ಸಾಕು ತಂದೆ
Posted in ಓದಿ ಕಲಿ | 0 comments
ಒಮ್ಮೆ ಮೂವರು ಸೋದರರು ವಾಸಿಸುತ್ತಿದ್ದರು. ಅವರು ತಮ್ಮ ತಂದೆತಾಯಿಯರನ್ನು
ಎಳೆಯ ವಯಸ್ಸಿನಲ್ಲೇ ಕಳೆದುಕೊಂಡಿದ್ದರು. ಮನೆ ಇಲ್ಲ, ಮಠ ಇಲ್ಲ, ಹೊಲ ಇಲ್ಲ, ಬೆಳೆ ಇಲ್ಲ.
ಅನಾಥರಾಗಿದ್ದ ಅವರು ಒಂದು ದಿನ ಕೆಲಸ ಹುಡುಕಿಕೊಂಡು ಹೊರಟರು. ಹೋಗುತ್ತ ಯೋಚಿ
ಸುತ್ತಾರೆ: “ ಅಯೊ , ಯಾರಾದರೂ ಒಳ್ಳೆಯ ಒಡೆಯ ಸಿಕ್ಕಿದರೆ ಎಷ್ಟು ಚೆನ್ನಾಗಿರುತ್ತೆ !
ಕೆಲಸ ಮಾಡಿಕೊಂಡು ಹೊಟ್ಟೆ ಹೊರೆದುಕೊಳ್ಳಬಹುದು !” ನೋಡುತ್ತಾರೆ - ಒಬ್ಬ ಮುದುಕ
ಬರುತ್ತಿದ್ದಾನೆ. ಹಣ್ಣು ಹಣ್ಣು ಮುದುಕ . ಬಿಳಿ ಗಡ್ಡ ಮಂಡಿಯವರೆಗೂ ಇಳಿಬಿದ್ದಿದೆ. ಈ ಮುದುಕ
ಮೂವರು ಸೋದರರನ್ನೂ ನಿಲ್ಲಿಸಿ ಕೇಳಿದ :
“ ಎಲ್ಲಿಗೆ ಹೊರಟಿರಿ, ಮಕ್ಕಳೇ ? ”
ಅವರು ಉತ್ತರಿಸಿದರು :
“ಕೆಲಸ ಹುಡುಕಿಕೊಂಡು ಹೊರಟಿದ್ದೇವೆ. ”
“ ಯಾಕೆ ನಿಮ್ಮ ಬಳಿ ಹೋಲ- ಕಾಣಿ ಏನೂ ಇಲ್ಲವೇ ? ”
“ ಇಲ್ಲ ” ಅವರೆಂದರು . “ ಯಾರಾದರೂ ಒಳ್ಳೆಯ ಒಡೆಯ ಸಿಕ್ಕಿದರೆ ನಾವು ಅವನಿಗೆ
ಶ್ರದ್ದೆಯಿಂದ ಸೇವೆ ಸಲ್ಲಿಸುತ್ತೇವೆ, ಅವನನ್ನು ನಮ್ಮ ಸ್ವಂತ ತಂದೆಯೆಂದೇ ಕಂಡುಕೊಳ್ಳುತ್ತೇವೆ.”
ಮುದುಕ ಸ್ವಲ್ಪ ಹೊತ್ತು ಯೋಚಿಸಿ ಹೇಳಿದ:
“ ಹಾಗಾದರೆ, ನೀವು ನನಗೆ ಮಕ್ಕಳಾಗಿ, ನಾನು ನಿಮಗೆ ತಂದೆಯಾಗುತ್ತೇನೆ. ಆಗಬಹುದೆ ?
