲ, ಇಲ್ಲ !” ಇವಾನ್ ಎಂದ. “ ಯಾರೋ ಅದನ್ನು ಕಂಡು
ತೆಗೆದುಕೊಂಡು ಹೋಗಿರಬೇಕು.”
ಅವರು ಪ್ರಯಾಣ ಮಾಡಿಕೊಂಡು ಹೋದರು . ಮತ್ತೊಂದು ವಾರ ಹೋಗಿರಬೇಕು,
ಆಗ ಅವರಿಗೆ ಒಂದು ದೊಡ್ಡ ಮನೆ ಕಾಣಬಂದಿತು . ಅದರ ಸುತ್ತ ತಾವದ ಬೇಲಿ ಇತ್ತು .
ಆ ಮನೆಯ ಬಳಿಗೆ ಒಂದು ತಾಮ್ರದಸೇತುವೆ ದಾಟಿ ಹೋಗಬೇಕಿತ್ತು . ಇವರು ಒಳಗೆ ಹೋಗಿ
ನೋಡುತ್ತಾರೆ - ಅಕೋ , ಅಲ್ಲಿದೆ ಇವಾನ್ನ ಬಡಿಗೆ ! ಅದು ಮನೆಯ ಪಕ್ಕದಲ್ಲಿ ನೆಲದ ಮೇಲೆ
ಬಿದ್ದಿದೆ. ಅದು ಸುತ್ತ ಇದ್ದ ತಾಮ್ರದ ಬೇಲಿಯ ಮೇಲೆ ಹಾರಿ ಬಂದು ಕೆಳಗೆ ಬೀಳುವಾಗ ಮನೆಯ
ಒಂದು ಮೂಲೆಯನ್ನು ಮುರಿದಿದ್ದಿತು .
ಈ ಮನೆ ಡೇಗನ್ಗಳ ಒಂದು ಕುಟುಂಬಕ್ಕೆ ಸೇರಿದ್ದಿತು . ಅವು ಭಯಂಕರ ಡೇಗನ್ಗಳಾ
ಗಿದ್ದವು. ಆದರೆ ಅವು ಆಗ ಮನೆಯಲ್ಲಿರಲಿಲ್ಲ. ಅವೆಲ್ಲ ಎಲ್ಲಿಯೋ ಯುದ್ಧ ಮಾಡಲು ಹೋಗಿದ್ದವು.
ಮನೆಯೊಳಗೆ ಯಾರೂ ಇರದಿದ್ದುದನ್ನು ಕಂಡು ಇವಾನ್ ಅಲ್ಲಿ ಸ್ವಲ್ಪ ವಿಶ್ರಮಿಸಿಕೊಳ್ಳಲು
ನಿರ್ಧರಿಸಿದ. ಅವನು ಒಬ್ಬ ಯೋಧನಿಗೆ ಹೊರಗೆ ತಾಮ್ರದ ಸೇತುವೆಯ ಬಳಿ ಕಾವಲು ನಿಲ್ಲಲು
ಹೇಳಿದ. ಇನ್ನೊಬ್ಬನಿಗೆ ಕುದುರೆಗಳನ್ನು ಕಾಯುವಂತೆ ಹೇಳಿದ. ತಾನೇ ಒಳಗೆ ಮಲಗಲು ಹೋದ.
ಸೇತುವೆ ಕಾಯುತ್ತಿದ್ದವ ಸ್ವಲ್ಪ ಹೊತ್ತು ಪಹರೆ ನಡೆಸಿದ. ಆದರೆ ದೀರ್ಘ ಪ್ರಯಾಣದಿಂದ
ಬಳಲಿದ್ದ ಅವನು ನಂತರ ಮಲಗಿ ಬಿಟ್ಟ . ಮಧ್ಯರಾತ್ರಿಯಲ್ಲಿ ಇವಾನ್ಗೆ ಎಚ್ಚರವಾಗಿ ಬಂದು
ನೋಡುತ್ತಾನೆ - ಸೇತುವೆ ಕಾಯುವವ ಗಾಢ ನಿದ್ರೆಯಲ್ಲಿ ಮುಳುಗಿದ್ದಾನೆ.
ಆಗ ಇದ್ದಕ್ಕಿದ್ದಂತೆ ಭೂಮಿ ಅದುರಿತು ... ಆರು ತಲೆಗಳ ಒಂದು ಡೇಗನ್ ಕುದುರೆಯ ಮೇಲೆ
ಸವಾರಿ ಮಾಡಿಕೊಂಡು ಮನೆಯ ಕಡೆಗೆ ಬರುತ್ತಿದ್ದಿತು . ಅದು ತನ್ನ ಕುದುರೆಗೆ ಹೀಗೆ ಹೇಳಿತು :
“ನಿಶ್ಚಲವಾಗಿ ನಿಲ್ಲು , ಕೆನೆಯಬೇಡ ! ಇಲ್ಲಿ ನಮ್ಮ ಎದುರು ನಿಲ್ಲಬಲ್ಲಂಥವರು ಯಾರೂ
ಇಲ್ಲ. ರೈತನ ಮಗ ಇವಾನ್ನಷ್ಟೆ ನಮ್ಮ ಎದುರು ನಿಲ್ಲಬಲ್ಲ. ಆದರೆ ಅವನಿನ್ನೂ ಬಾಲಕ . ಅಲ್ಲದೆ
ಇಲ್ಲಿಂದ ತುಂಬ ದೂರದಲ್ಲಿದ್ದಾನೆ, ರಣಹದ್ರೂ ಅಷ್ಟು ದೂರ ಹಾರಿ ಹೋಗಿ ಅವನ ಮಳೆ
ಗಳನ್ನು ತರಲಾರದು. ”
“ ಹಾಗೇನು ? ರಣಹದ್ದು ಮಾಡಲಾಗದುದನ್ನು ಕೆಚ್ಚೆದೆಯ ಮನುಷ್ಯ ಮಾಡಬಲ್ಲ ! ” ಎಂದ
ರೈತನ ಮಗ ಇವಾನ್ .
- “ ಯಾತಕ್ಕೆ ಬಂದಿದ್ದೀಯ ? ನನ್ನ ಜೊತೆ ಹೋರಾಡಲೋ ಅಥವಾ ಶಾಂತಿ ಮಾಡಿ
ಕೊಳ್ಳಲೋ ? ” ಡೇಗನ್ ಕೇಳಿತು.
“ಹೋರಾಡಲು ಬಂದಿದ್ದೇನೆ. ನಿನ್ನಂಥವರ ಜೊತೆ ಶಾಂತಿ ಮಾಡಿಕೊಳ್ಳುವೆ ಅಂದು
ಕೊಂಡೆಯಾ ? ”
“ಸರಿ ಹಾಗಾದರೆ, ನೀನೇ ಮೊದಲ ಪ್ರಹಾರ ನೀಡು.”
“ ಇಲ್ಲ, ನೀನೇ ನೀಡು. ನೀನಷ್ಟೆ ನಿನ್ನ ಇಡೀ ರಾಜ್ಯದಲ್ಲಿ ಎಲ್ಲರಿಗಿಂತ ಹೆಚ್ಚು ಹಿರಿಯವ! ”
ಆರು ತಲೆಗಳ ಡೇಗನ್ ಇವಾನ್ನ ಮೇಲೆ ಎರಗಿ ಬಂದು ಅವನಿಗೆ ಭಾರಿ ಪ್ರಹಾರ ನೀಡಿತು.
ಆದರೆ ಇವಾನ್ ನಿಂತ ಸ್ಥಳದಿಂದ ಸ್ವಲ್ಪ ಮಿಸುಕಿದ, ಅಷ್ಟೆ . ಈಗ ಇವಾನ್ನ ಸರದಿ. ಅವನು
ತನ್ನ ಬಡಿಗೆಯಿಂದ ಡೇಗನ್ನ ಮೇಲೆ ಭಾರಿ ಪ್ರಹಾರ ನೀಡಿದ – ಓಹ್ , ಒಂದೇ ಹೊಡೆತಕ್ಕೆ
ಡೇಗನ್ನ ಆರು ತಲೆಗಳೂ ನೆಲಕ್ಕೆ ಉರುಳಿದವು!
ಬೆಳಗಾಯಿತು. ಇವಾನ್ ಸೇತುವೆ ಕಾಯುತ್ತಿದವನನ್ನು ಕರೆದು ಅವನು ರಾತ್ರಿಯಲ್ಲಿ ಸೇತುವೆ
ಯನ್ನು ಎಷ್ಟು ಚೆನ್ನಾಗಿ ಕಾದ, ಎಂದು ಕೇಳಿದ.
“ ತುಂಬ ಚೆನ್ನಾಗಿಯೇ ಕಾದೆ. ಒಂದು ಹಕ್ಕಿಯ ಹಾದು ಬರಲು ಸಾಧ್ಯವಿರಲಿಲ್ಲ” ಅವ
ನೆಂದ.
ಹಗಲು ಕಳೆಯಿತು. ರಾತ್ರಿ ಬಂದಿತು . ರೈತನ ಮಗ ಇವಾನ್ ಮೊದಲ ಯೋಧನನ್ನು ಕುದುರೆ
ಗಳನ್ನು ಕಾಯಲು ಕಳುಹಿಸಿ ಕುದುರೆಗಳನ್ನು ಕಾಯುತ್ತಿದವನನ್ನು ಸೇತುವೆ ಕಾಯಲು ಕಳು
ಹಿಸಿಕೊಟ್ಟ .
ಆ ಎರಡನೆಯವನೂ ನಿದ್ರೆ ಮಾಡಿಬಿಟ್ಟ . ಆದರೆ ಇವಾನ್ ಸಕಾಲದಲ್ಲೇ ಎಚ್ಚೆತ್ತು ತಾನೇ
ಸೇತುವೆ ಬಳಿ ಕಾಯಲು ಹೋದ. ಆಗ ಇದಕ್ಕಿದಂತೆ ಭೂಮಿ ಅದುರಿತು , ನಡುಗ ತೊಡಗಿತು .
ಗುಡುಗಿನಂಥ ಶಬ್ದ ಕೇಳಿ ಬಂದಿತು. ಒಂಬತ್ತು ತಲೆಗಳ ಒಂದು ಡೇಗನ್ ಸವಾರಿ ಮಾಡಿಕೊಂಡು
ಬಂದಿತು.
“ ನಿಶ್ಚಲವಾಗಿ ನಿಲ್ಲು , ಕೆನೆಯಬೇಡ ” ಎಂದು ತನ್ನ ಕುದುರೆಗೆ ಹೇಳಿತು . “ನಮ್ಮ ಎದುರು
ನಿಲ್ಲಬಲ್ಲಂಥವರು ಇಲ್ಲಿ ಯಾರೂ ಇಲ್ಲ. ರೈತನ ಮಗ ಇವಾನ್ನಷ್ಟೆ ನಮ್ಮ ಎದುರು ನಿಲ್ಲಬಲ್ಲ.
ಆದರೆ ಅವನಿನ್ನೂ ಬಾಲಕ . ಅಲ್ಲದೆ ಇಲ್ಲಿಂದ ತುಂಬ ದೂರದಲ್ಲಿದ್ದಾನೆ. ರಣಹದ್ರೂ ಅಷ್ಟು
ದೂರ ಹಾರಿ ಹೋಗಿ ಅವನ ಮೂಳೆಗಳನ್ನು ತರಲಾರದು.”
