ಒಂದಾನೊಂದು ಕಾಲದಲ್ಲಿ ಇಬ್ಬರು ಸೋದರರು ವಾಸಿಸುತ್ತಿದ್ದರು . ಒಬ್ಬ ಬಡವ, ಇನ್ನೊಬ್ಬ
ಶ್ರೀಮಂತ , ಬಡವನ ಬಳಿ ಏನೇನೂ ಇರಲಿಲ್ಲ. ಮಕ್ಕಳಿಗೆ ಹಾಲು ಕೊಡಲೂ ಅವನಿಗೆ ಶಕ್ಯವಿರ
ಲಿಲ್ಲ. ಅವನ ದುಸ್ಥಿತಿಯನ್ನು ಕಂಡು ಶ್ರೀಮಂತ ಸೋದರ ಮರುಗಿದ. ಅವನಿಗಾಗಿ ಒಂದು ಹಸು
ವನ್ನು ಕೊಡುತ್ತ ಹೇಳಿದ:
“ ತಗೋ ಇದನ್ನು ಉಪಯೋಗಿಸಿಕೊ . ಇದಕ್ಕೆ ದುಡ್ಡನೂ ಕೊಡಬೇಡ. ಬದಲು ನನ್ನ
ಬಳಿ ಸ್ವಲ್ಪ ಕಾಲ ಕೆಲಸ ಮಾಡು.”
ಬಡವ ಸೋದರ ಶ್ರೀಮಂತ ಸೋದರನ ಬಳಿ ಕೆಲಸ ಮಾಡಿದ, ಸಾಲ ತೀರಿಸಿದ. ಆಗ
ಶ್ರೀಮಂತ ಸೋದರನಿಗೆ ಹಸು ಹೊರಟು ಹೋಯಿತಲ್ಲ ಎಂದು ದುಃಖವಾಯಿತು. ಅವನು
ಹೇಳಿದ :
“ ನನ್ನ ಹಸುವನ್ನು ನನಗೆ ಕೊಟ್ಟು ಬಿಡು. ”
ಬಡವ ಸೋದರ ಹೇಳಿದ: “ ಅಲ್ಲಪ್ಪ . ಅದಕ್ಕೆ ಬದಲು ನಾನು ನಿನ್ನ ಬಳಿ ಕೆಲಸ ಮಾಡಲಿ
ಲ್ಲವೇ ? ”
“ ಏನು ಮಹಾ ನೀನು ಮಾಡಿದ್ದು ಕೆಲಸ ! ಬೆಕ್ಕು ಅತ್ತ ಹಾಗೆ ! ನನ್ನ ಹಸು ನೋಡು,
ಎಷ್ಟು ಚೆನ್ನಾಗಿದೆ ! ಕೊಟ್ಟುಬಿಡು, ಕೊಟ್ಟುಬಿಡು ! ”
ಇಷ್ಟು ಕೆಲಸ ಮಾಡಿಯೂ ಫಲವಿಲ್ಲದೆ ಹೋಗುತ್ತದಲ್ಲ ಎಂದು ಬಡವ ಸೋದರನಿಗೆ
ದುಃಖವಾಯಿತು. ಅವನಿಗೆ ಹಸುವನ್ನು ಹಿಂದಿರುಗಿಸುವುದು ಇಷ್ಟವಾಗಲಿಲ್ಲ. ಅವರು ವ್ಯಾಜ್ಯ
ತೀರ್ಮಾನಕ್ಕಾಗಿ ಧಣಿಯ ಬಳಿ ಹೋದರು . ಇವರ ಜಗಳ ತೀರ್ಮಾನಿಸಲು, ಯಾರು ತಪ್ಪು
ಯಾರು ಸರಿ ಎಂದು ಕಂಡುಹಿಡಿಯಲು, ಧಣಿ ಯಾಕೆ ತಲೆ ಕೆಡಿಸಿಕೊಳ್ಳುತ್ತಾನೆ !
“ ಯಾರು ನನ್ನ ಒಗಟಿಗೆ ಸರಿಯಾದ ಉತ್ತರ ಹೇಳುತ್ತಾರೋ ಅವರಿಗೆ ಹಸು ” ಅವನೆಂದ.
“ಹೇಳಿ, ಮಹಾ ಸ್ವಾಮಿ ! ”
“ಕೇಳಿ: ಯಾವುದು ಈ ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಹೊಟ್ಟೆ ತುಂಬಿಸುವುದು , ಯಾವುದು
ಎಲ್ಲಕ್ಕಿಂತ ಹೆಚ್ಚು ವೇಗವಾಗಿ ಓಡುವುದು, ಯಾವುದು ಎಲ್ಲಕ್ಕಿಂತ ಹೆಚ್ಚು ಸುಖ ನೀಡುವುದು ?