ನಾನು ನಿಮ್ಮನ್ನು ದೊಡ್ಡವರನ್ನಾಗಿ ಬೆಳೆಸುತ್ತೇನೆ. ಪ್ರಾಮಾಣಿಕ ಜೀವನ ನಡೆಸುವುದನ್ನು , ಅಂತ
ರಂಗ ಶುದ್ದಿಯಿಂದ ಬಾಳಿ ಬದುಕುವುದನ್ನು ಹೇಳಿಕೊಡುತ್ತೇನೆ. ಆದರೆ ನೀವು ನಾನು ಹೇಳಿದ
ಹಾಗೆ ಕೇಳಬೇಕಷ್ಟೆ . ”
ಸೋದರರು ಒಪ್ಪಿಕೊಂಡು ಆ ಮುದುಕನ ಹಿಂದೆ ಹೊರಟರು . ಅವರು ದಟ್ಟವಾದ ಕಾಡು
ಗಳನ್ನೂ ಅಗಲವಾದ ಹೊಲಗದ್ದೆಗಳನ್ನೂ ದಾಟಿಕೊಂಡು ಹೋದರು. ಹೋಗುತ್ತಾರೆ, ಹೋಗು
ತಾರೆ. ನೋಡುತ್ತಾರೆ - ಒಂದು ಮನೆ ಕಂಡುಬರುತ್ತೆ , ಎಂಥ ಅಚ್ಚುಕಟ್ಟಾದ, ಗಾಳಿ ಬೆಳಕಿನಿಂದ
ಕೂಡಿದ ಮನೆ ! ಸುತ್ತ ಸುಂದರವಾದ ತೋಟ, ತೋಟದ ತುಂಬ ಘಮಘಮಿಸುವ ಬಣ್ಣ ಬಣ್ಣದ
ಹೂಗಳು . ಪಕ್ಕದಲ್ಲೇ ಚೆರಿ ಹಣ್ಣಿನತೋಟ. ಆ ತೋಟದಲ್ಲಿ ಒಬ್ಬ ಹುಡುಗಿ - ಆ ಹೂಗಳಂತೆಯೇ
ಸುಂದರಳಾದ, ಉಲ್ಲಾಸಯುತಳಾದ , ಕಂಗೊಳಿಸುವ ಹುಡುಗಿ. ಅವಳನ್ನು ಕಂಡೊಡನೇ ಹಿರಿಯ
ಸೋದರ ಹೇಳಿದ:
- “ ಈ ಹುಡುಗಿ ನನ್ನ ಹೆಂಡತಿಯಾದರೆ ಎಷ್ಟು ಚೆನ್ನ ! ಸ್ವಂತ ಹೊಲ, ಹೆಚ್ಚಿನ ಸಂಖ್ಯೆಯಲ್ಲಿ
ಸ್ವಂತ ದನಕರು ಇದ್ದರೆ ಎಷ್ಟು ಚೆನ್ನ ! ”
ಮುದುಕ ಅವನಿಗೆ ಹೇಳಿದ :
“ ಅದಕ್ಕೇನಂತೆ, ಹೋಗಿ ಕೇಳೋಣ. ನಿನಗೆ ಹೆಂಡತಿ , ಹೊಲ, ದನಕರುಗಳು ಎಲ್ಲ
ಸಿಕ್ಕಂತಾಗುತ್ತೆ . ಸಂತೋಷದಿಂದ ಜೀವಿಸಿಕೊಂಡಿರುವಂತೆ. ಆದರೆ ಜೀವನದಲ್ಲಿ ಋಜು
ಮಾರ್ಗವನ್ನು ಮಾತ್ರ ಮರೆಯಬೇಡ. ”
ಅವರು ಹೋದರು . ಕೇಳಿದರು , ಒಪ್ಪಿಗೆಯಾಯಿತು. ಸಂಭ್ರಮದ ಮದುವೆಯ ನಡೆ
ಯಿತು. ಹಿರಿಯ ಸೋದರ ಒಡೆಯನಾಗಿ ತನ್ನ ಎಳೆಯ ಹೆಂಡತಿಯೊಂದಿಗೆ ಆ ಮನೆಯಲ್ಲೇ
ಉಳಿದ.