“ ಹಾಗೇನು ? ರಣಹದ್ದು ಮಾಡಲಾಗದುದನ್ನು ಕೆಚ್ಚೆದೆಯ ಮನುಷ್ಯ ಮಾಡಬಲ್ಲ ! ”
ಎಂದ ರೈತನ ಮಗ ಇವಾನ್ ,
- “ ಯಾತಕ್ಕೆ ಬಂದಿದ್ದೀಯ ? ನನ್ನ ಜೊತೆ ಹೋರಾಡಿ ಅಥವಾ ಶಾಂತಿ ಮಾಡಿ
ಕೊಳ್ಳಲೋ ? ” ಡೇಗನ್ ಕೇಳಿತು.
“ಹೋರಾಡಲು ಬಂದಿದ್ದೇನೆ. ನಿನ್ನಂಥವರ ಜೊತೆ ಶಾಂತಿ ಮಾಡಿಕೊಳ್ಳುವೆ ಅಂದು
ಕೊಂಡೆಯಾ ? ”
“ ಸರಿ , ಹಾಗಾದರೆ, ನೀನೇ ಮೊದಲ ಪ್ರಹಾರ ನೀಡು ! ”
“ ಇಲ್ಲ. ನೀನೇ ನೀಡು. ನೀನಷ್ಟೆ ಜಗತ್ತಿನ ಈ ಭಾಗದಲ್ಲಿ ಎಲ್ಲರಿಗಿಂತ ಹೆಚ್ಚು ಹಿರಿಯವ! ”
ಒಂಬತ್ತು ತಲೆಗಳ ಡೇಗನ್ ಹೆಚ್ಚಿಗೆ ಕಾಯಲಿಲ್ಲ. ಅದು ಇವಾನ್ನ ಮೇಲೆ ಎರಗಿ ಬಂದು
ಎಷ್ಟು ಜೋರಾಗಿ ಪ್ರಹಾರ ನೀಡಿತೆಂದರೆ ಇವಾನ್ ಕಾಲಿನ ಹರಡಿನವರೆಗೆ ನೆಲದೊಳಕ್ಕೆ ಕುಸಿದ.
ಆದರೂ ಹೋರಾಡಿದ, ಡೇಗನ್ಗೆ ಎಂಥ ಪ್ರಹಾರ ಕೊಟ್ಟನೆಂದರೆ , ಒಂದೇ ಏಟಿಗೆ ಅದರ
ಏಳು ತಲೆಗಳು ಉರುಳಿ ಬಿದ್ದವು. ಇನ್ನೊಂದು ಪ್ರಹಾರಕೊಟ್ಟು ಅವನು ಅದರ ಉಳಿದ ಎರಡು
ತಲೆಗಳನ್ನೂ ಕೊಚ್ಚಿ ಹಾಕಿದ... ಇವಾನ್ ಮನೆಗೆ ಹಿಂದಿರುಗಿ ಮಲಗಿದ.
- ಬೆಳಗಾಯಿತು. ಇವಾನ್ ಸೇತುವೆ ಕಾಯುತ್ತಿದ್ದವನನ್ನು ಕರೆದು ಅವನು ರಾತ್ರಿಯಲ್ಲಿ ಹೇಗೆ
ಸೇತುವೆಯನ್ನು ಕಾದ ಎಂದು ಕೇಳಿದ.
“ತುಂಬ ಚೆನ್ನಾಗಿ ಕಾದೆ. ಒಂದು ಇಲಿಯನ್ನೂ ಹೋಗಲು ಬಿಡಲಿಲ್ಲ ” ಅವನೆಂದ.
ಮೂರನೆಯ ರಾತ್ರಿ ಇವಾನ್ ಇಬ್ಬರು ಯೋಧರನ್ನೂ ಮನೆಗೆ ಕರೆದು , ತನ್ನ ಕೈಗವಸನ್ನು
ಗೋಡೆಯ ಮೇಲೆ ನೇತು ಹಾಕಿ, ಹೇಳಿದ :
“ ಇವತ್ತು ರಾತ್ರಿ ನಾನೇ ಸೇತುವೆ ಕಾಯಲು ಹೋಗುತ್ತೇನೆ. ನೀವು ನನ್ನ ಈ ಕೈಗವಸನ್ನು
ನೋಡುತ್ತಿರಿ. ಅದರಿಂದ ಬೆವರು ಹೊರಸೂಸಿದರೆ ಆಗ ನೀವು ಪ್ರಶಾಂತವಾಗಿ ಕುಳಿತುಕೊಳ್ಳಿ!
ಅದರಿಂದ ರಕ್ತ ಹೊರ ಸೂಸಿದರೆ ನನ್ನ ಕುದುರೆಯನ್ನು ಬಿಚ್ಚಿ ಅದಕ್ಕೆ ಇಷ್ಟವಾದಲ್ಲಿಗೆ ಹೋಗಲು
ಬಿಟ್ಟು ಬಿಡಿ.”
- ಅವನು ಸೇತುವೆಯ ಕೆಳಗೆ ನಿಂತು ಕಾದ. ಮಧ್ಯರಾತ್ರಿಗೆ ಸ್ವಲ್ಪ ಮುನ್ನ ಭೂಮಿ ನಡುಗ
ತೊಡಗಿತು , ಗುಡುಗುಟ್ಟಿತು. ಓಕ್ ಮರಗಳಿಂದ ಎಲೆಗಳು ಉದುರಿದವು. ಅಲ್ಲಿನ ಡೇಗನ್
ಗಳಲ್ಲೆಲ್ಲ ಅತ್ಯಂತ ಹಿರಿಯ ಡೇಗನ್ ಬಂದಿತು . ಅದು ಬೆಂಕಿ ತಿನ್ನುವ, ಉರಿಯನ್ನು ಕುಡಿಯುವ,
ಇವಾನ್ನಿಗೆ ಬೇಕಿದ್ದ ಅದೇ ಕುದುರೆಯ ಮೇಲೆ ಕುಳಿತಿತ್ತು . ಸೇತುವೆ ಹತ್ತಿರ ಬಂದಾಗ ಅದು
ಕುದುರೆಗೆ ಹೇಳಿತು :
“ ನಿಶ್ಚಲವಾಗಿ ನಿಲ್ಲು , ಮುಗ್ಗರಿಸಬೇಡ. ರೈತನ ಮಗ ಇವಾನ್ನನ್ನು ಬಿಟ್ಟು ಬೇರಾರೂ
ನಮ್ಮ ಎದುರು ನಿಲ್ಲಲಾರರು . ಇವಾನ್ ಇನ್ನೂ ಬಾಲಕ . ಒಲೆಯ ಗೂಡಿನ ಮೇಲೆ ಕುಳಿತು
ಕೊಳ್ಳುವುದು ಬಿಟ್ಟು ಅವನಿಗೆ ಬೇರೇನೂ ಕೆಲಸ ಇಲ್ಲ. ಅವನೂ ಎಷ್ಟು ದೂರ ಇದ್ದಾನೆಂದರೆ ರಣ
ಹರೂ ಅಷ್ಟು ದೂರ ಹಾರಿ ಹೋಗಿ ಅವನ ಮೂಳೆಗಳನ್ನು ತರಲಾರದು. ”
ಅದರ ಮಾತನ್ನು ಕೇಳಿಸಿಕೊಂಡು ರೈತನ ಮಗ ಇವಾನ್ ಹೇಳಿದ : “ ರಣಹದ್ದು ಮಾಡಲಾಗ
ದುದನ್ನು ಕೆಚ್ಚೆದೆಯ ಮನುಷ್ಯ ಮಾಡಬಲ್ಲ! ”
“ ಯಾತಕ್ಕೆ ಬಂದಿದ್ದೀಯ ? ನನ್ನ ಜೊತೆ ಹೋರಾಡಿ ಅಥವಾ ಶಾಂತಿ ಮಾಡಿ
ಕೊಳ್ಳಲೋ ? ” ಡೇಗನ್ ಕೇಳಿತು .
“ಹೋರಾಡಲು ಬಂದಿದ್ದೇನೆ. ನಿನ್ನಂಥವರ ಜೊತೆ ಶಾಂತಿ ಮಾಡಿಕೊಳ್ಳುವೆ ಅಂದು
ಕೊಂಡೆಯಾ ? ”
“ ಸರಿ , ಹಾಗಾದರೆ, ನೀನೇ ಮೊದಲ ಪ್ರಹಾರ ನೀಡು ! ” ಡೇಗನ್ ಹೇಳಿತು .
“ ಇಲ್ಲ. ನೀನೇ ನೀಡು! ನೀನೇ ಅಲ್ಲವೇ ಇಡೀ ಜಗತ್ತಿನಲ್ಲಿ ಬೇರೆ ಯಾರಿಗಿಂತ ಹೆಚ್ಚು ಶಕ್ತಿ
ವಂತ ! ”
ಡೇಗನ್ ಹೆಚ್ಚು ಕಾಲ ಕಾಯಲಿಲ್ಲ. ಇವಾನ್ನ ಮೇಲೆ ಎರಗಿ ಬಿದ್ದಿತು . ಎಷ್ಟು ಜೋರಾಗಿ
ಪ್ರಹಾರ ನೀಡಿತೆಂದರೆ ಇವಾನ್ನ ಮುಖ ಬಿಳಚಿಕೊಂಡಿತು. ಆದರೆ ಅವನು ತತ್ತರಿಸಲಿಲ್ಲ . ಹೋರಾ
ಡುತ್ತಲೇ ಹೋದ. ಕೊನೆಗೆ ಡೇಗನ್ನ ಹನ್ನೆರಡು ತಲೆಗಳಲ್ಲಿ ಮೂರಷ್ಟೆ ಉಳಿದವು. ಆದರೆ
ಡೇಗನ್ ಇವಾನ್ನ ಮೇಲೆ ಒಂದೇ ಸಮನಾಗಿ ಪ್ರಹಾರ ನೀಡಿ ಅವನು ಸೊಂಟದವರೆಗೂ
ನೆಲದಡಿ ಕುಸಿಯುವಂತೆ ಮಾಡಿತು . ಯುವಕನ ಶಕ್ತಿ ಕುಗ್ಗುತ್ತ ಹೋಯಿತು. ಇನ್ನೇನು ಪೂರ್ತಿ
ಹೋಗುವುದರಲ್ಲಿತ್ತು .
“ ಇಲ್ಲಿ ಕೇಳು. ನಿನಗೆ ಅಪ್ಪ ಇದ್ದನೆ ? ” ಡೇಗನ್ ಕೇಳಿತು .
“ ಅವನ ಬಳಿ ಎತ್ತುಗಳಿದ್ದವೆ ? ”
“ಇದವು.”
“ ಅವುಗಳಿಂದ ಅವನು ಭೂಮಿ ಉಳುತ್ತಿದ್ದನೆ ? ”
“ ಉಳುತ್ತಿದ.”