ನಾಳೆ ಬನ್ನಿ - ಉತ್ತರ ಹೇಳಿ. ”
ಸೋದರರು ಮನೆಗಳಿಗೆ ಹಿಂದಿರುಗಿದರು . ಶ್ರೀಮಂತ ಸೋದರ ಯೋಚಿಸಿದ : “ ಅಯೋ ,
ಇದೆಂಥ ಒಗಟು ಇದು . ಇದು ಒಗಟು ಅಲ್ಲವೇ ಅಲ್ಲ ! ಹೊಟ್ಟೆ ತುಂಬಿಸೋದು ಹಂದಿ ಮಾಂಸ,
ಜೋರಾಗಿ ಓಡೋದು ಬೇಟೆ ನಾಯಿ , ಸುಖ ಕೊಡೋದು ಹಣ ! ಹಸು ನನ್ನದಾಗುತ್ತೆ ! ”
ಬಡವ ಸೋದರ ತನ್ನ ಮನೆಗೆ ಹೋದ. ಯೋಚನೆ ಮಾಡಿದ, ಮಾಡಿದ. ಉತ್ತರ ಹೊಳೆ
ಯಲೇ ಇಲ್ಲ. ತಲೆ ತಗ್ಗಿಸಿ ದುಃಖಿಸುತ್ತ ಕುಳಿತ. ಅವನಿಗೊಬ್ಬ ಮಗಳಿದ್ದಳು , ಮರಸ್ಯ ಅಂತ.
ಅವಳು ತಂದೆ ಮುಖ ಬಾಡಿದ್ದುದನ್ನು ಕಂಡು ಕೇಳಿದಳು :
“ ಏನಪ್ಪ , ಏನಾಯಿತು ? ಯಾಕೆ ಹೀಗೆ ದುಃಖಿಸುತ್ತ ಕುಳಿತೆ ? ಧಣಿ ಏನು ಹೇಳಿದರು ? ”
“ ಧಣಿ ನಮಗೆ ಭಾರಿ ಒಗಟನ್ನೇ ಕೊಟ್ಟಿದ್ದಾರೆ - ತಲೆ ತಿನ್ನುವಂತಹುದು. ”
“ ಏನದು ಒಗಟು ? ”
“ ಯಾವುದು ಎಲ್ಲಕ್ಕಿಂತ ಹೆಚ್ಚು ಹೊಟ್ಟೆ ತುಂಬಿಸುವುದು , ಯಾವುದು ಎಲ್ಲಕ್ಕಿಂತ ಹೆಚ್ಚು
ವೇಗವಾಗಿ ಓಡುವುದು, ಯಾವುದು ಎಲ್ಲಕ್ಕಿಂತ ಹೆಚ್ಚು ಸುಖ ನೀಡುವುದು , ಅಂತ ”
“ ಅಯ್ಯೋ , ಅಪ್ಪ ! ಇದಕ್ಕೆ ಯಾಕೆ ಹೀಗೆ ದುಃಖಿಸುತ್ತ ಕುಳಿತೆ ? ಎಲ್ಲಕ್ಕಿಂತ ಹೆಚ್ಚು ಹೊಟ್ಟೆ
ತುಂಬಿಸುವುದು ಭೂಮಿ ತಾಯಿ . ಅದೇ ಅಲ್ಲವೇ ನಮ್ಮನ್ನೆಲ್ಲ ಪೋಷಿಸುತ್ತಿರುವುದು , ನಮಗೆ
ತಿನ್ನಲು ಕುಡಿಯಲು ಕೊಡುತ್ತಿರುವುದು ? ಎಲ್ಲಕ್ಕಿಂತ ಹೆಚ್ಚು ವೇಗವಾಗಿ ಓಡುವುದೆಂದರೆ
ಮನಸ್ಸು . ಮನಸ್ಸಿನಲ್ಲಿ ಯೋಚಿಸಿಕೊಂಡು ನೀನು ಎಲ್ಲಿಗೆ ಬೇಕಾದರೂ ಕ್ಷಣ ಮಾತ್ರದಲ್ಲಿ ಹೋಗ
ಬಹುದು. ಎಲ್ಲಕ್ಕಿಂತ ಹೆಚ್ಚು ಸುಖ ಕೊಡುವುದೆಂದರೆ ನಿದ್ರೆ , ನಿದ್ರೆಯಲ್ಲಿ ಮನುಷ್ಯನಿಗೆ ಎಂಥ