ಮುದುಕನೂ ಇನ್ನಿಬ್ಬರು ಸೋದರರೂ ಮುಂದೆ ನಡೆದರು . ದಟ್ಟವಾದ ಕಾಡುಗಳನ್ನೂ
ಅಗಲವಾದ ಹೊಲಗಳನ್ನೂ ದಾಟಿಕೊಂಡು ಹೋದರು. ಹೋಗುತ್ತಾರೆ, ಹೋಗುತ್ತಾರೆ.
ನೋಡುತ್ತಾರೆ - ಒಂದು ಮನೆ ಕಂಡುಬರುತ್ತೆ . ಚೆನ್ನಾದ, ಬೆಳಕಿನಿಂದಕೂಡಿದ ಮನೆ. ಮನೆಯ
ಪಕ್ಕದಲ್ಲಿ ಒಂದು ಕೊಳ, ಕೊಳದ ಬಳಿಯೇ ಒಂದು ಮಿಲ್ , ಮನೆಯ ಸಾಪದಲ್ಲಿ ಚೆಲುವೆ
ಯಾದ ಒಬ್ಬ ಹುಡುಗಿ ಏನೋ ಕೆಲಸ ಮಾಡುತ್ತಿದ್ದಾಳೆ. ಮಧ್ಯಮ ಸೋದರ ಅವಳನ್ನು ಕಂಡೊ
ಡನೆಯೇ ಹೇಳಿದ :
- “ ಈ ಹುಡುಗಿ ನನ್ನ ಹೆಂಡತಿಯಾದರೆ ಎಷ್ಟು ಚೆನ್ನ ! ಜೊತೆಗೆ ನನಗೆ ಸ್ವಂತ ಮಿಲ್ಲು, ಕೊಳ
ಇರುವುದೂ ಒಳ್ಳೆಯದು. ನಾನು ಮಿಲ್ಲಿನಲ್ಲಿ ಕುಳಿತು ಗೋಧಿ ಹಿಟ್ಟು ಮಾಡುತ್ತೇನೆ. ಸುಖದ
ತೃಪ್ತಿಯ ಬಾಳು ನಡೆಸಬಹುದು ! ”
ಮುದುಕ ಹೇಳಿದ :
“ ಅದಕ್ಕೇನಂತೆ , ಮಗು. ನಿನಗಿಷ್ಟವಾದರೆ ಅದು ಹಾಗೇ ಆಗುತ್ತೆ ! ”
ಅವರು ಮನೆಯ ಒಳ ಹೋದರು . ಹುಡುಗಿಯೊಂದಿಗೆ ಮಾತುಕತೆ ನಡೆಸಿದರು . ಸಂಭ್ರ
ಮದ ಮದುವೆಯ ಆಯಿತು. ಈಗ ಮಧ್ಯಮ ಸೋದರ ತನ್ನ ಎಳೆಯ ಹೆಂಡತಿಯೊಂದಿಗೆ
ಆ ಮನೆಯಲ್ಲೇ ಉಳಿದ. ಮುದುಕ ಅವನಿಗೆ ಹೇಳಿದ :
“ ಸರಿ , ಮಗು, ಸುಖದಿಂದ ಬಾಳು . ಆದರೆ ಋಜು ಮಾರ್ಗವನ್ನು ಮಾತ್ರ ಮರೆಯಬೇಡ. ”
ಅವರು - ಕಿರಿಯ ಸೋದರ ಮತ್ತು ಅವನ ಸಾಕು ತಂದೆ – ಮುಂದೆ ನಡೆದರು .ಹೋದರು ,
ಹೋದರು , ನೋಡುತ್ತಾರೆ - ಒಂದು ಬಡ ಗುಡಿಸಿಲು ಕಾಣುತ್ತೆ . ಅದರಿಂದ ಒಬ್ಬ ಹುಡುಗಿ