“ ಅವುಗಳಿಗೆ ವಿಶ್ರಾಂತಿ ತೆಗೆದುಕೊಳ್ಳಲು ಬಿಡುತ್ತಿದ್ದನೆ ? ”
“ ಬಿಡುತ್ತಿದ್ದ. ”
“ ಹಾಗಾದರೆ ನಾವು ವಿಶ್ರಾಂತಿ ತೆಗೆದುಕೊಳ್ಳೋಣ. ”
ಇವಾನ್ ಅದಕ್ಕೆ ಒಪ್ಪಿಕೊಂಡ. ತನ್ನ ಬಡಿಗೆಯನ್ನು ಕೆಳಗೆ ಹಾಕಿದ. ಎಷ್ಟು ಜೋರಾಗಿ
ಹಾಕಿದನೆಂದರೆ ಅದು ಅವನು ಉದ್ದೇಶಿಸಿದ್ದುದಕ್ಕಿಂತ ಹೆಚ್ಚು ದೂರ ಹಾರಿ ಹೋಗಿ ಬಿದ್ದಿತು .
ಅದು ಲಾಯಕ್ಕೆ ಹೋಗಿ ಬಡಿದು ಅದರ ಗೋಡೆಗಳಲ್ಲೊಂದನ್ನು ಮುರಿದು ಬೀಳಿಸಿತು . ಅಲ್ಲಿದ್ದ
ಅವನ ಕುದುರೆ ಹಗ್ಗ ಕಿತ್ತುಕೊಂಡು ಇವಾನ್ ಇದ್ದ ಬಳಿಗೆ ಬಂದಿತು . ಅದು ತನ್ನ ಗೊರಸುಗಳಿಂದ
ಇವಾನ್ನ ಸುತ್ತ ಇದ್ದ ಮಣ್ಣನ್ನು ಅಗೆದು ಹಾಕ ತೊಡಗಿತು.
ಮನೆಯಲ್ಲಿದ್ದ ಇಬ್ಬರು ಯೋಧರೂ ಎಚ್ಚರಗೊಂಡರು. ನೋಡುತ್ತಾರೆ – ಇವಾನ್ನ
ಕೈಗವಸಿನಿಂದ ರಕ್ತ ಒಸರುತ್ತಿದೆ. ಅವರಿಗೆ ತುಂಬ ಗಾಬರಿಯಾಯಿತು. ಅವರು ಇವಾನ್ನ
ಸಹಾಯಕ್ಕೆ ಹೋಗ ಬಯಸಲಿಲ್ಲ.
ಈಮಧ್ಯೆ ಇವಾನ್ನ ಕುದುರೆ ಅವನ ಸುತ್ತ ಇದ್ದ ಮಣ್ಣನ್ನೆಲ್ಲ ಅಗೆದು ಹಾಕಿ ಅವನನ್ನು
ಬಿಡಿಸಿತು . ಇವಾನ್ ಡೇಗನ್ಗೆ ಹೇಳಿದ : “ ಇದೇ ನಿನ್ನ ಕೊನೆ, ಡೇಗನ್ , ನಿನ್ನನ್ನೀಗ ಕೊಂದು
ಹಾಕುತ್ತೇನೆ. ”
“ ಆಗಲಿ , ಕೊಂದು ಹಾಕು , ಸಾಯುವ ಮುನ್ನ ನಿನಗೆ ಒಂದು ಮಾತು ಹೇಳೀನಿ, ಕೇಳು.
ನಿನಗೆ ಬೇಕಾದ ಮಾಂತ್ರಿಕ ಕುದುರೆಯನ್ನು ನೀನು ಪಡೆದುಕೊಂಡರೂ ದೊರೆಯ ಬಳಿಗೆ ಕೊಂಡೊ
ಯ್ಯಲಾರೆ , ತಿಳಿ, ನನಗೆ ಇನ್ನೂ ಮೂವರು ತಂಗಿಯರಿದ್ದಾರೆ, ಅಮ್ಮ , ಅಪ್ಪ ಇದ್ದಾರೆ. ನನ್ನ ಅಪ್ಪ
ದೊರೆ ಹೆರೋದ್. ಅವರು ನಿನ್ನನ್ನೂ ನಿನ್ನ ಯೋಧರನ್ನೂ ಮುಗಿಸುತ್ತಾರೆ. ”
ಇವಾನ್ ಡೇಗನ್ನ ಉಳಿದ ಮೂರು ತಲೆಗಳನ್ನೂ ಕಡಿದು ಹಾಕಿದ. ಆಮೇಲೆ ಡೇಗನ್
ಹೇಳಿದ್ದ ಮಾತುಗಳನ್ನು ನೆನಪು ಮಾಡಿಕೊಂಡು ಯೋಚನೆ ಮಾಡುತ್ತ ನಿಂತ. ಅವನಿಗೆ ಏನು
ಮಾಡಬೇಕೋ ತಿಳಿಯದಾಯಿತು. ಆಗ ಅವನು ಹಿಂದೆ ಮಳೆ ಬಂದಾಗ ತನ್ನ ಕುದುರೆ ಚರ್ಮ
ಗಳನ್ನೇ ಗುಡಿಸಿಲಿನ ಮೇಲೆ ಹೊದಿಸಿ ಸಹಾಯ ಮಾಡಿದ್ದನಲ್ಲ ಆ ಮುದುಕಿ ಅವನಿಗೆ ಸಹಾಯ
ಮಾಡಿದಳು . ಅವಳಿಗೆ ಈ ಜಗತ್ತಿನಲ್ಲಾಗುತ್ತಿದ್ದುದೆಲ್ಲ ಗೊತ್ತಿಗೆ ಬರುತ್ತಿತ್ತು . ಇವಾನ್ ಅಪಾಯ
ದಲ್ಲಿದ್ದನೆಂದು ತಿಳಿದು ಅವನ ಬಳಿಗೆ ತನ್ನ ಪುಟ್ಟ ನಾಯಿಯನ್ನು ಕಳುಹಿಸಿ ಕೊಟ್ಟಳು.
ನಾಯಿ ಅವನಿಗೆ ಹೇಳಿತು : “ನೀವು ಮನೆಗೆ ಹಿಂದಿರುಗುವಾಗ ನಿಮಗೆ ತುಂಬ ಬಾಯಾರಿಕೆ
ಯಾಗುತ್ತೆ . ದಾರಿಯ ಬಲಗಡೆ ಒಂದು ಕೊಳ ಇರುತ್ತೆ . ಅದರ ನೀರು ಗಾಜಿನಷ್ಟು ಶುಭ್ರವಾಗಿ
ತಿಳಿಯಾಗಿ ಇರುತ್ತೆ . ನಿಮಗೆ ಬಾಯಾರಿಕೆಯಿಂದ ನಾಲಿಗೆ ಅಂಗುಳಿಗೆ ಅಂಟಿಕೊಳ್ಳುವಂತಾದರೂ
ಆ ಕೊಳದ ನೀರನ್ನು ಕುಡಿಯಬೇಡಿ. ನೀನು ನಿನ್ನ ಬಡಿಗೆಯಿಂದ ಅದರ ಮೇಲೆ ಅಡ್ಡವಾಗಿ ಪ್ರಹಾರ
ನೀಡು. ಆಗ ಏನಾಗುತ್ತೆ ಅನ್ನೋದು ನಿನಗೇ ಗೊತ್ತಾಗುತ್ತೆ . ಆಮೇಲೆ ಮುಂದಕ್ಕೆ ಹೋಗಿ,
ಒಂದು ಚೌಬೀನೆ ಮರ ಕಾಣುತ್ತೆ . ಅದರ ಕೆಳಗೆ ಒಂದು ಮೇಜು ಇರುತ್ತೆ . ಮೇಜಿನ ಮೇಲೆ
ತುಂಬ ತಿಂಡಿ ತೀರ್ಥ ಇರಿಸಿರಲಾಗುತ್ತೆ . ಎಷ್ಟೇ ಹಸಿವಾದರೂ ಅದನ್ನು ತಿನ್ನೋಕೆ ಮಾತ್ರ
ಹೋಗಬೇಡಿ. ಮೇಜಿನ ಮೇಲೆ ನಿನ್ನ ಬಡಿಗೆಯಿಂದ ಪ್ರಹಾರ ನೀಡು. ಏನಾಗುತ್ತೆ ಅನ್ನೋದು
ನಿನಗೇ ಗೊತ್ತಾಗುತ್ತೆ . ಆಮೇಲೆ ನಿಮಗೆ ಇನ್ನೊಂದು ಚೌಬೀನೆ ಮರ ಕಾಣುತ್ತೆ . ಅದರ ಕೆಳಗೆ
ಹಾಸಿಗೆಗಳು ಇರುತ್ತವೆ. ನಿಮಗೆ ತುಂಬ ಬಳಲಿಕೆಯಾಗಿ ಕಣ್ಣು ಎಳೆದುಕೊಂಡು ಹೋಗುತ್ತಿದ್ದರೂ
ಅವುಗಳ ಮೇಲೆ ಮಲಗಬೇಡಿ. ಬದಲು ಅವುಗಳ ಮೇಲೆ ನಿನ್ನ ಬಡಿಗೆಯಿಂದ ಬಡಿ, ಏನಾ
ಗುತ್ತೆ ಅನ್ನೋದು ನಿನಗೇ ಗೊತ್ತಾಗುತ್ತೆ ! ”
ಇವಾನ್ ಮುದುಕಿಯ ನಾಯಿಯ ಮಾತುಗಳನ್ನೆಲ್ಲ ಕೇಳಿಸಿಕೊಂಡು ಅದಕ್ಕೆ ವಂದನೆ ತಿಳಿ
ಸಿದ. ಆಮೇಲೆ ಡೇಗನ್ನ ಮಾಂತ್ರಿಕ ಕುದುರೆಯನ್ನು ತೆಗೆದುಕೊಂಡು ಅವನು ರಾಜನ ಅರ
ಮನೆಯ ಕಡೆಗೆ ಹೊರಟ . ರಾಜನ ಇಬ್ಬರು ಯೋಧರೂ ಅವನ ಜೊತೆ ಹೊರಟರು . ಅವರು
ಪ್ರಯಾಣ ಮಾಡುತ್ತ ಮಾಡುತ್ತ ಹೋದರು . ಅವರಿಗೆ ತುಂಬ ಬಾಯಾರಿಕೆಯಾಯಿತು. ರಸ್ತೆಯ
ಬಲ ಬದಿಯಲ್ಲಿ ಒಂದು ಕೊಳ ಕಂಡುಬಂದಿತು. ಆ ಇಬ್ಬರು ಯೋಧರೂ ಅದರ ನೀರು ಕುಡಿಯ
ಹೋದರು . ಆದರೆ ಇವಾನ್ ಹೇಳಿದ :
“ ತಾಳಿ , ತಾಳಿ, ಮೊದಲು ಅದು ಏನು ಎಂದು ನೋಡಿ. ”
ಹಾಗೆಂದು ಅವನು ಆ ಕೊಳದ ಮೇಲೆ ತನ್ನ ಬಡಿಗೆಯಿಂದ ಪ್ರಹಾರ ನೀಡಿದ. ಆಗ ಏನಾ
ಯಿತು ಅಂತೀರಿ -ಕೊಳದ ನೀರೆಲ್ಲ ರಕ್ತವಾಯಿತು. ವಾಸ್ತವವಾಗಿ ಆ ಕೊಳಕೊಳವಾಗಿರಲಿಲ್ಲ.
ಡೇಗನ್ನ ತಂಗಿ ಆ ಕೊಳದ ರೂಪದಲ್ಲಿ ಅಲ್ಲಿದಳು .