ಸುಖ ಸಿಗುತ್ತೆ - ಅವನು ಎಲ್ಲವನ್ನೂ ತೊರೆಯುತ್ತಾನೆ, ಎಲ್ಲವನ್ನೂ ಮರೆಯುತ್ತಾನೆ. ”
“ ಹೌದಲ್ಲವೇ ? ನೀನು ಹೇಳಿದ್ದು ಸರಿ, ಮಗಳೇ ! ನಾನು ಇದನ್ನೇ ಧಣಿಯ ಮುಂದೆ
ಹೇಳೀನಿ. ”
ಮಾರನೆಯ ದಿನ ಇಬ್ಬರು ಸೋದರರೂ ಧಣಿಯ ಬಳಿಗೆ ಬಂದರು . ಧಣಿ ಕೇಳಿದ:
“ ಹುಂ , ಏನು ? ಒಗಟಿಗೆ ಉತ್ತರ ಕಂಡುಹಿಡಿದಿರಾ ? ”
ಶ್ರೀಮಂತ ಸೋದರ ಬೇಗ ಮುಂದೆ ಬಂದ. ತಾನೇ ಮೊದಲು ಉತ್ತರ ಹೇಳಿ ಹಸುವನ್ನು
ಗಿಟ್ಟಿಸಿಕೊಂಡು ಬಿಡಬೇಕು ಅಂತ. ಅವನು ಹೇಳಿದ :
“ ಎಲ್ಲಕ್ಕಿಂತ ಹೆಚ್ಚು ಹೊಟ್ಟೆ ತುಂಬಿಸುವುದು , ಧಣಿಗಳೇ , ನಿಮ್ಮ ರೊಪ್ಪದಲ್ಲಿರುವ ಹಂದಿ
ಗಳು , ಎಲ್ಲಕ್ಕಿಂತ ಹೆಚ್ಚು ವೇಗವಾಗಿ ಓಡುವುದು ನಿಮ್ಮ ಬೇಟೆನಾಯಿಗಳು , ಎಲ್ಲಕ್ಕಿಂತ ಹೆಚ್ಚು
ಸುಖ ನೀಡುವುದು ಹಣ. ”
“ಉಹೂಂ, ಉಹೂಂ, ಎಲ್ಲ ತಪ್ಪು ! ” ಎಂದ ಧಣಿ, “ ನಿನ್ನ ಉತ್ತರ ಏನು ? ”
“ ನಾನು ಹೇಳೋದು ಏನೂಂದರೆ, ಧಣಿಗಳೇ , ಭೂಮಿ ತಾಯಿಗಿಂತ ಹೆಚ್ಚು ಹೊಟ್ಟೆ
ತುಂಬಿಸೋದು ಬೇರೆ ಯಾವುದೂ ಇಲ್ಲ. ಅದೇ ಎಲ್ಲರನ್ನೂ ಪೋಷಿಸುತ್ತಿರುವುದು , ಎಲ್ಲರಿಗೂ
ತಿನ್ನಲು ಕುಡಿಯಲು ಕೊಡುತ್ತಿರುವುದು .”
“ ಭೇಷ್, ಭೇಷ್ ! ಸರಿಯಾಗಿ ಹೇಳಿದೆ. ಎಲ್ಲಕ್ಕಿಂತ ವೇಗವಾಗಿ ಹೋಗೋದು ಯಾವುದು ? ”
“ ಮನಸ್ಸು , ಮಹಾ ಸ್ವಾಮಿ , ಮನಸ್ಸಿನಲ್ಲಿ ಯೋಚಿಸಿಕೊಂಡು ನಾವು ಎಲ್ಲಿಗೆ ಬೇಕಾದರೂ
ಕ್ಷಣಮಾತ್ರದಲ್ಲಿ ಹೋಗಬಹುದು. ”
“ಸರಿಯಾಗಿ ಹೇಳಿದೆ ! ಎಲ್ಲಕ್ಕಿಂತ ಹೆಚ್ಚು ಸುಖ ಕೊಡೋದು ಯಾವುದು ? ”
“ನಿದ್ರೆ , ಮಹಾ ಸ್ವಾಮಿ , ನಿದ್ರೆಯಲ್ಲಿ ಮನುಷ್ಯನಿಗೆ ಎಂಥ ಸುಖ ಸಿಗುತ್ತೆ - ಅವನು ಎಲ್ಲ
ವನ್ನೂ ತೊರೆಯುತ್ತಾನೆ, ಎಲ್ಲವನ್ನೂ ಮರೆಯುತ್ತಾನೆ.”