ಹೊರಬರುತ್ತಾಳೆ. ಉಷಸ್ಸಿನಂತೆ ಸೊಬಗಿನಿಂದ ಕೂಡಿದ್ದಾಳೆ. ಆದರೆ ಬಡವಿ , ಚಿಂದಿ ಬಟ್ಟೆ ತೊಟ್ಟಿ
ದಾಳೆ. ಅವಳನ್ನು ಕಂಡ ಕಿರಿಯ ಸೋದರ ಹೇಳುತ್ತಾನೆ:
“ ಈ ಹುಡುಗಿ ನನ್ನ ಹೆಂಡತಿಯಾದರೆ ಎಷ್ಟು ಚೆನ್ನ ! ನಾವು ಒಟ್ಟಿಗೆ ದುಡಿದು ಏನು ಸಂಪಾ
ದಿಸುತ್ತೇವೋ ಅದನ್ನು ನನಗಿಂತ ಬಡವರಾದವರೊಂದಿಗೆ ಹಂಚಿಕೊಂಡು ಬಾಳಬಹುದು. ”
ಮುದುಕ ಹೇಳಿದ:
“ ಅದು ನಿನ್ನಿಚ್ಛೆಯಾದರೆ, ಹಾಗೆಯೇ ಆಗಲಿ , ಮಗು ! ಆದರೆ ಋಜು ಮಾರ್ಗವನ್ನು
ಮಾತ್ರ ಮರೆಯಬೇಡ.”
ಅವನು ಮೂರನೆಯ ಸೋದರನ ವಿವಾಹವನ್ನೂ ನೆರವೇರಿಸಿ ತನ್ನ ದಾರಿ ಹಿಡಿದುಹೋದ.
ಹೀಗೆಮೂವರು ಸೋದರರೂ ಜೀವನ ನಡೆಸಿಕೊಂಡು ಹೋದರು . ಹಿರಿಯ ಮಗ ತುಂಬ
ಶ್ರೀಮಂತನಾದ, ತನಗಾಗಿ ಹೊಸ ಮನೆ ಕಟ್ಟಿಕೊಂಡ. ಬೇಕಾದಷ್ಟು ಚಿನ್ನ ಗುಡ್ಡೆ ಹಾಕಿದ. ಅವನ
ಯೋಚನೆಯಲ್ಲಿ ಇನ್ನಷ್ಟು ಮತ್ತಷ್ಟು ಚಿನ್ನ ಗುಡ್ಡೆ ಹಾಕಬೇಕು ಅನ್ನುವುದಷ್ಟೆ ಆಗಿತ್ತು . ಬಡವರಿಗೆ
ಸಹಾಯ ಮಾಡುವ ಮಾತಿನ ಸೊಲ್ಲೇ ಇಲ್ಲ. ಅವರನ್ನು ಕಂಡರೆ ಬೈದು ಅಟ್ಟುತ್ತಿದ್ದ !
ಮಧ್ಯಮ ಸೋದರನ ಏಳಿಗೆ ಪಡೆದ. ತನ್ನ ಮಿಲ್ಲಿನಲ್ಲಿ ಕೆಲಸ ಮಾಡಲು ಅನೇಕ ಕೆಲಸ
ಗಾರರನ್ನು ನೇಮಿಸಿಕೊಂಡ . ತಾನೇ ಸ್ವಲ್ಪವೂ ಕೆಲಸ ಮಾಡುತ್ತಿರಲಿಲ್ಲ . ಸದಾ ಮಲಗಿರುವುದು ,
ತಿನ್ನುವುದು, ಕುಡಿಯುವುದು, ಆಜ್ಞಾಪಿಸುವುದು ಅಷ್ಟೆ .