ಅವರು ಮುಂದೆ ಹೋದರು . ಇವಾನ್ನು ಡೇಗನ್ನ ಉಳಿದ ಇಬ್ಬರು ಸೋದರಿಯರನ್ನೂ
ಕೊಂದ : ಅವರಲ್ಲೊಬ್ಬಳು ತಿಂಡಿತೀರ್ಥಗಳಿಂದ ತುಂಬಿದ ಮೇಜಿನ ರೂಪದಲ್ಲಿದ್ದಳು , ಇನ್ನೊ
ಬ್ಬಳು ಹಾಸಿಗೆಗಳ ರೂಪದಲ್ಲಿದ್ದಳು . ಆಮೇಲೆ ಅವರು ಮುಂದುವರಿಯುತ್ತಿದ್ದಂತೆ ಆಕಾಶ ಇದಕ್ಕೆ
ದ್ದಂತೆ ಕಪ್ಪಾಯಿತು. ಕಾರ್ಮುಗಿಲೊಂದು ಅದನ್ನು ಆವರಿಸುತ್ತಿದ್ದುದನ್ನು ಅವರು ಕಂಡರು .
ಮತ್ತೆ ನೋಡಿದಾಗ ಅದು ಕಪ್ಪು ಮೋಡವಾಗಿರಲಿಲ್ಲ, ಆದರೆ ಡೇಗನ್ನ ಮುದುಕಿ ತಾಯಿ
ಎಂಬುದು ಅವರಿಗೆ ತಿಳಿದು ಬಂದಿತು . ಅವಳ ಮೇಲು ತುಟಿ ಆಕಾಶವನ್ನು ಮುಟ್ಟಿದರೆ ಕೆಳ ತುಟಿ
ಭೂಮಿಯನ್ನು ಮುಟ್ಟಿದ್ದಿತು .
ರೈತನ ಮಗ ಇವಾನ್ ಹೇಳಿದ : “ ಬನ್ನಿ ,ಸೋದರರೇ , ನಾವು ಈ ತಾಯಿ -ಡೇಗನ್ ವಿರುದ್ದ
ಜೊತೆಗೂಡಿಹೋರಾಡೋಣ. ನಾನು ಒಬ್ಬನೇ ಹೋರಾಡೋದು ಕಷ್ಟ .”
ಆದರೆ ಅವರು ತುಂಬ ಹೆದರಿ ಓಡಿ ಹೋದರು. ಇನ್ನು ನನ್ನ ಕತೆ ಮುಗಿಯಿತು ” ಇವಾನ್
ಅಂದುಕೊಂಡ. ಆದರೆ ಹತ್ತಿರದಲ್ಲೇ ಒಂದು ಕಮಾರಶಾಲೆ ಇದ್ದಿತೆಂಬುದು ಅವನಿಗೆ ಜ್ಞಾಪ
ಕಕ್ಕೆ ಬಂದಿತು. ಅವನು ಕುದುರೆಯನ್ನು ನಾಗಾಲೋಟ ಓಡಿಸಿಕೊಂಡು ಅಲ್ಲಿಗೆ ಹೋದ. ಆ
ಇಬ್ಬರು ಯೋಧರೂ ಅಡಗಿಕೊಳ್ಳಲು ಬೇರೆಲ್ಲೂ ಸ್ಥಳ ಕಾಣದೆ ಅಲ್ಲಿಗೇ ಬಂದರು .
ಅವರು ಕಮ್ಮಾರಶಾಲೆ ತಲುಪಿ ಒಳಗಿದ್ದ ಕಮ್ಮಾರರಿಗೆ ತಮ್ಮನ್ನು ಒಳ ಬಿಡುವಂತೆ ಕೇಳಿ
ಕೊಂಡರು . ಆ ಕಮ್ಮಾರಶಾಲೆಗೆ ಹನ್ನೆರಡು ಕಬ್ಬಿಣದ ಬಾಗಿಲುಗಳಿದ್ದವು. ಕಮ್ಮಾರರು ಅವುಗಳನ್ನು
ತೆರೆದರು. ಇವಾನ್ನೂ ಆ ಇಬ್ಬರು ಯೋಧರೂ ಒಳ ಹೊಕ್ಕಕೂಡಲೇ ಬಾಗಿಲುಗಳು ಮುಚ್ಚಿ
ಕೊಂಡವು. ಆದರೆ ಆ ತಾಯಿ -ಡೇಗನ್ಗೆ ಸುಳಿವು ತಿಳಿದು ಹೋಯಿತು. ಅದು ಕಮ್ಮಾರಶಾಲೆಯ
ಬಳಿಗೆ ಬಂದು ಅದರ ಬಾಗಿಲುಗಳನ್ನು ತನ್ನ ಉರಿಯ ನಾಲಿಗೆಗಳಿಂದ ನೆಕ್ಕ ತೊಡಗಿತು.
ಅದೇನೂ ತಮಾಷಿಯ ಸಂಗತಿಯಾಗಿರಲಿಲ್ಲವೆಂದು ರೈತನ ಮಗ ಇವಾನ್ ಕಂಡುಕೊಂಡ .
- ಅವನು ಕಮ್ಮಾರರಿಗೆ ಹೇಳಿದ: “ ಬೇಗ ಒಂದು ದೊಡ್ಡ ನೇಗಿಲನ್ನೂ ಈ ಕಮ್ಮಾರಶಾಲೆಯಷ್ಟು
ಗಾತ್ರದ ಒಂದು ಇಕ್ಕಳವನ್ನೂ ತಯಾರಿಸಿ ಕೊಡಿ! ”
ಕಮ್ಮಾರರು ತಕ್ಷಣವೇ ತಯಾರಿಸ ತೊಡಗಿದರು. ಅವರಿಗೆ ಅತ್ಯಲ್ಪ ಸಮಯವಷ್ಟೆ ಇದ್ದಿತು.
ಏಕೆಂದರೆ ತಾಯಿ -ಡೇಗನ್ ಆಗಲೇ ಹೆಚ್ಚಿನ ಬಾಗಿಲುಗಳನ್ನೆಲ್ಲ ಸುಟ್ಟು ಹಾಕಿದ್ದಿತು. ಆದರೆ ಅವರು
ಬೇಗಬೇಗ ಮಾಡಿದರು . ತಾಯಿ -ಡೇಗನ್ ಹತ್ತನೆಯ ಬಾಗಿಲು ನೆಕ್ಕಿ ಸುಟ್ಟು ಹಾಕುತ್ತಿದ್ದ ಹೊತ್ತಿ
ಗಾಗಲೇ ಅವರು ನೇಗಿಲನ್ನೂ ಇಕ್ಕಳವನ್ನೂ ಸಿದ್ಧಗೊಳಿಸಿದ್ದರು .
ತಾಯಿ -ಡೇಗನ್ ಕೊನೆಯ ಬಾಗಿಲನ್ನೂ ಸುಟ್ಟು ಹಾಕಿ ತನ್ನ ತಲೆಯನ್ನು ಒಳಕ್ಕೆ ತೂರಿ
ಸಿತು . ಇವಾನ್ನು ಅದರ ತುಟಿಗಳನ್ನು ಕೆಂಪಗೆ ಕಾದ ಇಕ್ಕಳದಿಂದ ಗಟ್ಟಿಯಾಗಿ ಹಿಡಿದು ತನ್ನೆಲ್ಲ
ಶಕ್ತಿಯನ್ನೂ ಬಿಟ್ಟು ಅವುಕಿದ. ಆಮೇಲೆ ಅವನು ಆ ತಾಯಿ -ಡೇಗನ್ನನ್ನು ನೇಗಿಲಿಗೆ ಕಟ್ಟಿ ,
ಬಲವಂತದಿಂದ ಹೊಲಕ್ಕೆ ಎಳೆದೊಯ್ದು ಉಳುವಂತೆ ಮಾಡಿದ. ಅದು ಉಳುತ್ತಿದ್ದಾಗ ಮನೆ
ಗಾತ್ರದ ಮಣ್ಣಿನ ಹೆಂಟೆಗಳು ತಳಮೇಲಾಗುತ್ತಿದ್ದವು. ಹೀಗೆ ಅವನು ಅನೇಕ ಗಂಟೆಗಳವರೆಗೆ ಉತ್ತ .
ಕೊನೆಗೆ ತಾಯಿ -ಡೇಗನ್ ಶಕ್ತಿಯನ್ನೆಲ್ಲ ಕಳೆದುಕೊಂಡು ಮೈ ಒಡೆದುಕೊಂಡು ಸತ್ತು ಬಿದ್ದಿತು.
ಆಗ ಅವನು ಅದನ್ನು ಎತ್ತಿಕೊಂಡು ಹೋಗಿಸಮುದ್ರಕ್ಕೆ ಹಾಕಿದ, ತನ್ನ ಕುದುರೆಯನ್ನು ಹುಲ್ಲು
ಗಾವಲೊಂದರಲ್ಲಿ ಸ್ವತಂತ್ರವಾಗಿ ಹೋಗುವಂತೆ ಬಿಟ್ಟುಕೊಟ್ಟ , ತನ್ನನ್ನು ಹಿಂಬಾಲಿಸಿ ಬರುತ್ತಿದ್ದ
ಆ ಯೋಧರಿಬ್ಬರನ್ನೂ ಅಟ್ಟಿದ.
“ಹೋಗಿ ಆಚೆಗೆ, ಹೇಡಿಗಳೇ ! ” ಅವನೆಂದ. “ನೀವು ಕುಲೀನ ರಕ್ತ ಹೊಂದಿರಬಹುದು.
ಆದರೆ ನೀವು ನನ್ನನ್ನು ಸಾಕಷ್ಟು ಸತಾಯಿಸಿದ್ದೀರ. ನಿಮ್ಮಿಂದ ನನಗೆ ಸಹಾಯಕ್ಕೆ ಬದಲು
ತೊಂದರೆಯೇ ಬೇಕಾದಷ್ಟಾಗಿದೆ ! ”
ಹಾಗೆ ಹೇಳಿ ಅವನು ಮಾಂತ್ರಿಕ ಕುದುರೆ ಹತ್ತಿ ಹೊರಟ .
ಸ್ವಲ್ಪ ದೂರ ಹೋದ ಮೇಲೆ ಅವನಿಗೆ ಒಬ್ಬ ವೃದ್ಧ ಎದುರಾದ. ಇವಾನ್ ಅವನಿಗೆ ನಮಸ್ಕ
ರಿಸದೆ ಮುಂದೆ ಹೋದ. ಆದರೆ ಆಮೇಲೆ ಯೋಚನೆ ಮಾಡಿದ: “ ಅಯ್ಯೋ ಏನು ಮಾಡಿ
ಬಿಟ್ಟೆ ! ನಾನು ಚಿಕ್ಕವ. ಆ ವಯಸ್ಸಾದವರಿಗೆ ಗೌರವ ತೋರುವುದು ನನ್ನ ಧರ್ಮ.”