“ ಎಲ್ಲ ಸರಿಯಾಗಿ ಹೇಳಿದೆ ! ” ಎಂದ ಧಣಿ, “ ಹಸು ನಿನ್ನದು. ಆದರೆ ಹೇಳು – ಉತ್ತರ
ಎಲ್ಲ ನೀನೇ ಕಂಡುಹಿಡಿದೆಯೋ , ಅಥವಾ ಬೇರೆ ಯಾರಾದರೂ ನಿನಗೆ ಸಹಾಯ ಮಾಡಿದರೋ ? ”
“ ಹೌದು, ಧಣಿಗಳೇ , ನನಗೊಬ್ಬ ಮಗಳಿದಾಳೆ , ಮರಸ್ಯ ಅಂತ. ಅವಳು ನನಗೆ ಹೇಳಿ
ಕೊಟ್ಟಳು.”
ಧಣಿಗೆ ಕೋಪ ಬಂತು .
“ ಹೌದಾ ? ನಾನು ಎಷ್ಟು ಬುದ್ದಿವಂತ. ಅವಳು ಒಬ್ಬ ಸಾಮಾನ್ಯ ಹುಡುಗಿ, ನನ್ನ ಒಗಟಿಗೆ
ಉತ್ತರ ಹೇಳಿಬಿಟ್ಟಳಲ್ಲ ! ತಾಳು , ತಾಳು ! ಇಲ್ನೋಡು ಇಲ್ಲಿ ಹತ್ತು ಬೇಯಿಸಿದ ಮೊಟ್ಟೆಗಳಿವೆ.
ಇವನ್ನು ನಿನ್ನ ಮಗಳಿಗೆ ಕೊಡು. ಅವಳು ಇವುಗಳ ಮೇಲೆ ಒಂದುಕೋಳಿಕೂರಿಸಿ ಒಂದೇ ರಾತ್ರಿ
ಯಲ್ಲಿ ಇವುಗಳಿಂದ ಹತ್ತು ಕೋಳಿ ಮರಿಗಳು ಹೊರಬರುವಂತೆ ಮಾಡಬೇಕು, ಅವು ದೊಡ್ಡ
ದಾಗಿ ಬೆಳೆಯಬೇಕು , ಅವಳು ಅವುಗಳಲ್ಲಿ ಮೂರನ್ನು ಬೆಂಕಿಯಲ್ಲಿ ಸುಟ್ಟು ನನ್ನ ಬೆಳಗಿನ ಉಪಾ
ಹಾರಕ್ಕೆ ತಿನ್ನಲು ಸಿದ್ದವಾಗಿ ಇರಿಸಬೇಕು. ನಾನು ಬೆಳಿಗ್ಗೆ ಎದ್ದ ಕೂಡಲೇ ನೀನು ಅದನ್ನು ನನಗೆ
ತಂದು ಕೊಡಬೇಕು. ನಾನು ಕಾಯುತ್ತಿರುತ್ತೀನಿ. ಇದನ್ನು ಮಾಡದೆ ಹೋದರೆ ನಿನಗೇ ಕೇಡು. ”
ಬಡವ ಮನೆಗೆ ಹೋದ, ಅಳುತ್ತ ಕೂತ. ಮಗಳು ಬರುತ್ತಾಳೆ, ಕೇಳುತ್ತಾಳೆ:
“ ಯಾಕಪ್ಪ ಅಳುತಿದೀಯ ? ”
“ ಅಳದೆ ಏನು ಮಾಡಲಿ , ಮಗಳೆ ! ನೋಡು ಧಣಿ ನಿನಗೆ ಈ ಹತ್ತು ಬೇಯಿಸಿದ ಮೊಟ್ಟೆ
ಗಳನ್ನು ಕೊಟ್ಟಿದಾರೆ. ನೀನು ಇವುಗಳ ಮೇಲೆಕೋಳಿಕೂರಿಸಿ ಒಂದೇ ರಾತ್ರಿಯಲ್ಲೇ ಈ ಮೊಟ್ಟೆ
ಗಳೆಲ್ಲ ಒಡೆದು ಮರಿಗಳು ಹೊರಬರುವಂತೆ ಮಾಡಬೇಕಂತೆ, ಅವು ದೊಡ್ಡದಾಗಿ ಬೆಳೀಬೇಕಂತೆ,
ಆಮೇಲೆ ನೀನು ಅವುಗಳಲ್ಲಿ ಮೂರನ್ನು ಸುಟ್ಟು ಭಕ್ಷ ತಯಾರಿಸಬೇಕಂತೆ, ನಾನು ನಾಳೆ ಬೆಳಿಗ್ಗೆ
ಅದನ್ನು ಅವರ ಉಪಾಹಾರಕ್ಕೆ ತಗೊಂಡು ಹೋಗಿಕೊಡಬೇಕಂತೆ . ”
ಹುಡುಗಿ ನಸುನಕ್ಕು , ಅಂಬಲಿ ತುಂಬಿದ ಮಡಕೆಯೊಂದನ್ನು ತೆಗೆದುಕೊಂಡು ಹೇಳಿದಳು :
“ ಅಪ್ಪ , ಈ ಅಂಬಲಿಯ ಮಡಕೆಯನ್ನು ಧಣಿಗಳಿಗೆ ತೆಗೆದುಕೊಂಡು ಹೋಗಿಕೊಡು.