- ಕಿರಿಯ ಸೋದರ ಸರಳ ಸಾಮಾನ್ಯ ಬಾಳುವೆ ನಡೆಸುತ್ತಿದ್ದ. ಮನೆಯಲ್ಲಿ ಏನಾದರೂ ಇದ್ದರೆ
ಇತರರೊಂದಿಗೆ ಹಂಚಿಕೊಂಡು ಅನುಭೋಗಿಸುವುದು . ಏನೂ ಇಲ್ಲದಿದ್ದರೆ , ಪರವಾಗಿಲ್ಲ ಬೇಡ
ಅಂದುಕೊಳ್ಳುತ್ತಿದ್ದ. ಸ್ವಲ್ಪವೂ ಅಸೂಯೆ ಪಡುತ್ತಿರಲಿಲ್ಲ.
ಬಿಳಿ ಗಡ್ಡದ ಮುದುಕ, ಆ ಸಾಕು ತಂದೆ, ಜಗತ್ತಿನಲ್ಲಿ ಸುತ್ತುತ್ತ ಹೋದ. ಕೊನೆಗೊಮ್ಮೆ
ತನ್ನ ಸಾಕು ಮಕ್ಕಳು ಹೇಗೆ ಬಾಳುತ್ತಿದ್ದಾರೆ. ಖಜು ಮಾರ್ಗ ಬಿಟ್ಟು ಹೋಗಿಲ್ಲ ತಾನೆ, ಎಂದು
ನೋಡ ಬಯಸಿದ. ಅವನು ಮುದುಕ ಭಿಕ್ಷುಕನ ಹಾಗೆ ವೇಷ ಮರೆಸಿಕೊಂಡು ಚಿಂದಿ ಬಟ್ಟೆ
ಉಟ್ಟು ಹಿರಿಯ ಮಗನ ಬಳಿಗೆ ಹೋದ. ಅಂಗಳಕ್ಕೆ ಹೋಗಿತಗ್ಗಿದ ನಡುಗುವ ಧ್ವನಿಯಲ್ಲಿಕೇಳಿದ:
“ ಈ ಮುದುಕ ಭಿಕ್ಷುಕನಿಗೆ ಒಂದಿಷ್ಟು ಏನಾದರೂ ಭಿಕ್ಷೆ ಕೊಡುವಿರಾ ? ”
ಮಗ ಹೇಳಿದ:
“ನೀನೇನೂ ಅಷ್ಟು ಮುದುಕನಲ್ಲ. ಭಿಕ್ಷೆ ಬೇಡೋಕೆ ನಾಚಿಕೆಯಾಗೊಲ್ವೆ ! ಬೇಕಾದರೆ ಕೆಲಸ
ಮಾಡು ! ನಾನೇ ಈಚೆಗಷ್ಟೇ ನನ್ನ ಕಾಲ ಮೇಲೆ ನಿಲ್ಲುವಂತಾಗಿದ್ದೇನೆ. ಹೋಗು, ಹೋಗಾಚೆ !”
ಆದರೆ ಅವನ ಬಳಿ ಸಂಪತ್ತು ಪೆಟ್ಟಿಗೆಗಳಲ್ಲಿ ತುಂಬಿ ತುಳುಕುತ್ತಿತ್ತು . ಹೊಸ ಮನೆಗಳನ್ನು
ಕಟ್ಟಿಕೊಂಡಿದ್ದ , ಉಗ್ರಾಣದ ತುಂಬ ಸಾಮಾನುಗಳಿದ್ದವು, ತಿನ್ನಲು ಬೇಕಾದಷ್ಟು ಆಹಾರವಿತ್ತು .
ದುಡ್ಡಂತೂ ಎಣಿಸಲಾಗದಷ್ಟಿತ್ತು . ಆದರೂ ಬಡವರಿಗೆ ಕಿಂಚಿತ್ತೂ ಸಹಾಯ ಮಾಡುತ್ತಿರಲಿಲ್ಲ !