ಮುದುಕನ ಬಳಿಗೆ ಬಂದು ಹೇಳಿದ :
“ ನಮಸ್ಕಾರ, ಅಜ್ಜ , ನನ್ನನ್ನು ಕ್ಷಮಿಸಿ, ನಾನು ನಿಮಗೆ ವಂದಿಸಬೇಕಿತ್ತು .ನೋಡದೆ ಹಾಗೆಯೇ
ಹೊರಟು ಹೋದೆ. ”
“ನಿಜ, ಯುವಕನೊಬ್ಬ ಯಾವಾಗಲೂ ತನಗಿಂತ ಹಿರಿಯರಾದವರಿಗೆ ಮೊದಲು ನಮಸ್ಕ
ರಿಸಬೇಕು . ಇದನ್ನು ನೀನು ಎಂದೂ ಮರೆಯಬೇಡ” ಮುದುಕ ಹೇಳಿದ. “ ಈಗ ನನ್ನ ಮಾತು
ಕೇಳು. ನೀನು ಮುಂದೆ ಹೋಗುತ್ತಿರುವಂತೆ ನಿನಗೆ ಒಬ್ಬ ಮುದುಕ ಇದಿರಾಗುತ್ತಾನೆ. ಅವನಿ
ಗೊಂದು ಮರದ ಕಾಲಿರುತ್ತೆ . ಅವನು ನಿನ್ನನ್ನು ನಿಲ್ಲಿಸಿ ಹೇಳುವನು : ನಿನ್ನ ಬಳಿ ಸೊಗಸಾದ
ಕುದುರೆ ಇದೆಯಲ್ಲ, ಹುಡುಗ. ಆದರೂ ನೀನೇನೂ ನನ್ನನ್ನು ಮಾರಿಸಿ ಹೋಗಲಾರೆ ! ಇವನ
ಜೊತೆಗೆ ನೀನು ಎಷ್ಟು ಮಾತ್ರವೂ ಓಟದ ಪೈಪೋಟಿಗೆ ಇಳಿಯಬಾರದು , ತಿಳಿಯಿತಾ? ಇದು
ಮೊದಲನೆಯ ಸಂಗತಿ . ಎರಡನೆಯದು, ದಾರಿಯಲ್ಲಿ ಯಾರು ಕೇಳಿದರೂ ಅವರನ್ನು
ನೀನು ನಿನ್ನ ಜೊತೆ ಕುದುರೆಯ ಮೇಲೆ ಕರೆದೊಯ್ಯಬೇಕು. ಇವೆರಡು ಸಂಗತಿಗಳನ್ನೂ
ನೆನಪಿನಲ್ಲಿಟ್ಟಿರು.”
ಇವಾನ್ ಮುಂದೆ ಹೊರಟ . ನೋಡುತ್ತಾನೆ - ಅವನ ಬಳಿಗೆ ಒಬ್ಬ ಮರದ ಕಾಲಿನ ಮುದುಕ
ಕುಂಟುತ್ತ ಬರುತ್ತಿದ್ದಾನೆ.
“ ನಿನ್ನ ಬಳಿ ಸೊಗಸಾದ ಕುದುರೆ ಇದೆಯಲ್ಲ, ಹುಡುಗ ! ” ಅವನೆಂದ. “ನಾನೊಬ್ಬ ರೋಗಿ
ಮುದುಕ. ಆದರೂ ನೀನೇನೂ ಓಟದಲ್ಲಿ ನನ್ನನ್ನು ಮಿಾರಿಸಲಾರೆ, ತಿಳಿ ! ”
“ ಇರಬಹುದು. ನಾನೇನೂ ಅಲ್ಲಗಳೆಯುವುದಿಲ್ಲ. ನಾನು ನಿಮ್ಮೊಂದಿಗೆ ಓಟವನ್ನೂ ಓಡುವು
ದಿಲ್ಲ ! ” ಇವಾನ್ ಹೇಳಿದ.
ಈ ಮಾತುಗಳು ಅವನ ಬಾಯಿಯಿಂದ ಹೊರ ಬಂದವೋ ಇಲ್ಲವೋ , ಆ ಕುಳ್ಳ ಮುದುಕ
ತನ್ನ ಮರದ ಕಾಲನ್ನು ಇವಾನ್ನ ರಿಕಾಪಿನೊಳಕ್ಕೆ ತೂರಿಸಿ, ಇವಾನ್ನ ತೋಳಿಗೆ ಒಂದು ಬಾಣ
ಚುಚ್ಚಿ ಅವನನ್ನು ಜೀನಿನಿಂದ ಬೀಳಿಸಿದ. ಆಮೇಲೆ ತಾನೇ ಕುದುರೆಯ ಬೆನ್ನಿನ ಮೇಲೆ ಹಾರಿ
ಕುಳಿತು ಮಿಂಚಿನ ವೇಗದಲ್ಲಿ ಹೊರಟು ಹೋದ. ಇದೆಲ್ಲ ಹೇಗೆ ಜರುಗಿತು ಅನ್ನುವುದು ಇವಾನ್
ನಿಗೆ ತಿಳಿಯುವ ಮುನ್ನವೇ ಎಲ್ಲ ಆಗಿ ಹೋಗಿತ್ತು . ಆ ಮುದುಕ ಬೇರೆ ಯಾರೂ ಆಗಿರಲಿಲ್ಲ -
ಡೇಗನ್ನ ತಂದೆ ರಾಜ ಹೆರೋದ್ನೇ ಆ ರೂಪದಲ್ಲಿ ಬಂದಿದ್ದ !
ಇವಾನ್ನಿಗೆಕೋಪದಿಂದ ಮೈ ಮರೆಯುವಂತಾಯಿತು.
“ ಆಗಲಿ , ಹಾಳಾದ ರಾಜ ಹೆರೊದ್ನೇ ! ನಾನಿದಕ್ಕಾಗಿ ನಿನ್ನನ್ನು ಎಂದೂ ಸುಮ್ಮನೆ ಬಿಡು
ವುದಿಲ್ಲ ! ” ಎಂದ ಅವನು , “ ತಾಳು, ನೀನು ಎಲ್ಲೇ ಇರು ನಿನ್ನನ್ನು ಹುಡುಕಿ ಹಿಡಿಯುತ್ತೇನೆ.
ಕಾಲು ನಡಿಗೆಯಲ್ಲಾದರೂ ಸರಿಯೆ ನಿನ್ನ ಬಳಿಗೆ ಬಂದೇ ಬರುತ್ತೇನೆ! ”
ತನ್ನ ಬಡಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಇವಾನ್ ಆ ಮುದುಕನನ್ನು ಹುಡುಕಿಕೊಂಡು
ಹೊರಟ. ತೋಳಿನಲ್ಲಾದ ಗಾಯ ಬೆಂಕಿಯಂತೆ ಸುಡುತ್ತಿತ್ತು . ಶಕ್ತಿಯ ಉಡುಗುತ್ತಿದ್ದಂತೆ
ಕಂಡುಬಂದಿತು .
“ ಈ ಹೆರೊದ್ನ ಬಾಣದ ತುದಿ ವಿಷ ಹಚ್ಚಿದುದಾಗಿರಬೇಕು ! ” ಎಂದವನು ತನ್ನಲ್ಲೇ
ಹೇಳಿಕೊಂಡ.
ಅವನು ಇನ್ನಷ್ಟು ದೂರ ನಡೆದು ಹೋದ, ಬಲವೆಲ್ಲ ಕುಗ್ಗುತ್ತಿರುವಂತೆ ಅವನಿಗೆ ಭಾಸ
ವಾಯಿತು.
“ ಈಗ ನಾನೆಂದೂ ಹೆರೊದ್ನನ್ನು ಸೋಲಿಸಲಾರೆ ” ಎಂದವನು ಹೇಳಿಕೊಂಡ. ಅವನು
ಕಿರುಬೆರಳಿನಿಂದ ನನ್ನ ಜೀವವನ್ನು ಹೊಸಕಿ ಹಾಕಬಲ್ಲ. ”
ಹೀಗೆ ಚಿಂತಿಸುತ್ತ ಇವಾನ್ ತಲೆ ತಗ್ಗಿಸಿಕೊಂಡು ನಡೆಯುತ್ತ ಹೋದ. ಮಾರ್ಗ ಮಧ್ಯ
ದಲ್ಲಿ ಅವನು ಒಬ್ಬ ಮುದುಕನನ್ನು ಸಂಧಿಸಿದ . ಅವನ ಗಡ್ಡ ಎಷ್ಟು ಉದ್ದವಾಗಿದ್ದಿತೆಂದರೆ ಅದು
ನೆಲಕ್ಕೆ ತಾಕುತ್ತಿತ್ತು . ಅವರು ಪರಸ್ಪರ ಕುಶಲ ಪ್ರಶ್ನೆ ಮಾಡಿದರು. ಇವಾನ್ ಎತ್ತ ಹೊರಟಿದ್ದು
ಎಂದು ತಿಳಿದ ಮುದುಕ ತಾನೂ ಅವನೊಟ್ಟಿಗೆ ಹೋಗುವುದಾಗಿ ಹೇಳಿದ.
“ನೀವು ಯಾರು ? ” ಇವಾನ್ ಕೇಳಿದ .
“ ನಾನೊಬ್ಬ ನಾಯಿ ಬೇಟೆಗಾರ, ಎಲ್ಲ ನಾಯಿಗಳೂ ನನಗೆ ಹೆದರುತ್ತವೆ” ಮುದುಕ ಹೇಳಿದ.
ಇವಾನ್ ಅವನು ಆಶ್ಚರ್ಯದಿಂದ ನೋಡಿದ . ಮೊದಲ ಮುದುಕ ನೀಡಿದ ಬುದ್ದಿವಾದ
ನೆನಪಿಗೆ ಬಂದು ಅವನು ಈ ಮುದುಕನನ್ನೂ ತನ್ನೊಂದಿಗೆ ಕರೆದೊಯ್ದ .
ಇಬ್ಬರೂ ಸ್ವಲ್ಪ ದೂರ ಹೋದರು . ಆಮೇಲೆ ಮತ್ತೊಬ್ಬ ಮುದುಕ ಇವರನ್ನು ಸೇರಿ
ಕೊಂಡ . ಅವನ ಹೆಸರು “ ಹಿಮಶೈತ್ಯ ” ಅಂತ .
- ಮೂವರೂ ಮುಂದೆ ಹೋದರು . ಅವರಿಗೆ ಇನ್ನೊಬ್ಬ ಮುದುಕ ಸಿಕ್ಕಿದ. ಇವರು ಎತ್ತ
ಹೊರಟಿದ್ದರೆಂಬುದನ್ನು ತಿಳಿದ ಅವನೂ ಇವರೊಂದಿಗೆ ಹೋಗುವುದಾಗಿ ತಿಳಿಸಿದ.
“ ನಾನು ಸಮುದ್ರವನ್ನು ತರಿದು ಹಾಕಬಲ್ಲೆ. ಅಲೆಗಳನ್ನೆಲ್ಲ ಒಂದುಗೂಡಿಸಿ ತೆನೆ ಕಟ್ಟಬಲ್ಲೆ.”
ಅವರು ನಾಲ್ವರೂ ಮುಂದೆ ಹೋದರು. ಅವರ ಜೊತೆಗೆ ಇನ್ನೂ ಐದು ಮಂದಿ ಮುದು
ಕರು ಸೇರಿಕೊಂಡರು . ಅವರಲ್ಲೊಬ್ಬ ಹೊಟ್ಟೆಬಾಕನಿದ್ದ . ಅವನಿಗೆ ಎಷ್ಟು ತಿಂದರೂ ಇನ್ನಷ್ಟು
ಬೇಕು ಅನಿಸುತ್ತಿತ್ತು . ಇನ್ನೊಬ್ಬ ತುಂಬ ಕುಡಿಯುತ್ತಿದ್ದ. ಎಷ್ಟು ಕುಡಿದರೂ ಅವನ ಹೊಟ್ಟೆ
ತುಂಬುತ್ತಲೇ ಇರಲಿಲ್ಲ. ಇನ್ನೊಬ್ಬ ಓಟಗಾರ. ಒಮ್ಮೆ ಓಡಲು ಹೊರಟರೆ ನಿಲ್ಲುತ್ತಲೇ ಇರಲಿಲ್ಲ .