ಅವರು ಒಂದು ತುಂಡು ಭೂಮಿಯನ್ನು ಉತ್ತು ಅದರಲ್ಲಿ ಈ ಅಂಬಲಿಯನ್ನು ಬಿತ್ತಿ ,ಗೋಧಿ ಬೆಳೆ
ತೆಗೆದು , ಕಟಾವು ಮಾಡಿ, ಕಾಳು ಒಕ್ಕಿ , ಅವರು ಕಳಿಸಿಕೊಟ್ಟಿರುವ ಈ ಮೊಟ್ಟೆಗಳು ಒಡೆದು
ಮರಿಯಾದ ಕೂಡಲೇ ಅವಕ್ಕೆ ತಿನ್ನಲು ಕೊಡಲು ಅನುವಾಗುವಂತೆ ಆ ಕಾಳುಗಳನ್ನು ನನಗೆ
ಕಳಿಸಿಕೊಡಬೇಕು , ಅಂತ ಹೇಳು. ”
ಬಡವ ಸೋದರ ಮಗಳು ಹೇಳಿದಂತೆಯೇ ಮಾಡಿದ. ಅಂಬಲಿಯ ಮಡಕೆಯನ್ನು ಧಣಿಗೆ
ತಲುಪಿಸಿ ಮಗಳು ಹೇಳಿದಂತೆಯೇ ಪದ- ಪದ ಎಲ್ಲವನ್ನೂ ಹೇಳಿದ .
ಧಣಿ ಆ ಅಂಬಲಿಯನ್ನು ನೋಡಿದ, ಮತ್ತೆ ನೋಡಿದ. ಆಮೇಲೆ ಅದನ್ನು ತನ್ನ ನಾಯಿಗಳ
ಮುಂದೆ ಚೆಲ್ಲಿದ. ಅನಂತರ ಅವನು ಎಲ್ಲಿಂದಲೋ ಅಗಸೆ ಗಿಡದ ಒಂದು ದಿಂಡನ್ನು ತಂದು ಆ
ಬಡವ ಸೋದರನ ಮುಂದೆ ಹಿಡಿದು ಹೇಳಿದ:
“ ಈ ದಿಂಡನ್ನು ನಿನ್ನ ಮಗಳಿಗೆ ಕೊಡು. ಅವಳಿಗೆ ಹೇಳು, ಇದನ್ನು ನೆನಸಿ, ಒಣಗಿಸಿ ,
ಹಿಂಜಿ ನೂಲು ತೆಗೆದು ಅದರಿಂದ ನೂರು ಗಜ ಬಟ್ಟೆ ನೇಯಬೇಕು, ಅಂತ ... ಮಾಡದೆ ಇದ್ದರೆ
ನಿನಗೆ ಕಷ್ಟ ತಪ್ಪದು.”
ಬಡವ ಸೋದರ ಮನೆಗೆ ಹೋಗಿ ಮತ್ತೆ ಅಳುತ್ತ ಕೂತ. ಮಗಳು ಬಂದು ಕೇಳುತ್ತಾಳೆ:
“ ಯಾಕಪ್ಪ ಅಳುತಿದೀಯ ? ”
“ನೋಡಮ್ಮ , ಧಣಿಗಳು ನಿನಗೆ ಈ ಅಗಸೆ ಗಿಡದ ದಿಂಡು ಕಳಿಸಿಕೊಟ್ಟಿದಾರೆ. ನೀನು ಇದನ್ನು
ನೆನಸಿ, ಒಣಗಿಸಿ, ಹಿಂಜಿ ನೂಲು ತೆಗೆದು ಅದರಿಂದ ನೂರು ಗಜ ಬಟ್ಟೆ ನೇಯಬೇಕಂತೆ .”
ಮರಸ್ಯ ಒಂದು ಚಾಕುವನ್ನು ತೆಗೆದುಕೊಂಡು ಹೊರ ಹೋಗಿ ಒಂದು ಗಿಡದಿಂದ ಅದರ
ಅತ್ಯಂತ ತೆಳುವಾದ ರೆಂಬೆಯನ್ನು ಕಡಿದುಕೊಂಡು ಬಂದಳು. ಅದನ್ನು ಅಪ್ಪನಿಗೆ ಕೊಟ್ಟು ಹೇಳಿ
ದಳು :
- “ ಅಪ್ಪ , ಈ ರೆಂಬೆಯನ್ನು ಧಣಿಗಳಿಗೆ ಕೊಟ್ಟು ಇದರಿಂದ ಒಂದು ಹಿಕ್ಕಣಿಕೆ ಹಾಗೂ ಹಂಜಿ
ಗೋಲನ್ನು ಮಾಡಿಕೊಡುವಂತೆ ಹೇಳು. ಅದರ ಸಹಾಯದಿಂದ ನಾನು ನೂಲು ನೂತು ಅವ
ರಿಗೆ ಬಟ್ಟೆ ನೇಯು ಕೊಡುತ್ತೇನೆ.”