ಮುದುಕ ಅವನಿಂದ ಹೊರಟ . ಒಂದು ವೆರ್ಸ್ಟ್ ದೂರಹೋಗಿ ತನ್ನ ಸಾಕು ಮಗನ ಮನೆ
ಹಾಗೂ ಹೊಲದ ಕಡೆಗೊಮ್ಮೆ ತಿರುಗಿ ನೋಡಿದ.ಕೂಡಲೇ ಅವೆಲ್ಲ ಸುಟ್ಟು ಬೂದಿಯಾದವು!
ಮುದುಕ ಮಧ್ಯಮ ಸೋದರನ ಬಳಿಗೆ ಹೋದ. ಹೋಗಿನೋಡುತ್ತಾನೆ - ಅವನ ಮನೆ,
ಮಿಲ್ಲು, ಕೊಳ, ಹೊಲ, ಎಲ್ಲ ಚೆನ್ನಾಗಿವೆ. ಅವನು ಮಿಲ್ನಲ್ಲಿ ಕುಳಿತಿದ್ದ. ಮುದುಕ ಬಾಗಿ ನಡು
ಗುವ ಧ್ವನಿಯಲ್ಲಿ ಕೇಳಿದ :
“ ಪುಣ್ಯವಂತರೇ , ನನಗೆ ಒಂದು ಹಿಡಿ ಹಿಟ್ಟು ಕೊಡ್ತೀರ? ನಾನೊಬ್ಬ ಮುದಿ ಭಿಕ್ಷುಕ.
ತಿನ್ನಲು ಏನೂ ಇಲ್ಲ.”
- “ ನನಗೇ ಸಾಕಷ್ಟಿಲ್ಲ, ನಿನಗೆಂಥದು ಕೊಡಲಿ ! ನಿನ್ನಂಥ ಅಲೆಮಾರಿಗಳು ಎಷ್ಟು ಮಂದಿಯೋ !
ನಿಮಗೆಲ್ಲ ಕೊಟ್ಟು ಪೂರೈಸುವುದು ಎಲ್ಲಿ ಸಾಧ್ಯ ? ” ಅವನೆಂದ.
ಮುದುಕ ಅವನಿಂದಲೂ ಹೊರಟ . ಸ್ವಲ್ಪ ದೂರ ಹೋಗಿ ಹಿಂದಿರುಗಿ ನೋಡಿದ - ಅಲ್ಲಿದ್ದ
ಮನೆ ಮಿಲ್ಲು ಎಲ್ಲ ಹೇಗೆ ಹೊತ್ತಿಕೊಂಡು ಉರಿದು ಬೂದಿಯಾದವು!
ಇನ್ನೂ ಭಿಕ್ಷುಕನ ವೇಷದಲ್ಲಿದ್ದಂತೆಯೇ ಮುದುಕ ಕಿರಿಯ ಮಗನ ಬಳಿಗೆ ಹೋದ. ಅಲ್ಲಿ
ಕಿರಿಯ ಮಗ ಬಡತನದಲ್ಲಿ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದ. ಚಿಕ್ಕದಾಗಿದ್ದರೂ ಮನೆ ಚೊಕ್ಕಟ
ವಾಗಿತ್ತು .
“ ಸಜ್ಜನರೇ , ಈ ಮುದುಕ ಭಿಕ್ಷುಕನಿಗೆ ಒಂದು ತುಂಡು ರೊಟ್ಟಿ ಕೊಡುತ್ತೀರ? ”
ಕಿರಿಯ ಸೋದರ ಅವನಿಗೆ ಹೇಳುತ್ತಾನೆ:
“ ಮನೆಯ ಒಳಗೆ ಹೋಗು, ಅಜ್ಜ , ಅಲ್ಲಿ ನಿನಗೆ ಊಟ ಹಾಕ್ತಾರೆ. ದಾರಿಗೆ ಬುತ್ತಿಯನ್ನೂ
ಕಟ್ಟಿ ಕೊಡ್ತಾರೆ.”