ಏಳನೆಯವನ ಬಳಿ ಇಪ್ಪತ್ತು ವೆರ್ಸ್ಟ್ ಉದ್ದದ ಚಾಟಿ ಇದ್ದಿತು. ಎಂಟನೆಯವ ಇಪ್ಪತ್ತು ವೆರ್ಸ್ಟ್
ದೂರ ನೋಡಬಲ್ಲವನಿದ್ದ.
ಹೀಗೆ ಅವರೆಲ್ಲರೂ ಒಟ್ಟಿಗೇ ಹೋಗುತ್ತ ಹೆರೋದ್ನ ರಾಜ್ಯ ತಲುಪಿದರು. ಬೇಗನೆಯೇ
ಅದರ ಗಡಿ ದಾಟಿ ಒಳ ಹೋದರು .
ಅವರನ್ನು ಕಂಡು ಡೇಗನ್ ರಾಜ ಹೆರೋದ್ಗೆ ತುಂಬ ಆಶ್ಚರ್ಯವಾಯಿತು. ಏಕೆಂದರೆ
ಅದುವರೆವಿಗೂ ಹೊರಗಿನವರು ಯಾರೂ ಅವನ ರಾಜ್ಯದ ನೆಲ ತುಳಿಯುವುದು ಹಾಗಿರಲಿ
ಅದರ ಬಳಿ ಸುಳಿಯುವ ಸಾಹಸವನ್ನೂ ಮಾಡಿರಲಿಲ್ಲ. ಅವನು ತನ್ನ ಸೇವಕರನ್ನು ಕರೆದು ಇವಾನ್
ಹಾಗೂ ಅವನ ಮಿತ್ರರ ವಿರುದ್ದ ತನ್ನ ಏಳು ಸಾವಿರ ಇತ್ತಲೆ ನಾಯಿಗಳನ್ನು ಭೂಬಿಡುವಂತೆ
ಹೇಳಿದ . ಈ ನಾಯಿಗಳು ತಮ್ಮ ರೌದ್ರತೆಗೆ ಹೆಸರುವಾಸಿಯಾಗಿದ್ದವು. ಅವು ಕಾರ್ಮುಗಿಲಿನಂತೆ
ಇವರ ಮೇಲೆ ಎರಗಿ ಬಂದವು. ರೈತನ ಮಗ ಇವಾನ್ ಹೇಳಿದ:
“ ಏನು ಮಾಡುವುದು ? ಈ ನಾಯಿಗಳು ನಮ್ಮನ್ನು ಸಿಗಿದು ಹಾಕುವುದು ಖಂಡಿತ . ನಾನಂತೂ
ತುಂಬ ನಿಶ್ಯಕ್ತನಾಗಿದ್ದೇನೆ. ನನಗೆ ಚಲಿಸುವುದೂ ಕಷ್ಟವಾಗಿದೆ. ”
“ ಯಾಕೆ ಅಷ್ಟು ಯೋಚನೆ ಮಾಡುತ್ತೀಯ ? ನನಗೆ ಎಲ್ಲ ನಾಯಿಗಳೂ ಹೆದರುತ್ತವೆ ಅನ್ನು
ವುದನ್ನು ನೀನು ಮರೆತುಬಿಟ್ಟೆಯಾ? ” ಎಂದ ನಾಯಿ ಬೇಟೆಗಾರ ಮುದುಕ.
ಅವನು ಮುಂದೆ ಹೋಗಿ ಎಲ್ಲ ನಾಯಿಗಳನ್ನೂ ಕೊಂದು ಹಾಕಿದ.
ಈಗ ಇವಾನ್ ಮತ್ತು ಅವನ ಮಿತ್ರರು ಮುಂದೆ ಹೋಗಲು ಸ್ವತಂತ್ರರಾಗಿದ್ದರು . ಅವರು
ನೇರವಾಗಿ ಹೆರೋದ್ನ ಅರಮನೆಗೇ ಹೋದರು . ಅವರು ಕಬ್ಬಿಣದಿಂದ ಮಾಡಿದ್ದ, ಅತ್ಯಂತ
ದೊಡ್ಡದಾಗಿದ್ದ ಗೇಟುಗಳನ್ನು ತೆರೆದು ಅಂಗಳಕ್ಕೆ ಬಂದರು . ಅವರ ಹಿಂದೆ ಗೇಟುಗಳು ಮುಚ್ಚಿ
ಕೊಂಡವು. ಹೀಗೆ ಅವರು ಕಬ್ಬಿಣದ ಗೋಡೆಗಳ ಬೋನಿನಲ್ಲಿ ಸಿಕ್ಕಿಬಿದ್ದಂತಾದರು. ಬೋನಿಗೆ
ಬೆಂಕಿ ಹಚ್ಚಿ ಅವರನ್ನು ಜೀವಂತವಾಗಿ ಸುಟ್ಟು ಹಾಕುವಂತೆ ಹೆರೋದ್ ತನ್ನ ಸೇವಕರಿಗೆ ಆಜ್ಞಾ
ಪಿಸಿದ.
ಆದರೆ ಹಿಮಶೈತ್ಯ ” ಎಂದು ಕರೆದುಕೊಳ್ಳುತ್ತಿದ್ದ ಮುದುಕ ಗೋಡೆಗಳ ಮೇಲೆ ತಣ್ಣ
ಗಿನ ಗಾಳಿ ಊದಿದ. ಸೇವಕರು ಹೊರಗಡೆ ಗೋಡೆಗಳ ಸುತ್ತ ಕಟ್ಟಿಗೆಗಳನ್ನು ರಾಶಿರಾಶಿ ಹಾಕಿ
ಭಾರಿ ಬೆಂಕಿ ಹೊತ್ತಿಸಿದ್ದರೂ ಒಳಗಡೆ ಇವರು ಬಿಳಿಯ ಮಂಜುಮಬ್ಬಿನಿಂದ ಆವೃತರಾಗಿದ್ದರು .
- ಇದು ಹೀಗೆಂದು ಹೆರೊದ್ ಕನಸುಮನಸಿನಲ್ಲೂ ಎಣಿಸಿರಲಿಲ್ಲ. ಕಟ್ಟಿಗೆಯೆಲ್ಲ
ಉರಿದು ಬೂದಿಯಾದ ಮೇಲೆ ಅವನು ತನ್ನ ಸೇವಕರಿಗೆ ಹೇಳಿದ :
“ಈಗ ಗೇಟುಗಳನ್ನು ತೆರೆದು ನನ್ನ ಶತ್ರು ರೈತನ ಮಗ ಇವಾನ್ನ ಬೂದಿಯನ್ನು ಹೊರಕ್ಕೆ
ಗುಡಿಸಿ ಹಾಕಿ.”
ಗೇಟುಗಳನ್ನು ತೆರೆದು ನೋಡುತ್ತಾರೆ - ಒಳಗೆ ಎಲ್ಲ ಜೀವಂತವಾಗಿಯೇ ಇದ್ದಾರೆ !
“ ಏನು , ರಾಜ , ನಿನಗೆ ಸ್ವಲ್ಪವೂ ಕರುಣೆಯೇ ಇಲ್ಲವಲ್ಲ. ಎಷ್ಟು ತಣ್ಣಗಿನ ಗುಡಿಸಿಲಿನಲ್ಲಿ
ನಮ್ಮನ್ನು ಕೂಡಿ ಹಾಕಿದ್ದೀಯ . ನಾವು ಸೆಡೆತುಕೊಂಡು ಸಾಯಲಿದ್ದೆವು! ”
“ ಎಲ್ಲ ಒಂದೇ . ನೀನಂತೂ ಈಗ ಸಾಯಲಿದ್ದೀಯ ” ಎಂದ ಹೆರೋದ್. “ಈಗ ನಾನೇ
- ನೇರವಾಗಿ ನಿಮ್ಮೆಲ್ಲರ ತಲೆಗಳನ್ನೂ ತುಂಡರಿಸುತ್ತೇನೆ. ನಿನಗೆ ಚುಚ್ಚಿದ ಬಾಣದ ತುದಿಗೆ ನಾನು
ವಿಷ ಲೇಪಿಸಿದ್ದೆ . ಅದು ನಿನ್ನ ಶಕ್ತಿಯನ್ನೆಲ್ಲ ನಾಶಮಾಡಿ ಬಿಟ್ಟಿದೆ. ಈಗ ನೀನೇನೂ ಮಾಡಲಾರೆ.”
ಆಮೇಲೆ ಅವನು ತನ್ನೊಳಗೇ ಹೇಳಿಕೊಂಡ : “ ಇವನನ್ನು ನಾನು ಯಾವಾಗಲೇ ಆಗಲಿ ಕೊಲ್ಲ
ಬಹುದು. ಅದಕ್ಕೆ ಮುಂಚೆ ಸ್ವಲ್ಪ ವಿನೋದವನ್ನೇಕೆ ಮಾಡಬಾರದು ? ”
ಹಾಗೆಂದುಕೊಂಡು ಅವನು ಗಟ್ಟಿಯಾಗಿ ಹೇಳಿದ : “ ನಾನು ಈಗ ನಿನಗೂ ನಿನ್ನ ಜನರಿಗೂ
ಒಂದು ಕೆಲಸ ಕೊಡುತ್ತೇನೆ. ನೀನು ಅದನ್ನು ಮಾಡಿದರೆ ಸ್ವತಂತ್ರನಾಗುವೆ. ಇಲ್ಲದಿದ್ದರೆ ನಾನು
ನಿನ್ನ ತಲೆಯನ್ನು ಕಡಿದು ಹಾಕುತ್ತೇನೆ. ಇದು ಆ ಕೆಲಸ: ನೀನು ಸಮುದ್ರವನ್ನೆಲ್ಲ ತರಿದು ಹಾಕಿ
ಅದರ ಅಲೆಗಳನ್ನು ತೆನೆಗಳಾಗಿ ಒಂದುಗೂಡಿಸಬೇಕು. ಎಲ್ಲವನ್ನೂ ಒಂದೇ ರಾತ್ರಿಯಲ್ಲಿ ಮಾಡಿ
ಮುಗಿಸಬೇಕು ! ”
ಹೀಗೆ ಹೇಳಿ ಹೆರೋದ್ ಮಲಗಲು ಹೋದ. ಕೂಡಲೇ ಸಮುದ್ರವನ್ನು ತರಿದು ಹಾಕಬಲ್ಲ
ಮುದುಕ ಕಾರ್ಯವಾಸಿಯಾದ. ಬೆಳಗಿನ ಹೊತ್ತಿಗೆ ಸಮುದ್ರವನ್ನೆಲ್ಲ ತರಿದು ಹಾಕಲಾಗಿತ್ತು ,
ಅಲೆಗಳನ್ನು ತೆನೆಗಳನ್ನಾಗಿ ಕಟ್ಟಲಾಗಿತ್ತು . ಹೆರೋದ್ ಬೆಳಿಗ್ಗೆ ಎದ್ದು ನೋಡುತ್ತಾನೆ - ಸಮುದ್ರ
ಇದ್ದ ಕಡೆ ಒಂದು ಹನಿ ನೀರಿಲ್ಲ ! ಅವನಿಗೆ ಭಾರಿ ಆಶ್ಚರ್ಯವಾಯಿತು. ಅವನು ಹೇಳಿದ:
“ ಇಷ್ಟಕ್ಕೆ ಮುಗಿಯಿತು ಅಂದುಕೊಳ್ಳಬೇಡ. ಇನ್ನೊಂದು ಕೆಲಸ ಕೊಡುತ್ತೇನೆ. ನನ್ನ ಬಳಿ
ಭಾರಿ ದನದ ಮುಂದೆ ಇದೆ. ಅವುಗಳನ್ನೆಲ್ಲ ಕೊಂದು ಅವುಗಳ ಮಾಂಸವನ್ನು ಬೇಯಿಸುವಂತೆ
ನನ್ನ ಸೇವಕರಿಗೆ ಹೇಳುತ್ತೇನೆ. ನೀವು ಆ ಮಾಂಸವನ್ನೆಲ್ಲ ತಿಂದು ಮುಗಿಸಬೇಕು. ಹಾಗೆ ಮಾಡಿ
ದರೆ ನೀವು ಸ್ವತಂತ್ರ . ಇಲ್ಲದಿದ್ದರೆ ನಿಮ್ಮ ತಲೆಗಳು ಉರುಳುತ್ತವೆ !”