ಬಡವಸೋದರ ರೆಂಬೆಯನ್ನು ಧಣಿಗೆ ಕೊಂಡೊಯ್ದು ಕೊಟ್ಟು ಮಗಳು ಏನು ಹೇಳಿದಳೋ
ಅದೆಲ್ಲವನ್ನೂ ಹೇಳಿದ. ಧಣಿ ನೋಡಿದ, ನೋಡಿದ, ಆ ರೆಂಬೆಯನ್ನು ಪಕ್ಕಕ್ಕೆ ಎಸೆದ. ಆಮೇಲೆ
ಯೋಚಿಸಿದ : “ಓಹೋ , ಇವಳನ್ನು ಮೋಸಗೊಳಿಸುವುದು ಸಾಧ್ಯವಿಲ್ಲ. ಇವಳು ಎಲ್ಲರಂತಲ್ಲ
ಎಂದು ಕಾಣಿಸುತ್ತೆ ! ” ಆಮೇಲೆ ತುಂಬ ತುಂಬ ಯೋಚನೆ ಮಾಡಿ ಆ ಬಡವನಿಗೆ ಹೇಳಿದ :
“ಹೋಗಿ ಹೇಳು ನಿನ್ನ ಮಗಳಿಗೆ : ಅವಳು ನನ್ನ ಮನೆಗೆ ಅತಿಥಿಯಾಗಿ ಬರಬೇಕು. ಹೇಗೆ
ಅಂದರೆ, ನಡೆದುಕೊಂಡ ಬರಬಾರದು, ಸವಾರಿಮಾಡಿಕೊಂಡೂ ಬರಬಾರದು, ಬರಿಗಾಲಲ್ಲೂ
ಇರಬಾರದು ಬೂಟನ್ನೂ ತೊಟ್ಟಿರಬಾರದು, ನನಗಾಗಿ ಕಾಣಿಕೆ ತರಲೂ ಬೇಕು ತರದೆ ಇರಲೂ
ಬೇಕು. ಅವಳು ಇದನ್ನು ಮಾಡದೆ ಹೋದರೆ ಅವಳಿಗೆ ಕೇಡು ತಪ್ಪದು.”
ಅಪ್ಪ ಮನೆಗೆ ಹೋಗಿ ಅಳುತ್ತ ಕುಳಿತ. ಮಗಳು ಬಂದಳು . ಅವನು ಅವಳಿಗೆ ಹೇಳಿದ :
“ ಈಗ ಏನು ಮಾಡುತಿ, ಮಗಳೇ ? ಧಣಿ ಹೀಗೆ ಆಜ್ಞೆ ಮಾಡಿದ್ದಾರೆ. ಹಾಗೆಂದು ಅವನು
ಅವಳಿಗೆ ಎಲ್ಲವನ್ನೂ ಹೇಳಿದ.
ಮರಸ್ಯ ಹೇಳಿದಳು : "ನೀನೇನೂ ದುಃಖಿಸಬೇಡ, ಅಪ್ಪ , ಎಲ್ಲ ಸರಿಯಾಗಿ ಆಗುತ್ತೆ .
ಹೋಗಿ ನನಗೆ ಒಂದು ಜೀವಂತ ಮೊಲವನ್ನು ಕೊಂಡುಕೊಂಡು ಬಾ .”