ಮುದುಕ ಮನೆಯ ಒಳಗೆ ಹೋದ. ಮನೆಯೊಡತಿ ಅವನನ್ನು ನೋಡಿದಳು - ಅವನ
ಬಟ್ಟೆ ಎಲ್ಲ ಎಷ್ಟು ಚಿಂದಿಚಿಂದಿಯಾಗಿದೆ ! ತಕ್ಷಣವೇ ಒಳಗಿನಿಂದ ಹೊಸ ಬಟ್ಟೆ ತಂದುಕೊಟ್ಟಳು.
ಅವನು ಅದನ್ನು ಉಟ್ಟುಕೊಂಡ. ಅವನು ಈ ಬಟ್ಟೆ ತೊಡುತ್ತಿದ್ದಾಗ ಅವನ ಎದೆಯ ಮೇಲೆ
ಒಂದು ದೊಡ್ಡ ಗಾಯ ಇದ್ದುದನ್ನು ಮನೆಯೊಡತಿಯ ಅವಳ ಪತಿಯ ಕಂಡರು . ಕೂಡಲೇ
ಮುದುಕನನ್ನು ಕುರ್ಚಿಯ ಮೇಲೆಕೂರಿಸಿದರು . ಅವನಿಗೆ ಹೊಟ್ಟೆ ತುಂಬ ತಿನ್ನಲು ಕುಡಿಯಲು
ಕೊಟ್ಟರು. ಅನಂತರ ಅವನನ್ನು ಕೇಳಿದರು :
"ಹೇಳು, ಅಜ್ಜ , ನಿನ್ನ ಎದೆಯ ಮೇಲೆ ತುಂಬ ದೊಡ್ಡ ಗಾಯ ಇರುವಂತಿದೆಯಲ್ಲ.
ಅದು ಹೇಗಾಯಿತು ? ”
“ ಹೌದು, ನನ್ನ ಎದೆಯ ಮೇಲೆದೊಡ್ಡ ಗಾಯ ಇದೆ. ಅದರಿಂದ ನಾನು ಬೇಗನೆಯೇ ಸಾಯ
ಲಿದ್ದೇನೆ. ಇನ್ನು ನನಗೆ ಜೀವದಿಂದಿರಲು ಒಂದೇ ಒಂದು ದಿನ ಅಷ್ಟೆ ಉಳಿದಿರೋದು. ”
“ ಅಯ್ಯೋ , ಪಾಪ !” ಎಂದಳು ಹೆಂಡತಿ, “ ಈ ಗಾಯಕ್ಕೆ ಯಾವ ಮದ್ದೂ ಇಲ್ಲವೇ ? ”
“ಇದೆ ” ಎಂದ ಅವನು . “ ಒಂದು ಮದ್ದು ಇದೆ. ಅದನ್ನು ಯಾರು ಬೇಕಾದರೂ ಕೊಡ
ಬಹುದು. ಆದರೆ ಯಾರೂ ಕೊಡುತ್ತಿಲ್ಲ, ಅಷ್ಟೆ . ”
ಗಂಡ ಕೇಳಿದ:
“ ಯಾಕೆ ಕೊಡುತ್ತಿಲ್ಲ? ಹೇಳು, ಏನದು ಮದ್ದು ? ”
“ ಅದು ಬಹಳ ಕಷ್ಟದ್ದು ! ಯಾವುದೇ ಮನೆಯ ಮಾಲೀಕ ತನ್ನ ಮನೆಯನ್ನೂ ಅದರಲ್ಲಿ
ರುವ ಎಲ್ಲ ವಸ್ತುಗಳನ್ನೂ ಸುಟ್ಟು ಹಾಕಿ ಅದರಿಂದ ಬರುವ ಬೂದಿಯನ್ನು ನನ್ನ ಗಾಯಕ್ಕೆ ಹಚ್ಚಿ
ದರೆ ಆಗ ಗಾಯ ವಾಸಿಯಾಗುತ್ತೆ , ನಾನು ಇನ್ನಷ್ಟು ಕಾಲ ಬಾಳಬಹುದು. ”
ಕಿರಿಯ ಸೋದರ ಯೋಚನೆ ಮಾಡಿದ. ತುಂಬ ಹೊತ್ತು ಯೋಚನೆ ಮಾಡಿದ. ಆಮೇಲೆ
ಹೆಂಡತಿಯನ್ನು ಕೇಳಿದ: “ ಏನಂತೀಯ , ನೀನು ? ”
“ ನನಗೇನು ಅನಿಸುತ್ತೆಂದರೆ, ಮನೆಯನ್ನಾದರೆ ನಾವು ಇನ್ನೊಂದು ಕಟ್ಟಿಕೊಳ್ಳಬಹುದು .