ಇದನ್ನು ಕೇಳಿ ರೈತನ ಮಗ ಇವಾನ್ ಯೋಚನೆ ಮಾಡುತ್ತ ನಿಂತ.
“ ನಾನು ಇಷ್ಟು ನಿಶ್ಯಕ್ತನಾಗಿರದಿದ್ದರೆ ನಮ್ಮನ್ನು ನಗೆಗೀಡು ಮಾಡಿದರೆ ಏನಾಗುತ್ತೆ ಅನ್ನು
ವುದನ್ನು ಅವನಿಗೆ ತೋರಿಸುತ್ತಿದ್ದೆ ! ”
ಡೇಗನ್ ರಾಜ ಹೆರೋದ್ನ ಬಳಿ ಅನೇಕ ಮಂದಿ ಸ್ತ್ರೀಯರೂ ಪುರುಷರೂ ಬಂದಿ
ಗಳಾಗಿದ್ದರು . ಅವರಲ್ಲಿ ಒಬ್ಬ ಚೆಲುವಾದ ಯುವತಿ ಇದ್ದಳು . ಅವಳಿಗೆ ಗಿಡಗಳ ಹಾಗೂ ಮೂಲಿಕೆ
ಗಳ ಗುಣಕಾರಕ ವಿಷಯಗಳೆಲ್ಲ ಚೆನ್ನಾಗಿ ತಿಳಿದಿದ್ದವು. ಅವಳು ಇವಾನ್ನನ್ನು ಗುಣಪಡಿಸುವ
ಕಾರ್ಯ ಕೈಕೊಂಡಳು. ಆದರೆ ಅವಳು ಈ ಕಾರ್ಯ ಪೂರೈಸುವ ಮುನ್ನವೇ ರಾಜ ಹೆರೋದ್
ಸಾವಿರಾರು ಪೀಪಾಯಿಗಳಲ್ಲಿ ಮದ್ಯವನ್ನೂ ಭಾರಿ ಪಾತ್ರೆಗಳಲ್ಲಿ ಬೇಯಿಸಿದ ಮಾಂಸವನ್ನೂ ಅಂಗಳ
ದಲ್ಲಿ ಆಗಲೇ ತಂದು ಇರಿಸಿದ .
ಇವಾನ್ನೂ ಅವನ ಮಿತ್ರರೂ ಮೇಜಿನ ಮುಂದೆ ಕುಳಿತು ತಿನ್ನ ತೊಡಗಿದರು. ಆದರೆ
ಒಂದು ದನದ ಬೇಯಿಸಿದ ಮಾಂಸವೇ ಅವರಿಗೆಲ್ಲ ಸಾಕು ಬೇಕಾದಷ್ಟಾಯಿತು. ಹೆಚ್ಚಿಗೆ ತಿನ್ನಲು
ಅವರಿಗೆ ಆಗದಾಯಿತು. ಅವರು ದುಃಖಭರಿತರಾಗಿ ತಲೆ ತಗ್ಗಿಸಿ ಕುಳಿತರು .
“ನಾವು ಮೂರು ವರ್ಷ ಕೂತು ತಿಂದರೂ ಈ ಎಲ್ಲ ಮಾಂಸವನ್ನೂ ತಿಂದು ಮುಗಿಸ
ಲಾರೆವು! ” ಎಂದ ಇವಾನ್ ,
ಆಗ ಅವರಿಗೆ ಒಂದು ವಿಷಯ ಜ್ಞಾಪಕಕ್ಕೆ ಬಂದಿತು . ಅವರಲ್ಲಿ ಇಬ್ಬರು ಇನ್ನೂ ಅವರ
ಜೊತೆಊಟಕ್ಕೆ ಕುಳಿತಿರಲಿಲ್ಲ.ಹೊಟ್ಟೆಬಾಕ ಹಾಗೂ ಎಷ್ಟು ಕುಡಿದರೂ ಬಾಯಾರಿಕೆ ಹಿಂಗದವ –
ಇವರೇ ಆ ಇಬ್ಬರಾಗಿದ್ದರು . ಅವರಿಬ್ಬರೂ ಬಂದು ಕುಳಿತುದೇ ತಡ ಮಾಂಸದ ಪಾತ್ರೆಗಳೆಲ್ಲ
ಖಾಲಿಯಾದವು, ಮದ್ಯದ ಪೀಪಾಯಿಗಳೆಲ್ಲ ಖಾಲಿಯಾದವು. ಆದರೂ ಅವರಿಗೆ ತೃಪ್ತಿಯಾಗಲಿಲ್ಲ.
ಅವರು ಇನ್ನಷ್ಟು ತಿನ್ನಲು ಇನ್ನಷ್ಟು ಕುಡಿಯಲು ಸಿದ್ಧವಾಗಿದ್ದರು.
ಇವಾನ್ನೂ ಅವನ ಮಿತ್ರರೂ ಮಾಡಲಾಗದ ಕಾರ್ಯ ಯಾವುದೂ ಇರಲಿಲ್ಲ ಎಂದು
ಹೆರೋದ್ ಕಂಡುಕೊಂಡ . ನೇರವಾಗಿ ಅವರನ್ನು ಕೊಲ್ಲುವುದೇ ಯುಕ್ತವೆಂದು ನಿರ್ಧರಿಸಿದ.
ಆದರೂ ಇನ್ನಷ್ಟು ತಮಾಷೆ ಮಾಡೋಣವೆಂದು ಅವನಿಗೆ ಮನಸ್ಸಾಯಿತು.
“ ನಾನು ನಿಮಗೆ ಇನ್ನೊಂದು ಕೆಲಸಕೊಡುತ್ತೇನೆ” ಅವನೆಂದ. “ ನಾಳೆ ಬೆಳಿಗ್ಗೆ ನೀವುಸಮುದ್ರ
ತೀರಕ್ಕೆ ಹೋಗಿ ನನಗೆ ಸ್ವಲ್ಪ ನೀರು ತಂದು ಕೊಡಬೇಕು. ನನ್ನ ಶೀಘ್ರಗಾಮಿ ಮಗಳಿಗಿಂತ ಬೇಗ
ತಂದು ಕೊಟ್ಟರೆ ನೀವು ಬದುಕಿಕೊಳ್ಳುತ್ತೀರ. ಇಲ್ಲದಿದ್ದರೆ ಸಾಯುತ್ತೀರ! ”
ಇಡೀ ಕಾಲ ರೈತನ ಮಗ ಇಮಾನ್ ತನ್ನ ಗಾಯ ಬೇಗ ವಾಸಿಯಾಗಬಾರದೆ , ತಾನು ಆಗ
ಈ ನೀಚ ಹೆರೋದ್ನನ್ನು ಕೊಂದು ಹಾಕಲು ಸಾಧ್ಯವಾಗಬಹುದು ಎಂದೇ ಯೋಚಿಸುತ್ತಿದ್ದ.
ಅವನ ಮನಸ್ಸಿನಲ್ಲಿದ್ದುದನ್ನು ತಿಳಿದು ಹೆರೊದ್ನ ಬಂದಿಯಾಗಿದ್ದ ಆ ಸುಂದರ ಯುವತಿ ಅವನಿಗೆ
ಹೇಳಿದಳು :
“ ಖಿನ್ನನಾಗಬೇಡ, ಇವಾನ್ , ನೀನು ಬೇಗನೆಯೇ ಗುಣವಾಗುವೆ.”
ರಾತ್ರಿ ಕಳೆಯಿತು, ಹಗಲಾಯಿತು. ಡೇಗನ್ ರಾಜ ಹೆರೋದ್ನ ಮಗಳು ಶೀಘ್ರಗಾಮಿ
ತನ್ನ ಏಳು ಗಾವುದ ಉದ್ದದ ಬೂಟುಗಳನ್ನು ತೊಟ್ಟಳು , ಅಂತರ್ಧಾನ ಟೋಪಿ ತೊಟ್ಟಳು,
ಒಂದೇ ಓಟದಲ್ಲಿ ಸಮುದ್ರ ತೀರಕ್ಕೆ ಹೋದಳು . ಇವಾನ್ ಮತ್ತವನ ಗೆಳೆಯರು ನೀರನ್ನು
ತರಲು ಯಾರನ್ನು ಕಳುಹಿಸಲು ಸಾಧ್ಯ ಎಂದು ಯೋಚಿಸುತ್ತ ಕುಳಿತರು . ಆಗ ತಮ್ಮಿ ಬ್ಬ
ಓಟಗಾರನಿದ್ದನೆಂಬುದನ್ನು ಒಬ್ಬ ನೆನಪಿಸಿಕೊಂಡ. ಅವರು ಅವನನ್ನು ಕರೆದರು . ಅವನು ಒಮ್ಮೆಗೇ
ಹಾರಿ ಕುಳಿತು ಸಮುದ್ರ ತೀರಕ್ಕೆ ಓಡಿದ . ಅವನು ಅಲ್ಲಿಗೆ ಹೋಗಿ ಒಂದು ಬಕೆಟ್ ನೀರು ತುಂಬಿ
ಕೊಂಡು ಹೆರೋದ್ನ ಮಗಳು ಶೀಘ್ರಗಾಮಿ ಬರುವುದಕ್ಕೆ ತುಂಬ ಮುನ್ನವೇ ಹಿಂದಿರುಗಿ
ಮನೆಗೆ ಓಡಿ ಬರುತ್ತಿದ್ದ. ಅದನ್ನು ಕಂಡ ಶೀಘ್ರಗಾಮಿ ಒಂದು ಹಂಚಿಕೆ ಹೂಡಿದಳು . ಅವಳು ಅವನ
ಪಾದಗಳ ಕೆಳಗೆ ಒಂದು ಹಿಡಿ ನಿದ್ರೆ ಬರಿಸುವ ಪುಡಿ ಚೆಲ್ಲಿದಳು, ಆ ಓಟಗಾರಕೂಡಲೇ ನೆಲದ
ಮೇಲೆ ಬಿದ್ದು ಗಾಢ ನಿದ್ರೆಯಲ್ಲಿ ಮುಳುಗಿದ.