ಅಪ್ಪ ಹೋಗಿಜೀವಂತ ಮೊಲವನ್ನು ಕೊಂಡು ತಂದ . ಮರಸ್ಯ ತಕ್ಷಣವೇ ಧಣಿಯ ಮನೆಗೆ
ಹೊರಡಲು ಸಿದ್ದಳಾಗ ತೊಡಗಿದಳು . ಮೊದಲು ಒಂದು ಕಾಲಿಗೆ ಒಂದು ಹರಕು ಬೂಟು
ತೊಟ್ಟಳು, ಇನ್ನೊಂದು ಕಾಲನ್ನು ಬರಿದಾಗಿಯೇ ಬಿಟ್ಟಳು. ಒಂದು ಜಾರುಬಂಡಿ
ತಂದು ಅದಕ್ಕೆ ಒಂದು ಹೊತ ಕಟ್ಟಿದಳು. ಆಮೇಲೆ ಒಂದು ಗುಬ್ಬಚ್ಚಿಯನ್ನು ಹಿಡಿದು ಇಟ್ಟು
ಕೊಂಡಳು . ಇಷ್ಟು ಮಾಡಿದ ಮೇಲೆ ಅವಳು ಮೊಲವನ್ನು ಕಂಕುಳಲ್ಲಿ ಇರಿಸಿಕೊಂಡಳು. ಗುಬ್ಬಚ್ಚಿ
ಯನ್ನು ಕೈಯಲ್ಲಿ ಹಿಡಿದುಕೊಂಡಳು . ಒಂದು ಕಾಲನ್ನು ಜಾರುಬಂಡಿಯಲ್ಲಿರಿಸಿದಳು. ಇನ್ನೊಂದನ್ನು
ನೆಲದ ಮೇಲಿರಿಸಿದಳು - ಒಂದು ಕಾಲನ್ನು ಹೋತ ಒಯ್ದರೆ ಇನ್ನೊಂದು ನಡೆದುಕೊಂಡು
ಹೋಗುತ್ತೆ . ಈ ರೀತಿ ಅವಳು ಧಣಿಯ ಮನೆಗೆ ಬಂದಳು . ಅಂಗಳದಲ್ಲೇ ಅವಳನ್ನು ಕಂಡ ಧಣಿ
ತಾನು ಸೋತೆನೆಂದು ತಿಳಿದ. ಅವನಿಗೆಕೋಪಬಂದಿತು . ತನ್ನ ಸೇವಕರಿಗೆ ಕೂಗಿ ಹೇಳಿದ :
“ ನಾಯಿಗಳನ್ನು ಅವಳ ಮೇಲೆ ಛಬಿಡಿ ! ”
ಅವರು ಅವಳನ್ನು ಬೇಟೆನಾಯಿಗಳಿಂದ ನಾಶಗೊಳಿಸಲು ಯತ್ನಿಸಿದರು . ಆದರೆ ಅವಳು
ಮೊಲವನ್ನು ಹೊರ ಬಿಟ್ಟಳು. ಬೇಟೆನಾಯಿಗಳು ಅವಳ ಮೇಲೆಬೀಳುವ ಬದಲು ಆ ಮೊಲವನ್ನು
ಅಟ್ಟಿಸಿಕೊಂಡು ಹೋದವು. ಆಗ ಅವಳು ಮಹಲಿನೊಳಗೆ ಧಣಿಯ ಬಳಿಗೆ ಹೋಗಿಬಾಗಿ ವಂದಿಸಿ
ಹೇಳಿದಳು :
“ನೋಡಿ, ಧಣಿಗಳೇ , ನಿಮ್ಮಲ್ಲಿಗೆ ಅತಿಥಿಯಾಗಿ ಬಂದಿದ್ದೇನೆ. ನಿಮಗೆ ಈ ಗುಬ್ಬಚ್ಚಿಯನ್ನು
ಕಾಣಿಕೆಯಾಗಿ ತಂದಿದ್ದೇನೆ.”
ಧಣಿ ಗುಬ್ಬಚ್ಚಿಯನ್ನು ತೆಗೆದುಕೊಳ್ಳ ಬಯಸಿ ಕೈ ನೀಡಿದ. ಅವಳು ಅದನ್ನು ಬಿಟ್ಟು ಬಿಟ್ಟಳು.
ಓಹ್, ಅದು ಪುರ್ ಎಂದು ತೆರೆದ ಕಿಟಕಿಯಿಂದ ಆಚೆಗೆ ಹಾರಿ ಹೋಯಿತು.