ಮನುಷ್ಯ ಸತ್ತ ಮೇಲೆ ಮತ್ತೆ ಬದುಕಲಾರ ” ಎಂದಳು ಅವಳು.
“ಸರಿ, ಹಾಗೇ ಆಗಲಿ ” ಎಂದ ಅವಳ ಗಂಡ “ ಮಕ್ಕಳನ್ನೆಲ್ಲ ಹೊರಗೆ ಒಯ್ಯ . ”
ಅವರು ಮಕ್ಕಳನ್ನು ಹೊರಗೆ ಕಳುಹಿಸಿದರು . ತಾವೇ ಹೊರ ಬಂದರು . ತನ್ನ ಮನೆಯನ್ನೂ
ಸಂಪತ್ತನ್ನೂ ಸುಟ್ಟು ಹಾಕುವುದು ಕಿರಿಯ ಸೋದರನಿಗೆ ದುಃಖಕರವೇ ಆಗಿತ್ತು . ಆದರೆ ಆ ಭಿಕ್ಷು
ಕನ ಸ್ಥಿತಿ ಇನ್ನೂ ಹೆಚ್ಚು ದುಃಖಕರವಾಗಿತ್ತು . ಅವನು ಕೊಳ್ಳಿ ತೆಗೆದುಕೊಂಡು ಮನೆಗೆ ಬೆಂಕಿ
ಹಚ್ಚಿದ. ಮನೆ ಎಲ್ಲ ಸುಟ್ಟು ಬೂದಿಯಾಗಿ ಕೆಳಕ್ಕೆ ಬಿದ್ದಿತು. ಆದರೆ ನೋಡುತ್ತಾರೆ - ಅದರ
ಸ್ಥಳದಲ್ಲಿ ಒಂದು ಹೊಸ, ಬೆಳಕಿನಿಂದ ಕೂಡಿದ, ಎತ್ತರವಾದ ಮನೆ ನಿಂತಿದೆ !
ಅಜ್ಜ ನಿಂತು ತನ್ನ ಗಡ್ಡದೊಳಗೇ ಮುಸಿಮುಸಿ ನಗುತ್ತಿದ್ದ.
“ನೋಡು, ಮಗು, ನೀವುಮೂವರು ಸೋದರರಲ್ಲಿ ನೀನೊಬ್ಬನೇ ಋಜು ಮಾರ್ಗ ಬಿಟ್ಟು
ಅಡ್ಡ ಸರಿದಿಲ್ಲ, ಅನ್ನುವುದನ್ನು ನಾನೀಗ ಕಂಡೆ. ನೀನು ಯಾವತ್ತೂ ಸುಖ ಸಂತೋಷಗಳಿಂದ
ಬಾಳು ! ”
ಆಗ ಕಿರಿಯ ಸೋದರನಿಗೆ ತಿಳಿಯಿತು ಆ ಭಿಕ್ಷುಕ ತನ್ನ ಸಾಕು ತಂದೆ ಅಂತ. ಅವನನ್ನು
ಅಪ್ಪಿಕೊಳ್ಳಲು ಧಾವಿಸಿದ . ಆದರೆ ಆ ಮುದುಕ ಆಗಲೇ ಅಂತರ್ಧಾನನಾಗಿದ್ದ.