ಇವಾನ್ನೂ ಅವನ ಮಿತ್ರರೂ ಶೀಘ್ರಗಾಮಿಯೇ ಮೊದಲು ಓಡಿ ಬರುತ್ತಿದ್ದುದನ್ನು
ಕಂಡು ಸ್ತಂಭೀಭೂತರಾದರು . ತಮ್ಮ ಓಟಗಾರ ಮುದುಕ ಎಲ್ಲೂ ಕಾಣಬರಲೇ ಇಲ್ಲ. ಆದರೆ
ದೂರದೃಷ್ಟಿಯ ಮುದುಕ ದೂರಕ್ಕೆ ದೃಷ್ಟಿ ಹರಿಸಿ ಓಟಗಾರ ಮಾರ್ಗ ಮಧ್ಯದಲ್ಲೇ ಮಲಗಿದ್ದು
ದನ್ನು ಕಂಡುಕೊಂಡು ವಿಷಯ ತಿಳಿಸಿದ. ಆಗ ಉದ್ದ ಚಾಟಿಯವ ತನ್ನ ಚಾಟಿಯಿಂದ ಓಟಗಾರ
ಮುದುಕನಿಗೆ ಪೆಟ್ಟುಕೊಟ್ಟ. ಅವನು ತಕ್ಷಣ ಎದ್ದವನೇ ನೀರು ತುಂಬಿದ ಬಕೆಟ್ ಎತ್ತಿಕೊಂಡು
ಶೀಘ್ರಗಾಮಿ ಬರುವುದಕ್ಕೆ ತುಂಬ ಮುನ್ನವೇ ಮನೆ ತಲುಪಿದ್ದ .
ಇವಾನ್ ಮತ್ತು ಅವನ ಮಿತ್ರರು ಮಾಡಲಾಗದೆ ಇರುವ ಕೆಲಸ ಯಾವುದೂ ಇಲ್ಲವೆಂಬು
ದನ್ನು ಕಂಡುಕೊಂಡ ಹೆರೋದ್ ತನ್ನ ಖಡ್ಗವನ್ನು ಒರೆಯಿಂದ ಹಿಡಿದು ಇವಾನ್ನನ್ನೂ ಅವನ
ಮಿತ್ರರನ್ನೂ ಕಬ್ಬಿಣದ ಕಣಕ್ಕೆ ಕರೆದೊಯ್ಯುವಂತೆ ತನ್ನ ಸೇವಕರಿಗೆ ಆಜ್ಞಾಪಿಸಿದ. ಆದರೆ ಅವರನ್ನು
ಕರೆದೊಯುತ್ತಿದ್ದಂತೆ ಇವಾನ್ನಿಗೆ ರೋಗೋಪಚಾರ ನೀಡುತ್ತಿದ್ದ ಆ ಸುಂದರ ಯುವತಿ
ಇವಾನ್ನ ಗಾಯ ಮಾಯಿತೆಂದು ಅವನಿಗೆ ಪಿಸುಮಾತಿನಲ್ಲಿ ಹೇಳಿದಳು . ಡೇಗನ್ ರಾಜ ಹೆರೋದ್
ಅವನ ತಲೆ ಕತ್ತರಿಸಿ ಹಾಕಲು ಬಂದಾಗ ಇವಾನ್ ಅವನನ್ನು ಬಲವಾಗಿ ಹಿಡಿದು ಎತ್ತಿ ಅರಮ
ನೆಯ ಗೋಪುರದ ಚೂಪಾದ ತುದಿಯ ಮೇಲಕ್ಕೆ ಎಸೆದ. ಚೂಪು ತುದಿ ಹೆರೋದ್ನ ಹೃದ
ಯಕ್ಕೆ ನಾಟಿತು . ಅವನು ತಕ್ಷಣವೇ ಸತ್ಯ
ಅನಂತರ ಇವಾನ್ ತನ್ನಿಂದ ಹೆರೋದ್ಕಸಿದುಕೊಂಡಿದ್ದ ಮಾಂತ್ರಿಕ ಕುದುರೆಯನ್ನು ತೆಗೆದು
ಕೊಂಡು ತನ್ನ ಸ್ವಂತ ರಾಜ್ಯದ ಕಡೆಗೆ ಹೊರಟ. ಅವನ ಗಾಯವನ್ನು ಗುಣಪಡಿಸಿ ಅವನ ಪ್ರಾಣ
ರಕ್ಷಿಸಿದ್ದ ಸುಂದರ ಯುವತಿಯ ಅವನ ಜೊತೆ ಹೊರಟಳು . ತನಗೆ ಸಹಾಯ ಮಾಡಿದ್ದ ಆ
ವೃದ್ದರೂ ತನ್ನ ಜೊತೆ ಬರಬೇಕೆಂದು ಇವಾನ್ ಬಯಸಿದ್ದ. ಆದರೆ ಅವರು ಹೇಳಿದರು :
“ನಿನಗೆ ಅವಶ್ಯವಿದ್ದಾಗ ಸಹಾಯ ಮಾಡಲೆಂದು ಬಂದೆವು, ಇವಾನ್ , ಈಗ ನಿನಗೆ ನಮ್ಮ
ಸಹಾಯದ ಅವಶ್ಯವಿಲ್ಲ . ನಾವೀಗ ಇತರ ಸಜ್ಜನರಿಗೆ ಸಹಾಯವಾಗಲು ಹೋಗುತ್ತೇವೆ. ”
ಅವರು ಇವಾನ್ನನ್ನು ಆಲಂಗಿಸಿಕೊಂಡು ಅವನಿಗೆ ಒಳ್ಳೆಯದಾಗಲೆಂದು ಹರಸಿ ತಮ್ಮ ದಾರಿ
ಹಿಡಿದು ಹೊರಟರು .
ಇವಾನ್ನು ಯುವತಿಯೊಂದಿಗೆ ತನ್ನ ಮನೆಗೆ ಹಿಂದಿರುಗಿದ. ಕೂಡಲೇ ರಾಜನ ಬಳಿಗೆ
ಆ ಬೆಂಕಿ ತಿನ್ನುವ, ಉರಿ ಕುಡಿಯುವ ಮಾಂತ್ರಿಕ ಕುದುರೆಯನ್ನು ಕೊಂಡೊಯ್ದ . ಆದರೆ
ಇವಾನ್ನ ಜೊತೆಗೆ ಹೋಗಿರೆಂದು ರಾಜ ಕಳುಹಿಸಿದ್ದ ಆ ಇಬ್ಬರು ಯೋಧರು ಇವಾನ್
ತನ್ನೊಂದಿಗೆ ಕರೆತಂದಿದ್ದ ಸುಂದರ ಯುವತಿಯನ್ನು ಕಂಡು ಇವಾನ್ನ ಹಿಂದೆಯೇ ಅರಮನೆಗೆ
ಧಾವಿಸಿದರು . ಅಲ್ಲಿ ರಾಜನ ಮುಂದೆ ಬಿನ್ನವಿಸಿಕೊಂಡರು :
- “ನೋಡಿ, ಮಹಾಪ್ರಭು ! ಇವಾನ್ ಕೇವಲ ಒಬ್ಬ ರೈತನ ಮಗ, ಅವನು ಒಬ್ಬ ಸುಂದರ
ಯುವತಿಯನ್ನು ಮದುವೆಯಾಗುವುದು ತರವೇ ? ಕುಲೀನ ರಕ್ತದವರಷ್ಟೆ ಅಂಥ ಸುಂದರಿಯನ್ನು
ಮದುವೆಯಾಗಲು ತಕ್ಕವರು . ”
ಈ ಮಾತನ್ನು ಕೇಳಿ ಇವಾನ್ ವಿವರ್ಣನಾದ .
“ ನಾನು ಆ ಯುವತಿಯನ್ನು ಬಂಧನದಿಂದ ಬಿಡಿಸಿದ್ದೇನೆ. ನಾವು ಪರಸ್ಪರ ಪ್ರೇಮಿಸುತ್ತೇವೆ.
ನಾನೆಂದಿಗೂ ಯಾರಿಗೂ ಅವಳನ್ನು ಬಿಟ್ಟು ಕೊಡುವುದಿಲ್ಲ ! ” ಅವನೆಂದ.
“ ನಾನು ಹೇಳಿದರೆ ಬಿಟ್ಟು ಕೊಡಲೇ ಬೇಕು !” ರಾಜ ಹೇಳಿದ .
ಇವಾನ್ಗೆ ತುಂಬ ಕೋಪ ಬಂದಿತು . ಅವನು ಹೇಳಿದ:
“ ಏನು , ರಾಜ , ನಾನು ಏನು ಕೇಳಿದರೂ ಬಳುವಳಿಯಾಗಿ ಕೊಡುವೆ ಅಂತ ಮಾತು ಕೊಟ್ಟಿ
ದ್ದೆಯಲ್ಲ, ಅದು ಮರೆತು ಹೋಯಿತೆ? ಅಲ್ಲದೆ ನನಗೆ ಮಾತಿನಲ್ಲಾಗಲೀ ಕೃತಿಯಲ್ಲಾಗಲೀ
ಹಾನಿ ಮಾಡುವುದಿಲ್ಲ ಅಂತಲೂ ಆಶ್ವಾಸನೆ ನೀಡಿದ್ದೆ. ನಾನು ಮೂರು ಡೇಗನ್ಗಳನ್ನೂ ಅವು
ಗಳ ಇಡೀ ಕುಟುಂಬವನ್ನೂ ಸಂಹರಿಸಿ ಬಂದಿದ್ದೇನೆ. ನೀನು ಈಗ ಕೊಟ್ಟ ಮಾತನ್ನು ಪಾಲಿಸದೆ
ಹೋದರೆ ನಿನ್ನನ್ನೂ ನಿನಗೆ ಪ್ರೀತಿಪಾತ್ರರಾದವರೆಲ್ಲರನ್ನೂ ಈ ಬಡಿಗೆಯ ಒಂದೇ ಏಟಿನಿಂದ
ಕೊಲ್ಲಬಲ್ಲೆ ! ”
ಅವನು ತನ್ನ ಬಡಿಗೆಯನ್ನು ಗಾಳಿಯಲ್ಲಿ ಬೀಸಿದ. ಅದರ ಪ್ರಭಾವಕ್ಕೆ ಸುತ್ತಮುತ್ತ ಇದ್ದ
ಗಿಡಮರಗಳೆಲ್ಲ ನೆಲದ ವರೆಗೂ ಬಾಗಿದವು. ರಾಜನ ಅರಮನೆಯ ತೂರಾಡಿತು , ಕಂಪಿಸಿತು .
ರಾಜ ತುಂಬ ಹೆದರಿದ, ಹೆಚ್ಚಿಗೆ ಒಂದು ಮಾತನ್ನೂ ಆಡಲಿಲ್ಲ. ರೈತನ ಮಗ ಇವಾನ್
ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗಿ ಸುಖ ಸಂತೋಷಗಳಿಂದ ಬಾಳ ತೊಡಗಿದ.
ಅವನು ಅನಂತರ ರಾಜನ ಅಥವಾ ಕುಲೀನರ ಮಾತನ್ನು ಎಂದಿಗೂ ನಂಬಲಿಲ್ಲ.