ಅದೇ ಸಮಯಕ್ಕೆ ಸರಿಯಾಗಿ ಇಬ್ಬರು ರೈತರು ಧಣಿಯ ಬಳಿಗೆ ತಮ್ಮ ಜಗಳದ ನ್ಯಾಯ
ತೀರ್ಮಾನಕ್ಕಾಗಿ ಬಂದರು . ಧಣಿ ಅವರನ್ನು ಕೇಳಿದ:
“ ಏನು ಬಂದಿರಿ, ಸಜ್ಜನರೇ ? ಏನು ಸಮಾಚಾರ ? ”
ಅವರಲ್ಲೊಬ್ಬ ಹೇಳಿದ: “ಅದು ಹೀಗೆ, ಮಹಾ ಸ್ವಾಮಿಗಳೇ ! ನಾವಿಬ್ಬರೂ ಹೊಲದಲ್ಲೇ
ಮಲಗಿ ರಾತ್ರಿ ಕಳೆದೆವು. ಬೆಳಿಗ್ಗೆ ಏಳುತ್ತಲೇ ನೋಡುತ್ತೇವೆ- ನನ್ನ ಕುದುರೆ ಮರಿ
ಹಾಕಿದೆ ! ”
ಎರಡನೆಯ ವ್ಯಕ್ತಿ ಹೇಳಿದ : “ ಅದು ಸುಳ್ಳು , ಮಹಾಪ್ರಭು ! ಮರಿ ಹಾಕಿದುದು ನನ್ನ
ಕುದುರೆ , ನೀವೇ ತೀರ್ಮಾನ ಹೇಳಿ, ಧಣಿಗಳೇ ! ”
ಧಣಿ ತುಂಬ ತುಂಬ ಯೋಚನೆ ಮಾಡಿದ. ಆಮೇಲೆ ಹೇಳಿದ:
ಕುದುರೆಮರಿಯನ್ನೂ ನಿಮ್ಮ ಎರಡು ಕುದುರೆಗಳನ್ನೂ ಇಲ್ಲಿಗೆ ಕರತನ್ನಿ . ಯಾವ ಕುದುರೆಯ
ಬಳಿಗೆ ಮರಿ ಓಡಿ ಹೋಗುತ್ತೊ ಅದೇ ಅದರ ತಾಯಿ .”
- ಎರಡು ಕುದುರೆಗಳನ್ನೂ ತಂದು ದೂರದೂರದಲ್ಲಿ ಕಟ್ಟಿ ಹಾಕಿದರು . ಆಮೇಲೆಮರಿಯನ್ನು
ತಂದು ಅವುಗಳ ಮಧ್ಯದಲ್ಲಿರಿಸಿದರು . ಇಬ್ಬರು ರೈತರೂ ಮರಿ ತಮ್ಮ ತಮ್ಮ ಕುದುರೆಯ
ಬಳಿಯೇ ಹೋಗಲೆಂದು ಆ ಮರಿಯನ್ನು ಎಷ್ಟು ಪುಸಲಾಯಿಸಿದರು ! ಆದರೆ ಆ ಮರಿಗೆ ಯಾವ
ಕಡೆಗೆ ಹೋಗಬೇಕೆಂಬುದೇ ತಿಳಿಯದಾಯಿತು. ಬೇರೆ ಯಾವುದೋ ಕಡೆಗೆ ಓಡಿ ಹೋಯಿತು.
ಎಲ್ಲರೂ ಗೊಂದಲಕ್ಕೊಳಗಾದರು . ಈಗೇನು ಮಾಡುವುದು ? ಆ ಮರಿ ಯಾರದೆಂದು ಹೇಗೆ
ತೀರ್ಮಾನಿಸುವುದು ? ಆಗ ಮರಸ್ಯ ಮುಂದೆ ಬಂದು ಹೇಳಿದಳು :
“ನೀವು ಹೀಗಲ್ಲ , ಬೇರೆ ರೀತಿಯಲ್ಲಿ ಮಾಡಿ . ಕುದುರೆಮರಿಯನ್ನು ಒಂದು ಜಾಗದಲ್ಲಿ
ಕಟ್ಟಿ ಹಾಕಿ, ಎರಡು ಕುದುರೆಗಳನ್ನೂ ಬಿಚ್ಚಿ ಬಿಟ್ಟು ಬಿಡಿ . ಯಾವ ಕುದುರೆ ಮರಿಯ ಬಳಿಗೆ
ಓಡಿ ಹೋಗುತ್ತದೋ ಅದೇ ಅದರ ತಾಯಿ . ”
ಹಾಗೆಯೇ ಮಾಡಲಾಯಿತು. ಕುದುರೆಗಳನ್ನು ಬಿಚ್ಚಿ ಬಿಡಲಾಯಿತು. ಕುದುರೆಮರಿಯನ್ನು
ತಂದು ಅವುಗಳ ಮುಂದೆ ಕಟ್ಟಿ ಹಾಕಲಾಯಿತು. ಒಂದು ಕುದುರೆ ಅದರ ಬಳಿಗೆ ಓಡಿ
ಹೋಯಿತು. ಇನ್ನೊಂದು ನಿಂತಲ್ಲೇ ನಿಂತಿದ್ದಿತು.
- ಈಗ ಧಣಿಗೆ ತಿಳಿಯಿತು ಅವಳು ಎಂತಹ ಬುದ್ದಿವಂತೆ ಅಂತ. ಅವಳನ್ನು ಯಾವ ರೀತಿ
ಯಲ್ಲೂ ಅವನುಸೋಲಿಸದಾಗಿದ್ದ. ಅವಳನ್ನು ಶಾಂತಿಯಿಂದ ಮನೆಗೆ ಹೋಗಲು ಬಿಟ್ಟುಕೊಟ್ಟ .
Related